Daily Horoscope: ಮೇಷಕ್ಕೆ ಶಿಸ್ತಿದ್ದರೆ ಸಮೃದ್ಧಿ, ಕಟಕಕ್ಕೆ ಅಭಿವೃದ್ಧಿ

By Suvarna NewsFirst Published Feb 11, 2022, 5:00 AM IST
Highlights

11 ಫೆಬ್ರವರಿ 2022, ಶುಕ್ರವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕನ್ಯಾ ರಾಶಿಗೆ ಮನೋದ್ವೇಗ, ನಿಮ್ಮ ರಾಶಿಫಲ ಏನಿರಲಿದೆ ನೋಡಿ..

ಮೇಷ(Aries): ನಿಮ್ಮ ವ್ಯಕ್ತಿತ್ವ ಇತರರ ಮೇಲೆ ಪ್ರಭಾವ ಬೀರುತ್ತದೆ ನಿಜ. ಅದಕ್ಕಾಗಿ ನೀವು ಕೊಂಚ ಮುಂಚಿತವಾಗಿ ದಿನವನ್ನು ಯೋಜಿಸಬೇಕು. ಶಿಸ್ತು ತಪ್ಪಿದರೆ ನಿಮ್ಮ ಬೆಲೆ ಕಳೆದುಕೊಳ್ಳಲಿದ್ದೀರಿ. ಈ ವಿಷಯದಲ್ಲಿ ಎಚ್ಚರವಾಗಿರಿ. ಲಲಿತಾ ಸಹಸ್ರನಾಮ ಪಠಣ ಮಾಡಿ.

ವೃಷಭ(Taurus): ಇತ್ತೀಚೆಗೆ ಸಂಗಾತಿಯನ್ನು ಹುಡುಕಿಕೊಂಡವರು, ಅವರ ಜೊತೆ ಹೆಚ್ಚಿನ ಸಮಯ ಕಳೆಯದಿದ್ದರೆ ನೋವು ಅನುಭವಿಸಬೇಕಾಗುವುದು. ಬಿಲ್ ಪಾವತಿಗಳನ್ನು ಸಕಾಲಕ್ಕೆ ಮಾಡಿ ಮುಗಿಸಿದರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಕ್ಕಳ ಸಹಾಯ ದೊರಕಲಿದೆ. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ

Latest Videos

ಮಿಥುನ(Gemini): ಕಚೇರಿಯ ಕೆಲಸಗಳನ್ನು ಅರ್ಧಕ್ಕೇ ಬಿಟ್ಟು ಪ್ರವಾಸ ಹೊರಟರೆ ತಿರುಗಾಟದ ಸಂತೋಷ ದಕ್ಕದು. ಮೊದಲು ಕೆಲಸಗಳನ್ನು ಪೂರೈಸಿ ನಂತರ ಪ್ರವಾಸ ಯೋಜನೆ ಮಾಡಿ. ಮನೆಯ ಸದಸ್ಯರೊಡನೆ ಸ್ವಲ್ಪವಾದರೂ ಸಮಯ ಕಳೆಯಿರಿ. ತಾಯಿಯ ಆಶೀರ್ವಾದ ಪಡೆಯಿರಿ. 

ಕಟಕ(Cancer): ಹೊಸ ವಸ್ತುಗಳ ಖರೀದಿಗಾಗಿ ಧನ ವ್ಯಯಿಸುವಿರಿ. ಎಲ್ಲವೂ ನೀವಂದುಕೊಂಡಂತೆಯೇ ಆಗಲಿದೆ. ಆತ್ಮವಿಶ್ವಾಸ ಇರುವ ಕಾರಣ ವಾಗ್ಬಲ ಕೂಡ ಜೊತೆಗೂಡಲಿದೆ. ತಾಯಿಯ ಆರೋಗ್ಯ ಆತಂಕ ತರಿಸಬಹುದು. ಒಮ್ಮೆ ವೈದ್ಯರ ಬಳಿ ಕರೆದೊಯ್ಯುವುದು ಉತ್ತಮ. ಅನ್ನಪೂರ್ಣೇಶ್ವರಿ ಹೆಸರಲ್ಲಿ ಬಡವರಿಗೆ ಅಕ್ಕಿ ದಾನ ಮಾಡಿ. 

ಸಿಂಹ(Leo): ಇನ್ನೊಬ್ಬರಿಗೆ ನೆರವಾಗುವ ನಿಮ್ಮ ಗುಣ ಜನಪ್ರೀತಿಗೆ ಕಾರಣವಾಗುವುದು. ಆತ್ಮೀಯರ ವಲಯದಿಂದ ನಿಮಗೆ ಶುಭವಾರ್ತೆ ಕೇಳಿ ಬರಲಿದೆ. ಕಚೇರಿಯ ಕೆಲಸಗಳು ಹೆಚ್ಚಿದ್ದರೂ ನೀವದನ್ನು ಸಮರ್ಥವಾಗಿ ನಿಭಾಯಿಸಬಲ್ಲಿರಿ. ಬಿಳಿಯ ವಸ್ತ್ರಗಳನ್ನು ದಾನ ಮಾಡಿ. 

ಕನ್ಯಾ(Virgo): ಒಂಟಿತನ ಕಾಡಬಹುದು. ಯಾವುದೇ ಮನೋದ್ವೇಗಗಳಿಗೆ ಕೌನ್ಸೆಲಿಂಗ್ ಸಹಾಯ ಪಡೆಯುವುದು ಉತ್ತಮ. ಇಲ್ಲವೇ ನಿಮ್ಮ ಆತ್ಮೀಯರಲ್ಲಿ ಮನಸ್ಸಿನ ನೋವುಗಳನ್ನು ಹರವಿಡಿ. ಕೆಲಸದಲ್ಲಿ ಪ್ರತಿಭೆಯನ್ನು ತೋರಿಸುವ ಅಗತ್ಯವಿದೆ. ಅದಕ್ಕಾಗಿ ಹೆಚ್ಚಿನ ಏಕಾಗ್ರತೆಯಿಂದ ಶ್ರಮ ಹಾಕಿ. ಕುಲದೇವರಿಗೆ ತುಪ್ಪದ ದೀಪ ಹಚ್ಚಿ.

ತುಲಾ(Libra): ಜವಾಬ್ದಾರಿ ಹೆಚ್ಚುವುದು. ಸಹೋದ್ಯೋಗಿಗಳ ಸಹಾಯ ಕೇಳಲು ಹಿಂಜರಿಯಬೇಡಿ. ಬಾಯಿ ಬಿಟ್ಟು ಕೇಳಿದಾಗಲೇ ನಿಮ್ಮ ಕಷ್ಟ ಅರಿವಾಗುವುದು, ಸಹಾಯ ದಕ್ಕುವುದು. ಹೊಸ ತಾಂತ್ರಿಕ ವಿಷಯಗಳನ್ನು ಕಲಿಯುವುದರಿಂದ ಕೆಲಸ ಸುಲಭ ಮಾಡಿಕೊಳ್ಳುವತ್ತ ಗಮನ ಹರಿಸಿ. ಶಾರದಾಂಬೆ ಸ್ಮರಣೆ ಮಾಡಿ. 

Durva Pooja: ಗಣೇಶನ ಮನ ಗೆಲ್ಲೋಕೆ ದೊಡ್ಡ ಹರಕೆ ಬೇಕಿಲ್ಲ, ಭಕ್ತಿಯಿಂದ ಪುಟ್ಟ ಗರಿಕೆ ಇಟ್ಟರೂ ಸಾಕು!

ವೃಶ್ಚಿಕ(Scorpio): ಸಂತೋಷವೇ ಇಲ್ಲವೆಂದು ಕೊರಗುವ ಬದಲು ಮಾಡುವ ಕೆಲಸವನ್ನೇ ಹುರುಪಿನಿಂದ ಮಾಡಿ. ಅತ್ಯುತ್ತಮವಾಗಿ ಪೂರೈಸಿದ ಕೆಲಸ ಖಂಡಿತಾ ಸಂತೋಷ ತರುವುದು. ವಿದ್ಯಾರ್ಥಿಗಳು ಮನೆಯಲ್ಲಿ ಸಣ್ಣ ಪುಟ್ಟ ಜವಾಬ್ದಾರಿ ಹೊರುವುದರಿಂದ ತಂದೆತಾಯಿಗೆ ನೆಮ್ಮದಿ ದೊರೆವುದು. ಲಕ್ಷ್ಮೀ ಪೂಜೆ ಮಾಡಿ. 

ಧನುಸ್ಸು(Sagittarius): ಈ ದಿನ ಅನಿರೀಕ್ಷಿತವಾಗಿ ಧನಲಾಭವೇನೋ ಇದೆ. ಹಾಗಂಥ ಕೂಡಲೇ ಹಣ ತೆಗೆದುಕೊಂಡು ತಿರುಗಾಡಲು ಹೋಗಬೇಡಿ. ವೃಥಾ ಖರ್ಚು ಮಾಡಿ ಆತಂಕ ಎದುರಿಸುವಿರಿ. ಹಣವನ್ನು ಉಳಿತಾಯ ಮಾಡುವತ್ತ ಗಮನ ಹರಿಸಿ. ಮಹಾಲಕ್ಷ್ಮೀ ಅಷ್ಟೋತ್ತರ ಪಠಿಸಿ.

ಮಕರ(Capricorn): ಹಗಲುಗನಸಿನಲ್ಲಿ ಕಾಲಹರಣ ಮಾಡುವಿರಿ. ಹೊಸ ಉದ್ಯಮ, ಕಲಿಕೆ ಆರಂಭಿಸಬೇಕಿದ್ದರೇ ಇಂದೇ ಶುರು ಮಾಡಿ. ಅದು ಬಿಟ್ಟು ಬರಿಯ ಕನಸು ಕಾಣುತ್ತಿದ್ದರೆ ಉಪಯೋಗವಿಲ್ಲ. ಪ್ರತಿಭೆಯಿಂದ ಆರ್ಥಿಕ ಲಾಭ ಗಳಿಸುವಿರಿ. ದುರ್ಗಾ ಅಷ್ಟೋತ್ತರ ಪಠಣ ಮಾಡಿ. 

ಕೋಪ ನಿಯಂತ್ರಿಸಲು ಸಾಧ್ಯವಾಗ್ತಿಲ್ವೇ? ಈ Vastu Tips ಫಾಲೋ ಮಾಡಿ

ಕುಂಭ(Aquarius): ಸಂಗಾತಿಯೊಂದಿಗೆ ಪ್ರವಾಸ ಹೋಗುವ ಯೋಜನೆ ಸಿದ್ಧಪಡಿಸುವಿರಿ. ಇದರಿಂದ ಮನಸ್ಸು ಉಲ್ಲಸಿತವಾಗುವುದು. ಇಂದು ದೊಡ್ಡ ಬಿಸ್ನೆಸ್ ಡೀಲ್ ಆಗಬಹುದು. ಲಾಭದಾಯಕ ದಾರಿಗಳು ಕಾಣಿಸಬಹುದು. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಅಪಾರ ಉತ್ಸಾಹ ಇರಲಿದೆ. ಮುತ್ತೈದೆಗೆ ಬಾಗೀನ ನೀಡಿ. 

ಮೀನ(Pisces): ಸ್ನೇಹಿತರಿಗೆ ಕಷ್ಟದಲ್ಲಿ ನೆರವಾಗುವಿರಿ. ಆರೋಗ್ಯದ ವಿಚಾರದಲ್ಲಿ ಕಡೆಗಣನೆ ಬೇಡ. ಮನೆಯ ಸದಸ್ಯರ ಮನಸ್ಸಿನ ಮಾತುಗಳನ್ನು ಆಲಿಸಿ. ಅವಿವಾಹಿತರಿಗೆ ಮಾಂಗಲ್ಯಭಾಗ್ಯಕ್ಕೆ ಸಮಯ ಒದಗಿ ಬರುವುದು. ವಿಷ್ಣು ಸಹಸ್ರನಾಮ ಶ್ರವಣ ಮಾಡಿ.

click me!