Bengaluru Crime News: 'ಏನೋ‌ ಮಗ, ನೀರು ಕೊಡೋ' ಅಂದಿದ್ದಕ್ಕೆ ಯುವಕನ ಕೊಲೆ!

By Suvarna NewsFirst Published Sep 12, 2022, 4:32 PM IST
Highlights

Crime News: 'ಏನೋ‌ ಮಗ, ನೀರು ಕೊಡೋ' ಯುವಕನ ಕೊಲೆಗೈದಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ 

ಬೆಂಗಳೂರು (ಸೆ. 12):  ಏನೋ‌ ಮಗ ನೀರು ಕೊಡೊ ಅಂದಿದ್ದಕ್ಕೆ ಯುವಕನ ಕೊಲೆಗೈದಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ ಬಳಿ ನಡೆದಿದೆ.  ಸಿದ್ದಿಕ್ (25) ಕೊಲೆಯಾದ ಯುವಕ.  ನಿನ್ನೆ ರಾತ್ರಿ ಸುಮಾರು 11- 30ರ ಸುಮಾರಿಗೆ ಈ ಘಟನೆ ನಡೆದಿದೆ.  ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಸಿದ್ದಿಕ್ ನಿನ್ನೆ ಜಾಲಹಳ್ಳಿ ಕ್ರಾಸ್ ಕಡೆ ಬಂದಿದ್ದಾರೆ. ಈ ವೇಳೆ ಮತ್ತೊಬ್ಬ ಆಟೋ ಚಾಲಕ ಅಜಯ್ ಬಳಿ ಸಿದ್ದಿಕ್ ನೀರು ಕೇಳಿದ್ದ. ಏನೊ ಮಗ ನೀರು ಇದ್ರೆ ಕೊಡೋ ಎಂದು ಸಿದ್ದಿಕ್ ಹೇಳಿದ್ದ ಎನ್ನಲಾಗಿದೆ. 

ಏನೊ ಮಗ ಅಂತೀಯ ಎಂದ ಸಿದ್ದಿಕ್‌ಗೆ  ಚಾಕುವಿನಿಂದ ಅಜಯ್ ಇರಿದಿದ್ದ. ಚಾಕು ಇರಿತದಿಂದ ಗಾಯಗೊಂಡ ಸಿದ್ದಿಕ್  ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನೀರು ಕೊಡೊ ಮಗ ಅಂದಿದ್ದಕ್ಕೆ ಮೂರು ಬಾರಿ ಚುಚ್ಚಿ ಕೊಲೆ: ಸಿಲಿಕಾನ್ ಸಿಟಿಯಲ್ಲಿ ಸುಮಾರು   ಆಟೋಗಳು ನಗರದಲ್ಲಿ ಕೆಟ್ಟು ನಿಂತರೆ ಮತ್ತೋಬ್ಬ ಆಟೋ ಡ್ರೈವರ್ ಸಹಾಯ ಮಾಡುತ್ತಾರೆ. ಆಟೋವನ್ನು ಗ್ಯಾರೇಜ್ ತನಕ ಟೋ ಮಾಡಕ್ಕೆ ಸಹಾಯ ಮಾಡ್ತಾರೆ.  ಆದ್ರೇ ಇಲ್ಲಿ ಒಬ್ಬ ಆಟೋ ಡ್ರೈವರ್ ಗೆ ಇನ್ನೊಬ್ಬ ಆಟೋ ಡ್ರೈವರೇ ಶತ್ರು ಆಗ್ಬಿಟ್ಟಿದ್ದಾನೆ 

ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾಲಹಳ್ಳಿ ಕ್ರಾಸಿನ ಬಳಿ ಸಿದ್ದಿಕ್ ಎಂಬ 25 ವರ್ಷದ ಆಟೋ ಡ್ರೈವರ್ ಗಾಡಿ ಓಡ್ಸಿ ಸ್ವಲ್ಪ ಸುಸ್ತಾಗಿದ್ರಿಂದ ರಾತ್ರಿ ಸರಿ ಸುಮಾರು 11.30 ಕ್ಕೆ  ಟೀ ಕುಡಿಯೋಣ ಅಂತ ಟೀ ಶಾಪ್ ಹತ್ರ ಆಟೋ ಹಾಕಿದ್ದಾನೆ. ಆಟೋ ಇಳ್ದು ಅಲ್ಲೇ ಇದ್ದ ಇನ್ನೊಬ್ಬ ಅಜಯ್ ಅನ್ನೋ ಆಟೋ ಡ್ರೈವರ್ ನೋಡಿದ್ದಾನೆ. 

ಹಿಂದುಳಿದ ಜಾತಿಯ ಯುವಕನೊಂದಿಗೆ ಪ್ರೇಮ; ಮಗಳನ್ನು ಕೊಂದು ಬೆಂಕಿಯಿಟ್ಟ ಅಪ್ಪ

ನಮ್ಮ ಆಟೋ ಡ್ರೈವರ್ರೇ ಅಲ್ವ ಅಂತ ಸಿದ್ದಿಕ್ ಮಗಾ ಸ್ವಲ್ಪ ನೀರು ಕೊಡೋ ಅಂತ ಅಜಯ್ ಗೆ ಕೇಳಿದ್ದಾನೆ. ಅಷ್ಟಕ್ಕೆ ಅಜಯ್ ಕೋಪಗೊಂಡು ನನ್ನೇ ಮಗಾ ನೀರು ಕೊಡೊ ಅಂತಿಯಾ ಅಂತ ಬೈದಿದ್ದಾನೆ. ಇದ್ಕೇ ಸಿದ್ದಿಕ್ ಅಲಾ ಗುರು ಜಸ್ಟ್ ನೀರು ತಾನೇ ಕೇಳಿದ್ದು ಅಂತ ಅಜಯ್ ಮಾತಿಗೆ ಎದುರು ಮಾತು ಕೊಟ್ಟಿದ್ದಾನೆ.

ಇವ್ರಿಬ್ರು ನಡುವೆ ಮಾತಿನ ಚಕಾಮಕಿ ನಡೆದು ಇದ್ಕಿದಂಗೆ ಜೋರಾಗಿ ತಾರಕಕ್ಕೇರಿ ಅಜಯ್ ತನ್ನ ಆಟೋದಲ್ಲಿದ್ದ ಚಾಕು ತಂದು ಸಿದ್ದಿಕ್ ಎದೆಗೆ ಮೂರು ಬಾರಿ ಚುಚ್ಬಿಟ್ಟಿದ್ದಾನೆ. ತಕ್ಷಣ ರಕ್ತಸ್ತ್ರಾವ ಆಗಿ ಒದ್ದಾಡ್ತಿದ್ದ ಸಿದ್ದಿಕ್ ನನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೇ ಸಿದ್ದಿಕ್‌ಗೆ ಗಂಭೀರ ಗಾಯ ಆಗಿದ್ದ ಕಾರಣ ಚಿಕಿತ್ಸೆ ಫಲಕಾರಿ ಆಗ್ದೇ ಕೊನೆಯುಸಿರೆಳಿದ್ದಾನೆ. 

ಆಟೋ ಡ್ರೈವರ್ ಚಾಕು ಇಟ್ಕೋಂಡು ಯಾಕೆ ಸಂಚಾರ ಮಾಡ್ತಾ ಇದ್ದ ಅನ್ನೊದು ಅನುಮಾನ ಮೂಡಿಸಿದೆ. ಸದ್ಯಕ್ಕೆ ಸಿದ್ದಿಕ್‌ನನ್ನ ಕೊಲೆಗೈದ ಅಜಯ್ ಬೆಳ್ಳಗ್ಗಿನ ಜಾವ ಬಂಧಿಸಿದ್ದ ಯಾವ ಕಾರಣಕ್ಕೆ ಕೊಲೆ ಆಯ್ತು ಅನ್ನೊದರ ಬಗ್ಗೆ ಸಂಪೂರ್ಣ ತನಿಖೆ ಪೀಣ್ಯ ಪೊಲೀಸರು ನಡೆಸುತ್ತಿದ್ದಾರೆ.

click me!