ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಿರ್ಮಾಪಕ ಶಂಕರ್ ಗೌಡ ಅವರನ್ನು ವಿಚಾರಣೆ ನಡೆಸಲಾಗಿತ್ತು| ಈ ವೇಳೆ ಸ್ಯಾಂಡಲ್ವುಡ್, ಟಾಲಿವುಡ್, ಬಾಲಿವುಡ್ ನಂಟಿನ ಬಗ್ಗೆ ಬಾಯಿಬಿಟ್ಟಿದ್ದ ಶಂಕರ್ ಗೌಡ| ಈ ಹಿನ್ನೆಲೆಯಲ್ಲಿ ತಾನೀಶ್ಗೆ ನೋಟಿಸ್|
ಬೆಂಗಳೂರು(ಮಾ.18): ಡ್ರಗ್ಸ್ ಪ್ರಕರಣ ಸಂಬಂಧ ತೆಲುಗು ಸಿನಿಮಾ ನಟ ತಾನೀಶ್ ಎಂಬುವವರನ್ನು ಗೋವಿಂದಪುರ ಪೊಲೀಸರು ಬುಧವಾರ ವಿಚಾರಣೆ ನಡೆಸಿದ್ದಾರೆ.
ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಿರ್ಮಾಪಕ ಶಂಕರ್ ಗೌಡ ಅವರನ್ನು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಸ್ಯಾಂಡಲ್ವುಡ್, ಟಾಲಿವುಡ್, ಬಾಲಿವುಡ್ ನಂಟಿನ ಬಗ್ಗೆ ಬಾಯಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ತಾನೀಶ್ಗೆ ನೋಟಿಸ್ ಕೊಡಲಾಗಿತ್ತು.
ಸಿಕ್ಕಿಬಿದ್ದ ಡ್ರಗ್ಸ್ಕೇಸ್ ಕಿಂಗ್ಪಿನ್, ಟಾಲಿವುಡ್ ನಟ ತನುಷ್ಗೂ ಸಂಕಷ್ಟ
ಈ ಸಂಬಂಧ ಬುಧವಾರ ಮಧ್ಯಾಹ್ನ ತಾನೀಶ್ ವಿಚಾರಣೆಗೆ ಹಾಜರಾಗಿದ್ದು, ತಡರಾತ್ರಿ ವರೆಗೆ ವಿಚಾರಣೆ ನಡೆಸಲಾಗಿದೆ. ಬಳಿಕ ಅವರ ರಕ್ತದ ಮಾದರಿ ಮತ್ತು ಮೂತ್ರದ ಸ್ಯಾಂಪಲ್ ಪಡೆದು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.
ವಿಚಾರಣೆ ಸಂದರ್ಭದಲ್ಲಿ ಬೆಂಗಳೂರಿನ ಸಂಜಯ್ನಗರದಲ್ಲಿ ನಿರ್ಮಾಪಕ ಶಂಕರ್ ಗೌಡ ಅವರ ಕಚೇರಿಯಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಹಾಜರಾಗುತ್ತಿದ್ದೆ. ಈ ವೇಳೆ ಕೆಲವರು ಡ್ರಗ್ಸ್ ಸೇವಿಸುತ್ತಿದ್ದರು. ಆದರೆ, ತಾನೂ ಡ್ರಗ್ಸ್ ಸೇವನೆ ಮಾಡುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಗುರುವಾರ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ಕೊಟ್ಟು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.