Telangana: ತಂದೆಯೆದುರೇ ಕಿಡ್ನ್ಯಾಪ್‌ ಆದ ಯುವತಿ..! ಸಿಸಿ ಕ್ಯಾಮೆರಾದಲ್ಲಿ ಸೆರೆ

Published : Dec 20, 2022, 05:38 PM IST
Telangana: ತಂದೆಯೆದುರೇ ಕಿಡ್ನ್ಯಾಪ್‌ ಆದ ಯುವತಿ..! ಸಿಸಿ ಕ್ಯಾಮೆರಾದಲ್ಲಿ ಸೆರೆ

ಸಾರಾಂಶ

ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬ ಯುವತಿಯನ್ನು ಕಾರಿನತ್ತ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ತೆಲಂಗಾಣದ (Telangana) ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಮಂಗಳವಾರ 18 ವರ್ಷದ ಯುವತಿಯನ್ನು (Girl) ಆಕೆಯ ತಂದೆಯ (Father) ಎದುರೇ ಪುರುಷರ (Men) ಗುಂಪೊಂದು ಅಪಹರಿಸಿದೆ (Kidnap) ಎಂದು ವರದಿಯಾಗಿದೆ. ಘಟನೆಯ ಸಿಸಿಟಿವಿ (CCTV) ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದೆ. ಬಾಲಕಿ ತನ್ನ ತಂದೆಯೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಈ ಸಂಬಂಧ ತೆಲಂಗಾಣ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಈ ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಯುವತಿ ಒಬ್ಬನ ಜತೆ ಸಂಬಂಧ ಹೊಂದಿದ್ದು, ಆತ ಅಪಹರಣದಲ್ಲಿ ಭಾಗಿಯಾಗಿರಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಹಿಂದೆ ಆಕೆ ಅಪ್ರಾಪ್ತೆಯಾಗಿದ್ದಾಗ ಆತನೊಂದಿಗೆ (ಅವಳ ಪ್ರೇಮಿ) ಓಡಿ ಹೋಗಿದ್ದರು ಎಂದೂ ಹೇಳಲಾಗಿದೆ. ಈ ಘಟನೆಯಲ್ಲಿ ನಾಲ್ವರು ಭಾಗಿಯಾಗಿದ್ದಾರೆ. ಈ ಹಿಂದೆ ಯುವತಿ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಈಗ ಅವಳು ವಯಸ್ಕಳಾದ ಕಾರಣ, ಅವನು (ಅವಳ ಪ್ರೇಮಿ) ಅವಳನ್ನು ಕರೆದೊಯ್ದಿರಬಹುದು ಎಂದು ವೇಮುಲವಾಡದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ನಾಗೇಂದ್ರ ಚಾರಿ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಇದನ್ನು ಓದಿ: Bengaluru crime: ಕೆಲಸ ಆಮೀಷವೊಡ್ಡಿ ಅಪಹರಿಸಿದ ಫೇಸ್ಬುಕ್‌ ಗೆಳೆಯ!

ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬ ಯುವತಿಯನ್ನು ಕಾರಿನತ್ತ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಅವನು ಅವಳನ್ನು ಹಿಂಬದಿಯ ಸೀಟಿಗೆ ತಳ್ಳಿದನು. ಇನ್ನೊಬ್ಬ ವ್ಯಕ್ತಿ ಅವಳ ತಂದೆಯ ಬಳಿಗೆ ಹೋದಾಗ ಅವನನ್ನು ವಿರೋಧಿಸುವುದನ್ನು ತಡೆಯುತ್ತಾನೆ. ಬಾಲಕಿಯನ್ನು ಕಾರಿನೊಳಗೆ ತಳ್ಳಿದ ಕೂಡಲೇ ಆಕೆಯ ರಕ್ಷಣೆಗೆ ಬರುತ್ತಿದ್ದ ತಂದೆಯನ್ನು ಪಕ್ಕಕ್ಕೆ ತಳ್ಳಿ ಕಾರು ವೇಗವಾಗಿ ಸಾಗಿದೆ.

ಅವರನ್ನು ಪತ್ತೆಹಚ್ಚಲು ಮತ್ತು ಬಾಲಕಿಯನ್ನು ರಕ್ಷಿಸಲು 3 ತಂಡಗಳನ್ನು ಮಾಡಲಾಗಿದೆ ಎಂದು ಡಿಎಸ್ಪಿ ಹೇಳಿದರು. ಅಲ್ಲದೆ, ಅವರು ತಾಂತ್ರಿಕ ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Telangana: ಎಂಗೇಜ್‌ಮೆಂಟ್ ದಿನವೇ ಮನೆಗೆ ನುಗ್ಗಿ 100ಕ್ಕೂ ಹೆಚ್ಚು ಜನರಿಂದ ಮಹಿಳೆ ಕಿಡ್ನ್ಯಾಪ್‌..!

ಅಪಹರಣ ಪ್ರಕರಣಕ್ಕೆ ಟ್ವಿಸ್ಟ್‌..!
ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಯುವತಿಯೊಬ್ಬಳು ಅಪರಿಚಿತ ವ್ಯಕ್ತಿಗಳಿಂದ ಅಪಹರಣಕ್ಕೊಳಗಾದ ಕೆಲವು ಗಂಟೆಗಳ ನಂತರ ಈ ಪ್ರಕರಣ ಟ್ವಿಸ್ಟ್‌ ಪಡೆದುಕೊಂಡಿದೆ. ಆಕೆ ತನ್ನ ಪ್ರಿಯಕರನೊಂದಿಗೆ ಸ್ವಇಚ್ಛೆಯಿಂದ ಓಡಿಹೋಗಿರುವುದಾಗಿ ಯುವತಿ ಬಹಿರಂಗಪಡಿಸಿದ್ದಾಳೆ. 18ರ ಹರೆಯದ ಶಾಲಿನಿ ತನ್ನ 22 ವರ್ಷದ ಗೆಳೆಯ ಕಟ್ಕುರಿ ಜ್ಞಾನೇಶ್ವರ್  ದಲಿತನಾಗಿರುವುದರಿಂದ ಮದುವೆಯಾಗಲು ಆಕೆಯ ಪೋಷಕರು ವಿರೋಧಿಸಿದರು ಎಂದು ಹೇಳಿದರು.

ಮಂಗಳವಾರ ಡಿಸೆಂಬರ್ 20 ರಂದು ಮುಸುಕುಧಾರಿಗಳಿಂದ ಆಕೆಯ ಅಪಹರಣದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಚಂದೂರ್ತಿ ಮಂಡಲದ ಮೂಡಪಲ್ಲಿ ಗ್ರಾಮದ ದೃಶ್ಯಗಳಲ್ಲಿ ವ್ಯಕ್ತಿಯೊಬ್ಬ ಶಾಲಿನಿಯನ್ನು ಬಲವಂತವಾಗಿ ಎಳೆದುಕೊಂಡು ಕಾರಿಗೆ ತಳ್ಳಿ ವೇಗವಾಗಿ ಹೋಗುತ್ತಿರುವುದನ್ನು ತೋರಿಸಿದೆ. ಆ ವ್ಯಕ್ತಿಗೆ ಇಬ್ಬರು ಅಥವಾ ಮೂವರು ಪುರುಷರು ಸಹಾಯ ಮಾಡಿದರು.

ಇದನ್ನೂ ಓದಿ: 'ಕಿಡ್ನಾಪ್‌ ಆಗಿಲ್ಲ, ನಾನೇ ಓಡಿಬಂದಿದ್ದೇನೆ..' ಸುಬ್ರಮಣ್ಯದಿಂದ ನಾಪತ್ತೆಯಾದ ಮಹಿಳೆಯ ವಿಡಿಯೋ ವೈರಲ್ !

ಆದರೆ, ಮಂಗಳವಾರ ಮಧ್ಯಾಹ್ನ ಶಾಲಿನಿ ಅವರು ಜ್ಞಾನೇಶ್ವರ್ ಅವರೊಂದಿಗೆ ಮನಃಪೂರ್ವಕವಾಗಿ ಹೋಗಿರುವುದಾಗಿ ಬಹಿರಂಗಪಡಿಸಿದರು. ಮದುವೆ ಸಮಾರಂಭದ ನಂತರ ಬಿಡುಗಡೆಯಾದ ವಿಡಿಯೋ ಹೇಳಿಕೆಯಲ್ಲಿ, “ನಾವು ಪ್ರೀತಿಸಿ ಒಂದು ವರ್ಷದ ಹಿಂದೆ ಮದುವೆಯಾಗಿದ್ದೇವೆ. ನಾನು ಅಪ್ರಾಪ್ತ ವಯಸ್ಕಳಾಗಿದ್ದರಿಂದ, ಮದುವೆಯನ್ನು ಮಾನ್ಯವೆಂದು ಪರಿಗಣಿಸಲಾಗಿಲ್ಲ. ನನ್ನ ಪೋಷಕರು ಪೊಲೀಸ್ ದೂರು ದಾಖಲಿಸಿ, ಜೈಲಿಗೆ ಕಳುಹಿಸಿದರು ಮತ್ತು ನನ್ನನ್ನು ಮನೆಗೆ ಕರೆದೊಯ್ದರು. ದಲಿತ ಕುಟುಂಬ ಎಂಬ ಕಾರಣಕ್ಕೆ ನನ್ನ ಕುಟುಂಬ ಅವರನ್ನು ಒಪ್ಪಲಿಲ್ಲ ಎಂದೂ ಶಾಲಿನಿ ಹೇಳಿದ್ದಾರೆ. 

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಶಾಲಿನಿ ಕುಟುಂಬದ ದೂರಿನ ಆಧಾರದ ಮೇಲೆ ಜ್ಞಾನೇಶ್ವರ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಆಗ ಶಾಲಿನಿಗೆ 17 ವರ್ಷ. ಆಕೆಯ ಕುಟುಂಬವು ಮುನ್ನೂರು ಕಾಪು ಸಮುದಾಯಕ್ಕೆ ಸೇರಿದ್ದು, ತೆಲಂಗಾಣದಲ್ಲಿ ಇದನ್ನು ಹಿಂದುಳಿದ ವರ್ಗಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ ಎಂದು ತಿಳಿದುಬಂದಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!