ಭೀಮಾತೀರದಲ್ಲಿ ಖಾಕಿ ಹೈ ಅಲರ್ಟ್, ಬಾಲ ಬಿಚ್ಚಿದ್ರೆ ಕಟ್ ಎಂದ ಎಸ್ಪಿ

By Suvarna NewsFirst Published Jun 25, 2022, 7:02 PM IST
Highlights

• ಭೀಮಾತೀರದಲ್ಲಿ ಖಾಕಿ ಹೈ ಅಲರ್ಟ್..!‌
• ರೌಡಿಗಳ ಪರೇಡ್‌ ನಡೆಸಿ ವಾರ್ನಿಂಗ್‌ ಮಾಡಿದ ಎಸ್ಪಿ..!
• ನೀವೇನು ಪೈರಿಂಗ್‌ ಮಾಡೋದು ನಾವೇ ಮಾಡ್ತೀವಿ..!
• ಜಿಲ್ಲೆಯ ರೌಡಿಗಳಿಗೆ ಹೆಚ್‌ ಡಿ ಆನಂದಕುಮಾರ್ ಖಡಕ್‌ ಸಂದೇಶ..!

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ, (ಜೂನ್‌.25) :
ವಿಜಯಪುರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡೋದೆ ಒಂದು ರೀತಿಯ ಹರಸಾಹಸವಾಗಿದೆ. ಅಪರಾಧ ಚಟುವಟಿಕೆಗಳಿಂದಲೇ ಕುಖ್ಯಾತಿ ಪಡೆದಿರುವ ಭೀಮಾತೀರದಲ್ಲಿ ಅಪರಾಧ ಕೃತ್ಯಗಳಿಕೆ ಕೊಕ್ಕೆ ಹಾಕೋದು ಅಂದ್ರೆ ಅದೊಂದು ಸವಾಲೇ ಇದ್ದಂತೆ. ಈ ನಿಟ್ಟಿನಲ್ಲಿ ಭೀಮಾತೀರದ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಜಯಪುರ ಎಸ್ಪಿ ಹೆಚ್‌ ಡಿ ಆನಂದಕುಮಾರ್‌ ಕಠಿಣ ಕ್ರಮಗಳನ್ನ ಕೈಗೊಳ್ತಿದ್ದಾರೆ.

ಇಂದು(ಶನಿವಾರ) ಕೂಡ ವಿಜಯಪುರ ನಗರದ ಚಿಂತನ ಹಾಲ್‌ ಗ್ರೌಂಡ್‌ ನಲ್ಲಿ ವಿಜಯಪುರ ನಗರದ ಗಾಂಧೀ ಚೌಕ ಸರ್ಕಲ್‌, ಗೋಳಗುಮ್ಮಟ ಸರ್ಕಲ್‌, ಗ್ರಾಮೀಣ ವೃತ್ತ ವ್ಯಾಪ್ತಿಯ ರೌಡಿಗಳ ಪರೇಡ್‌ ನಡೆಸಿ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ಅಲ್ಲದೇ ನೀವೇನು ಫೈರಿಂಗ್ ಮಾಡೋದು ನಾವೇ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.

ಭೀಮಾತೀರದಲ್ಲೊಂದು ಹೊಸ ಹೆಸ್ರು, ಅವನ ಹೆಸರು ಕೇಳಿದ್ರೇ ಕುಖ್ಯಾತರೆಲ್ಲಾ ಸೈಲೆಂಟ್..!

ಭೀಮಾತೀರದಲ್ಲಿ ಶಾಂತಿ ನೆಲೆಸಲು ಎಸ್ಪಿ ಆದ್ಯತೆ..!
ವಿಜಯಪುರ ಜಿಲ್ಲೆಯ ಭೀಮಾತೀರ ಐದು ದಶಕಗಳ ರಕ್ತಪಾತದ ಇತಿಹಾಸ ಹೊಂದಿದೆ. 4 ವರ್ಷಗಳ ಹಿಂದೆ ಮಹಾದೇವ ಬೈರಗೊಂಡ ಮೇಲೆ ಹಾಡುಹಗಲೇ ಅಟ್ಯಾಕ್‌ ನಡೆಯೋ ಮೂಲಕ ಭೀಮಾತೀರ ಸಧ್ಯಕ್ಕೆ ತಣ್ಣಗಿರುವಂತೆ ಕಾಣ್ತಿದೆ. ಆದ್ರೆ ಈ ಭಾಗದಲ್ಲಿ ಅಪರಾಧ ಕೃತ್ಯಗಳನ್ನ ತಡೆಯೋದು ಪೊಲೀಸ್‌ ಇಲಾಖೆಗೆ ಸವಾಲೆ ಸರಿ. ಯಾಕಂದ್ರೆ 50 ವರ್ಷಗಳ ಇತಿಹಾಸವನ್ನ ಹೊಂದಿದೆ ಭೀಮಾತೀರದ ಪಾತಕಲೋಕ. ಸಧ್ಯ ಭೀಮಾತೀರದಲ್ಲಿನ ಅಪರಾಧಿಕ ಕೃತ್ಯಗಳನ್ನ ತಡೆಯಲು ಎಸ್ಪಿ ಆನಂದಕುಮಾರ್‌ ಇನ್ನಿಲ್ಲದ ಕಠಿಣ ಕ್ರಮಗಳನ್ನ ಕೈಗೊಳ್ತಿದ್ದಾರೆ.

ಭೀಮಾತೀರದಲ್ಲಿ ರೌಡಿ ಪರೇಡ್..!
ಚಡಚಣ ಪೊಲೀಸ್‌ ಠಾಣೆ, ಆಲಮೇಲ ಪೊಲೀಸ್‌ ಠಾಣೆ, ಸಿಂದಗಿ, ಇಂಡಿ, ಝಳಕಿ ಇವೆಲ್ಲ ಭೀಮಾತೀರದ ಸರಹದ್ದಿನಲ್ಲಿ ಬರೋ ಠಾಣೆಗಳು. ಇಷ್ಟು ಠಾಣೆಗಳಲ್ಲಿ ಅಪರಾಧಿಕ ಚಟುವಟಿಕೆಗಳು ನಿಂತರೆ ಒಂದರ್ಥದಲ್ಲಿ ಭೀಮಾತೀರದ ಶಾಂತ ಎನಬಹುದು. ಹೀಗಾಗಿ ಎಸ್ಪಿ ಆನಂದ ಕುಮಾರ್‌ ಕಳೆದ 10 ದಿನಗಳಲ್ಲಿ ಭೀಮಾತೀರದ ಈ ಠಾಣೆಗಳಲ್ಲಿ ರೌಡಿ ಪರೇಡ್‌ ಗಳನ್ನ ನಡೆಸುತ್ತಿದ್ದಾರೆ. ರೌಡಿ ಪರೇಡ್‌ ಗಳಲ್ಲಿ ಹಂತಕರಿಗೆ ಖಡಕ್‌ ಎಚ್ಚರಿಕೆಗಳನ್ನು ನೀಡಿದ್ದಾರೆ.

ಗುಂಡು ಹಾರಿಸೊದೇನು ನಾವೇ ಹಾರಿಸ್ತೀವಿ..!
ಆಲಮೇಲ ಹಾಗೂ ಇಂಡಿ ಠಾಣಾ ವ್ಯಾಪ್ತಿಗಳಲ್ಲಿ ರೌಡಿಗಳ ಪರೇಡ್‌ ನಡೆಸಿದ ಎಸ್ಪಿ ಆನಂದಕುಮಾರ್‌, ಎ.ಎಸ್ಪಿ ರಾಮ ಅರಸಿದ್ದಿ ರೌಡಿಗಳಿಗೆ ಖಡಕ್‌ ಎಚ್ಚರಿಕೆಯನ್ನ ನೀಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ಕಾಣಿಸಿಕೊಂಡ್ರೆ ಗ್ರಹಚಾರ ಬಿಡಿಸುವ ಎಚ್ಚರಿಕೆ ನೀಡಿದ್ದಾರೆ ಎಸ್ಪಿ ಆನಂದಕುಮಾರ್.‌ ಅದ್ರಲ್ಲಿ ಹಳೆ ವೆಪನ್‌ ಕೇಸ್‌ ನಲ್ಲಿ ಆರೋಪಿಯಾಗಿರೋ ರೌಡಿ ಶೀಟರ್‌ ಗೆ ನೀವೆನು ಗುಂಡು ಹಾರಿಸೋದು ನಾವೇ ಪೈರಿಂಗ್‌ ಮಾಡ್ತೀವಿ ಎನ್ನುವ ಮೂಲಕ ಪೊಲೀಸ್‌ ಇಲಾಖೆ ಎಲ್ಲದಕ್ಕು ಸನ್ನದ್ಧವಾಗಿದೆ ಎಂದು ಖಡಕ್‌ ಸಂದೇಶ ನೀಡಿದ್ದಾರೆ.

ಬಾಲ ಬಿಚ್ಚಿದ್ರೆ ಕಟ್ ಎಂದ ಎಸ್ಪಿ..!‌
ಭೀಮಾತೀರದ ಹತ್ಯಾಕಾಂಡಗಳಲ್ಲಿ ಭಾಗಿಯಾಗಿರೋ ರೌಡಿಗಳಿಗೆ ಹಳೆ ಹಂತಕರಿಗೆ ಎಸ್ಪಿ ಆನಂದಕುಮಾರ್‌ ಮುಲಾಜೇ ಇಲ್ಲದಂತೆ ಖಡಕ್ಕಾಗಿ ವಾರ್ನಿಂಗ್‌ ಗಳನ್ನ ಮಾಡಿದ್ದಾರೆ. ಭೀಮಾತೀರದಲ್ಲಿ ಬಾಲ ಬಿಚ್ಚಿದ್ರೆ ಬಾಲವನ್ನೆ ಕಟ್‌ ಮಾಡಿ ಬಿಡ್ತೀವಿ ಎನ್ನುವ ಮೂಲಕ ಇನ್ಮುಂದೆ ಪೊಲೀಸ್‌ ಇಲಾಖೆ ಸಹಿಸೋದಿಲ್ಲ ಎನ್ನುವ ಸಂದೇಶವನ್ನ ನೀಡಿದ್ದಾರೆ..

ಭೀಮಾತೀರದಲ್ಲಿ ಹೈ ಅಲರ್ಟ್..!
ಕಳೆದ ವಾರದ ಹಿಂದಷ್ಟೇ ನಿಮ್ಮ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಭೀಮಾತೀರದ ಚಡಚಣದಲ್ಲಿ ನಡೆಯುತ್ತಿದ್ದ ಅಕ್ರಮ ಮಾವಾದಂಧೆಯ ಬಗ್ಗೆ ಸ್ಟಿಂಗ್‌ ಆಫರೇಶನ್‌ ಮೂಲಕ ಸುದ್ದಿ ಬಿತ್ತರಿಸಿತ್ತು. ಬಳಿಕ ಅಲರ್ಟ್‌ ಆದ ಪೊಲೀಸ್‌ ಇಲಾಖೆ ಭೀಮಾತೀರದಲ್ಲಿ ಹೈ ಅಲರ್ಟ್‌ ಆಗಿದೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಒಬ್ಬೊಬ್ಬರಿಗು ಖಡಕ್ಕಾಗಿ ವಾರ್ನ್‌ ಮಾಡ್ತಿದೆ. ಮಾವಾ ದಂಧೆಯನ್ನು ಬಂದ್‌ ಮಾಡಿಸಿ ಕ್ರಮ ಕೈಗೊಂಡಿದೆ.. ಮಾವಾ ದಂಧೆಕೋರರಿಗು ವಾರ್ನ್‌ ಮಾಡಿದೆ..

ಭೀಮಾತೀರದ ಮೇಲೆ ಅಲೋಕಕುಮಾರ್‌ ಕಣ್ಣು..!
ಅಲೋಕ ಕುಮಾರ್‌ ಎಡಿಜಿಪಿಯಾದ ಮೇಲೆ ಭೀಮಾತೀರದಲ್ಲಿ ಖಾಕಿ ಹೈ ಅಲರ್ಟ್‌ ಆಗಿದೆ ಎನ್ನುವ ಮಾತುಗಳು ಕೇಳಿ ಬರ್ತೀವೆ. ಅಲೋಕ ಕುಮಾರ್‌ ಎಡಿಜಿಪಿ ಕಾನೂನು ಸುವ್ಯವಸ್ಥೆ ಹುದ್ದೆ ಅಲಂಕರಿಸಿದ ಮೇಲೆ ಭೀಮಾತೀರದ ಮೇಲೆ ವಿಶೇಷ ಕಣ್ಣಿಟ್ಟಿದ್ದಾರೆ ಎನ್ನುವ ಮಾಹಿತಿಗಳು ಸಿಗ್ತೀವಿ. ಭೀಮಾತೀರದಲ್ಲಿ ನಡೆಯುತ್ತಿ ಪ್ರತಿ ಬೆಳವಣಿಗೆ, ಅಕ್ರಮಗಳ ಮೇಲೆ ಅಲೋಕಕುಮಾರ್‌ ಹದ್ದಿನ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಬೆಳಗಾವಿ ಉತ್ತರ ವಲಯ ಐಜಿಪಿ ಇದ್ದಾಗ ಅಲೋಕ ಕುಮಾರ್‌ ಭೀಮಾತೀರದ ಅಪರಾಧಿಕ ಚಟುವಟಿಕೆಗಳನ್ನ ಹ್ಯಾಂಡಲ್‌ ಮಾಡಿದ ರೀತಿ ಈ ಭಾಗದ ಜನರನ್ನ ಫೀದಾ ಆಗುವಂತೆ ಮಾಡಿತ್ತು. ಎಡಿಜಿಪಿ ಹುದ್ದೇಗೇರಿದ ಮೇಲು ಅಲೋಕ್‌ ಕುಮಾರ್‌ ತಮ್ಮ ಒಂದು ದೃಷ್ಟಿಯನ್ನ ಭೀಮಾತೀರದ ಮೇಲೆ ಇಟ್ಟಿರೋದು ಸುಳ್ಳಲ್ಲ..!

click me!