ಮಂಡ್ಯ: ಫ್ರೆಂಡ್‌ಶಿಪ್‌ ಡೇಯಂದೇ ಸ್ನೇಹಿತನನ್ನ ಕೊಂದ ಕಿರಾತಕ..!

Published : Aug 06, 2023, 08:32 PM IST
ಮಂಡ್ಯ: ಫ್ರೆಂಡ್‌ಶಿಪ್‌ ಡೇಯಂದೇ ಸ್ನೇಹಿತನನ್ನ ಕೊಂದ ಕಿರಾತಕ..!

ಸಾರಾಂಶ

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಇಂದು ನಡೆದಿದೆ. 

ಮಂಡ್ಯ(ಆ.06):  ಫ್ರೆಂಡ್‌ಶಿಪ್‌ಗಾಗಿ ಪ್ರಾಣಕ್ಕೆ ಪ್ರಾಣ ಕೊಡೋ ಸ್ನೇಹಿತರನ್ನ ನಾವು, ನೀವು ಕಂಡಿದ್ದೇವೆ, ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಫ್ರೆಂಡ್‌ ತನ್ನ ಸ್ನೇಹಿತನನ್ನ ಕೊಲೆ ಮಾಡಿ ಸುದ್ದಿಯಾಗಿದ್ದಾನೆ. ಅದು ಕೂಡ ಸ್ನೇಹಿತರ ದಿನದಂದೇ ಘಟನೆ ನಡೆದಿದ್ದು ಮಾತ್ರ ವಿಪರ್ಯಾಸ. 

ಹೌದು, ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. 

ಕುಡಿದ ಮತ್ತಿನಲ್ಲಿ ಶಿವನ ಅವತಾರವಾಗಿ ಬದಲಾದ ಅಜ್ಜ, 85ರ ವೃದ್ಧೆಯನ್ನು ಛತ್ರಿಯಿಂದ ಬಡಿದು ಕೊಲೆ!

ಸ್ನೇಹಿತರ ದಿನದಂದು ಚಾಕು ಇರಿದು ಸ್ನೇಹಿತನನನ್ನ ಕೊಲೆ ಮಾಡಲಾಗಿದೆ. ಜಯಂತ್ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ. ಜಯಂತ್‌ನನ್ನು ಸ್ನೇಹಿತ ಕೀರ್ತಿ ಎಂಬಾತನೇ ಹತ್ಯೆ ಮಾಡಿದ್ದಾನೆ. 

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು ಮಾತ್ರ ದೊಡ್ಡ ದುರಂತವಾಗಿದೆ. ಚಾಕು ಇರಿದಿದ್ದರಿಂದ ಸ್ಥಳದಲ್ಲೇ ಜಯಂತ್ ಅಸುನೀಗಿದ್ದಾನೆ ಎಂದು ತಿಳಿದು ಬಂದಿದೆ. ಕೆರೆಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ