ದಿನ ಭವಿಷ್ಯ: ವೃಷಭ ರಾಶಿಯವರ ಆತಂಕದ ವಾತಾವರಣ ದೂರ, ಉಳಿದ ರಾಶಿ?

Published : Jul 21, 2021, 07:50 AM ISTUpdated : Jul 21, 2021, 08:01 AM IST
ದಿನ ಭವಿಷ್ಯ: ವೃಷಭ ರಾಶಿಯವರ ಆತಂಕದ ವಾತಾವರಣ ದೂರ, ಉಳಿದ ರಾಶಿ?

ಸಾರಾಂಶ

* 21 ಜುಲೈ 2021 ಬುಧವಾರದ ಭವಿಷ್ಯ * ಮೇಷ ರಾಶಿಯವರಿಗಿಂದು ಅಶಾಂತಿ * ಮಿಥುನ ರಾಶಿಯವರಿಗೆ ಸಮಾಧಾನವೂ ಇರಲಿದೆ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ  

ಮೇಷ - ಜನರಲ್ಲಿ ಅಶಾಂತಿ, ಕೆಲಸದಲ್ಲಿ ಆತಂಕ, ಬುದ್ಧಿ ಶಕ್ತಿ ಕುಂಠಿತವಾಗಲಿದೆ,  ದುರ್ಗಾ ಪ್ರಾರ್ಥನೆ ಮಾಡಿ

ವೃಷಭ - ಆತಂಕದ ವಾತಾವರಣ ದೂರಾಗಲಿದೆ, ಮಾನಸಿಕ ಅಸಮಧಾನ, ಇತರರಿಗೆ ತೊಂದರೆಯಾಗದಂತೆ ವರ್ತಿಸಿ, ದುರ್ಗಾ ಸ್ತೋತ್ರ ಪಠಿಸಿ

ಮಿಥುನ - ಸಮಾಧಾನವೂ ಇರಲಿದೆ, ಆದರೆ ಆತಂಕದ ವಾತಾವರಣವೂ ಇದೆ, ಆರೋಗ್ಯದ ಕಡೆ ಗಮನವಿರಲಿ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಸಾಮಾಧಾನ ಇರಲಿ, ಕುಟುಂಬದಲ್ಲಿ ಸಮಸ್ಯೆ, ಕ್ಲಿಷ್ಟಕರ ವಾತಾವರಣ, ಸಂಗಾತಿಯಲ್ಲಿ ಮನಸ್ತಾಪ ಸಾಧ್ಯತೆ, ದುರ್ಗಾ ಕವಚ ಪಠಿಸಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಸಿಂಹ: ಸ್ವಾರ್ಥಿಗಳ ಸ್ವಾರ್ಥ ಸಾಧನೆಗೆ ನೀವು ಬಳಕೆಯಾಗುವ ಅವಕಾಶವಿದೆ. ಎಚ್ಚರಿಕೆಯಿಂದ ಇರಿ. ಮಾತಿಗಿಂತ ಮೌನ ಲೇಸು.

ಕನ್ಯಾ: ಎಲ್ಲವೂ ನನ್ನಿಂದಲೇ ಎನ್ನುವ ಅಹಂ ಬೇಡ. ನಿಮ್ಮ ಹಿತ ಬಯಸುವ ವ್ಯಕ್ತಿಗಳ ಮಾತಿಗೆ ಬೆಲೆ ನೀಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ತುಲಾ: ರಾಜಕೀಯ ಪ್ರಗತಿಗೆ ಪೂರಕವಾಗಿ ಇಂದು ಕೆಲವು ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ ಬರಲಿವೆ. ಮನೆಯಲ್ಲಿ ಸಂತಸ ಹೆಚ್ಚಲಿದೆ.

ವೃಶ್ಚಿಕ: ಕಣ್ಣಿಗೆ ಕಾಣುವುದೆಲ್ಲವೂ ಸತ್ಯವಲ್ಲ. ಸರಿಯಾಗಿ ವಿವೇಚನೆ ಮಾಡಿ ನಿರ್ಧಾರ ಕೈಗೊಳ್ಳಿ. ನಿಮ್ಮಿಂದ ಇತರರು ಖುಷಿಯಾಗಿರಲಿದ್ದಾರೆ.

ನೀವು ಹುಟ್ಟಿದ ವಾರಕ್ಕೂ ನಿಮ್ಮ ಬದುಕಿಗೂ ಸಂಬಂಧ ಇದ್ಯಾ?

ಧನಸ್ಸು: ಸಿಗದ ವಸ್ತುಗಳ ಬಗ್ಗೆ ಚಿಂತೆ ಮಾಡುತ್ತಾ ಕೂರುವುದು ಬೇಡ. ನಿಮ್ಮ ಪಾಲಿನ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡಿ ಮುಗಿಸಿ.

ಮಕರ: ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಹೊಸ ಅವಕಾಶಗಳು ನಿಮ್ಮನ್ನು ಹರಸಿ ಬರಲಿವೆ. ಆರ್ಥಿಕವಾಗಿ ಒಳ್ಳೆಯ ದಿನವಿದು.

ಕುಂಭ:  ಸಂಜೆ ವೇಳೆಗೆ ಶುಭ ಸುದ್ದಿ ಕೇಳಲಿದ್ದೀರಿ. ಆರೋಗ್ಯದಲ್ಲಿ ಸ್ಥಿರತೆ. ಸಣ್ಣ ಸಣ್ಣ ವಿಚಾರಗಳನ್ನು ಕಡೆಗಣನೆ ಮಾಡಬೇಡಿ.

ಮೀನ: ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವುದು ಬೇಡ. ಹೊಸ ವಸ್ತುಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಶುಭ ಫಲ.

 

PREV
click me!

Recommended Stories

ಇಂದು ಸೂರ್ಯ ಮತ್ತು ಬುಧನ ಸಂಯೋಗವು ಮಿಥುನ ಮತ್ತು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗೆ ಶುಭ
ಜಾತಕ ಸೆಪ್ಟೆಂಬರ್ 13: ಸಿಂಹ ಮತ್ತು ಕನ್ಯಾ ರಾಶಿಗೆ ಅದೃಷ್ಟ, ಬಾಕಿ ಹಣ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು