ಬೆಂಗಳೂರು: 1 ಕೋಟಿಗೆ 5 ಕೋಟಿ ವಾಪಸ್ ಆಸೆ ತೋರಿಸಿ ವಂಚಿಸಿದ್ದ ದಂಪತಿ ಸೆರೆ

Published : Jan 28, 2025, 07:03 AM IST
ಬೆಂಗಳೂರು: 1 ಕೋಟಿಗೆ 5 ಕೋಟಿ ವಾಪಸ್ ಆಸೆ ತೋರಿಸಿ ವಂಚಿಸಿದ್ದ ದಂಪತಿ ಸೆರೆ

ಸಾರಾಂಶ

ಆರೋಪಿ ರೇಖಾ ಮಹಾನ್ ವಂಚಕಿಯಾಗಿದ್ದು, ಈಕೆಯ ವಿರುದ್ದ ಈ ಹಿಂದೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 80ಕ್ಕೂ ಅಧಿಕ ವಂಚನೆ ಪ್ರಕರಣಗಳು ದಾಖಲಾಗಿವೆ. 3 ವರ್ಷದ ಹಿಂದೆ ಮಾಜಿ ಸಚಿವ ರಾಜೂ ಗೌಡ ಹೆಸರು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ಕೆಲವರಿಂದ ಲಕ್ಷಾಂತರ ರು. ಪಡೆದು ವಂಚಿಸಿದ್ದಳು. 

ಬೆಂಗಳೂರು(ಜ.28): ಬೇರೊಬ್ಬರು ತನ್ನ ಬ್ಯಾಂಕ್ ಖಾತೆಗೆ ಹಾಕಿರುವ ಹಣ ಡ್ರಾ ಮಾಡುವುದಕ್ಕಾಗಿ ತೆರಿಗೆ ಕಟ್ಟಲು ಒಂದು ಕೋಟಿ ರು. ಕೊಟ್ಟರೆ 5 ಕೋಟಿ ರು. ಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ 25.75 ಕೋಟಿ ಪಡೆದು ವಂಚಿಸಿದ ಆರೋಪದಡಿ ಮಹಿಳೆ ಸೇರಿ 3 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ರೇಖಾ, ಆಕೆಯ ಪತಿ ಮಂಜುನಾಥಚಾರಿ ಮತ್ತು ಚೇತನ್ ಬಂಧಿತರು. ಉದ್ಯಮಿನಿಸಾರ್ ಅಹಮ್ಮದ್ ಎಂಬುವವರು ನೀಡಿದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಖಾಸಗಿ ಬ್ಯಾಂಕ್ ಹಾಗೂ ಫೈನಾನ್ಗಳಲ್ಲಿ ರೇಖಾ ಸಾಲ ಕೊಡಿಸುತ್ತಿದ್ದಳು. ಈ ಬಗ್ಗೆ ತಿಳಿದು ಕೊಂಡಿದ್ದ ಉದ್ಯಮಿ ನಿಸಾರ್‌ಈಕೆಯನ್ನು ಸಂಪರ್ಕಿಸಿ ಸಾಲ ಕೊಡಿಸುವಂತೆ ಕೇಳಿದ್ದರು. 

35 ಜನರ ಆಧಾರ್ ಕಾರ್ಡ್ ಮೇಲೆ ಮೈಕ್ರೋ ಫೈನಾನ್ಸ್ ಸಾಲ ಪಡೆದು ಪರಾರಿಯಾದ ದಂಪತಿ!

ಆಗ ರೇಖಾ ಮತ್ತು ಸಹಚರರು ನಿಸಾರ್ ಅವ ರನ್ನು ವಂಚಿಸಲು ಸಂಚು ರೂಪಿಸಿದ್ದು, ನಗರ ದಲ್ಲಿ 2010ರಲ್ಲಿ ನಡೆದ ಕಾರ್ಲಟನ್ ಟವರ್ ಅಗ್ನಿ ದುರಂತ ಪ್ರಕರಣದಲ್ಲಿ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದಾನೆ. ನಾನು ಸಾಕ್ಷಿ ಹೇಳದಂತೆ ಕಾರ್ಲಟನ್ ಟವರ್ ಮಾಲೀಕರು ನನ್ನ ಖಾಸಗಿ ಅಕೌಂಟ್‌ಗೆ 25 ಕೋಟಿ ರು. ಹಣ ಹಾಕಿದ್ದಾರೆ. ಈ ಹಣ ಡ್ರಾ ಮಾಡಲು ನಾನು ತೆರಿಗೆ ಪಾವತಿ ಸಬೇಕು. ಹೀಗಾಗಿ ನೀವು 1 ಕೋಟಿ ರು. ಕೊಟ್ಟರೆ ನಾನು 5 ಕೋಟಿ ರು. ಕೊಡುವುದಾಗಿ ಆಮಿಷವೊಡ್ಡಿದ್ದಳು. 

WhatsApp ಗ್ರೂಪ್‌ನಲ್ಲಿ ಹೂಡಿಕೆ ಮಾಡಲು ಹೋಗಿ 90 ಲಕ್ಷ ರುಪಾಯಿ ಕಳೆದುಕೊಂಡ ನಿವೃತ್ತ ಜಡ್ಜ್!

ಇದನ್ನು ನಂಬಿದ ನಿಸಾರ್, ವಿವಿಧ ಹಂತಗಳಲ್ಲಿ ಆರೋಪಿಗಳಿಗೆ 5.75 ಕೋಟಿ ರು. ಹಣ ನೀಡಿದ್ದಾರೆ. ಬಳಿಕ ಯಾವುದೇ ಹಣ ನೀಡದೆ ರೇಖಾ ಮತ್ತು ಸಹಚರರು ವಂಚಿಸಿದಾಗ ನಿಸಾರ್ ಸಿಸಿಬಿಗೆ ದೂರು ನೀಡಿದ್ದರು.

ವಂಚಕಿ ರೇಖಾ ವಿರುದ್ದ ಇದೆ 80 ಕೇಸ್ 

ಆರೋಪಿ ರೇಖಾ ಮಹಾನ್ ವಂಚಕಿಯಾಗಿದ್ದು, ಈಕೆಯ ವಿರುದ್ದ ಈ ಹಿಂದೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 80ಕ್ಕೂ ಅಧಿಕ ವಂಚನೆ ಪ್ರಕರಣಗಳು ದಾಖಲಾಗಿವೆ. 3 ವರ್ಷದ ಹಿಂದೆ ಮಾಜಿ ಸಚಿವ ರಾಜೂ ಗೌಡ ಹೆಸರು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ಕೆಲವರಿಂದ ಲಕ್ಷಾಂತರ ರು. ಪಡೆದು ವಂಚಿಸಿದ್ದಳು. ಈ ಸಂಬಂಧ ಮಾಜಿ ಸಚಿವರು ನೀಡಿದ ದೂರಿನ ಮೇರೆಗೆ ಸುರಪುರ ಠಾಣೆ ಪೊಲೀಸರು ರೇಖಾಳನ್ನು ಬಂಧಿಸಿ ಜೈಲಿಗಟ್ಟಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು