Crime News: ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಅತ್ತೆಯನ್ನೇ ಕೊಂದ ಸೊಸೆ

Published : Jun 11, 2022, 07:59 PM IST
Crime News: ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಅತ್ತೆಯನ್ನೇ ಕೊಂದ ಸೊಸೆ

ಸಾರಾಂಶ

ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತಡರಾತ್ರಿ ಮೊಬೈಲ್ ಫೋನಿನಲ್ಲಿ ನಿರಂತರವಾಗಿ ಮಾತನಾಡುವುದನ್ನು ವಿರೋಧಿಸಿದ್ದಕ್ಕಾಗಿ ಅತ್ತೆಯನ್ನು ಕೊಂದಿದ್ದಾರೆ. 

ಮಧ್ಯಪ್ರದೇಶ (ಜೂ. 11): ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತಡರಾತ್ರಿ ಮೊಬೈಲ್ ಫೋನಿನಲ್ಲಿ ನಿರಂತರವಾಗಿ ಮಾತನಾಡುವುದನ್ನು ವಿರೋಧಿಸಿದ್ದಕ್ಕಾಗಿ ಅತ್ತೆಯನ್ನೇ ಕೊಂದಿದ್ದಾರೆ. ಮೃತನ ಮಗ ಅಜಯ್ ಬರ್ಮನ್ ತನ್ನ ತಾಯಿಯ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಗಾಯದ ಗುರುತುಗಳಿದ್ದ ಮೃತದೇಹ ಪತ್ತೆಯಾಗಿದೆ.

"ತಾನು ಕೆಲಸದಲ್ಲಿದ್ದ ಸಮಯದಲ್ಲಿ ಹೆಂಡತಿ ಕರೆ ಮಾಡಿದ್ದಳು ಹಾಗೂ ತನ್ನ ತಾಯಿ ಗಾಯಗೊಂಡ ಸ್ಥಿತಿಯಲ್ಲಿ ಹೊರಗಿನಿಂದ ಮನೆಗೆ ಬಂದಿದ್ದಾಳೆ ಎಂದು ತಿಳಿಸಿದ್ದಳು" ಎಂದು ತನಿಖೆಯ ವೇಳೆ ಅಜಯ್‌ ತಿಳಿಸಿದ್ದಾರೆ. ಹೀಗಾಗಿ ತಕ್ಷಣ ಮನೆಗೆ ತಲುಪಿ ಪರೀಶಿಲಿಸಿದಾಗ ತಾಯಿ ಅದಗಾಲೇ ತೀರಿಕೊಂಡಿದ್ದರು ಎಂದು ಅಜಯ್‌ ಹೇಳಿದ್ದಾರೆ. 

ತಪ್ಪೊಪ್ಪಿಕೊಂಡ ಮಹಿಳೆ: ಪೊಲೀಸರು ಸೊಸೆಯನ್ನು ವಿಚಾರಣೆಗೊಳಪಡಿಸಿದಾಗ, ಆಕೆ ಆರಂಭದಲ್ಲಿ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದಳು, ಆದರೆ ಮತ್ತಷ್ಟು ವಿಚಾರಣೆ ಬಳಿಕ ಅಳುತ್ತಾ ತನ್ನ ಅತ್ತೆಯನ್ನು ಕೊಂದ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. 

ಆಜ್ ತಕ್‌ನೊಂದಿಗೆ ಮಾತನಾಡಿದ ಹಟ್ಟಾ ಪೊಲೀಸ್ ಠಾಣೆಯ ಪ್ರಭಾರಿ ಎಚ್‌ಆರ್ ಪಾಂಡೆ, "ವಿಚಾರಣೆ ವೇಳೆ ಮಹಿಳೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಅಲ್ಲದೇ ಮೊಬೈಲ್ ಫೋನ್ ಬಳಸುತ್ತಿರುವ ಬಗ್ಗೆ ಅತ್ತೆ ತನ್ನ ಪತಿಗೆ ಪದೇ ಪದೇ ದೂರು ನೀಡುತ್ತಿದ್ದರು ಎಂದು ಮಹಿಳೆ ತಿಳಿಸಿದ್ದಾರೆ" ಎಂದು ಹೇಳಿದರು. 

ಕೆಲ ದಿನಗಳ ಹಿಂದೆ ರಾತ್ರಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಅತ್ತೆ ಮತ್ತೆ ಪತಿಗೆ ದೂರು ನೀಡಿದ್ದು, ಬಳಿಕ ಆಕೆಯಿಂದ ಪತಿ ಫೋನ್ ಕಿತ್ತುಕೊಂಡಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕುಪಿತಗೊಂಡ ಆಕೆ ಅತ್ತೆಯ ತಲೆಗೆ ಹೊಡೆದು ಕೊಂದು ಹಾಕಿದ್ದಾಳೆ. ನಂತರ ಇದರಿಂದ ಪಾರಾಗಲು ಕಥೆಯೊಂದನ್ನು ಹೆಣೆದಿದ್ದಾಳೆ. ಆದರೆ, ಇದೀಗ ಮಹಿಳೆ ಬಣ್ಣ ಬಯಾಲಾಗಿದ್ದು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ‘ಹೋಟೆಲ್‌ಗೆ ಬಾ’: ನಕಲಿ ಖಾತೆ ತೆರದು ಪತಿಯೊಂದಿಗೇ ಚಾಟ್: ಪತ್ನಿಯ ಖತರ್ನಾಕ್‌ ಐಡಿಯಾಗೆ ದಂಗಾದ ಪೊಲೀಸಪ್ಪ

ಇದನ್ನೂ ಓದಿ: ಪ್ರಿಯಕರನ ಜತೆ ಸೇರಿ ತಾಯಿಗೆ ಚೂರಿ ಇರಿದ ಮಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!