ಪಾರ್ಟಿಗೆ ಕರೆದು ಸಹಪಾಠಿ ಮೇಲೆ ಲೈಂಗಿಕ ದೌರ್ಜನ್ಯ

Kannadaprabha News   | Asianet News
Published : Dec 16, 2020, 07:26 AM ISTUpdated : Dec 16, 2020, 07:29 AM IST
ಪಾರ್ಟಿಗೆ ಕರೆದು ಸಹಪಾಠಿ ಮೇಲೆ ಲೈಂಗಿಕ ದೌರ್ಜನ್ಯ

ಸಾರಾಂಶ

ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿ ಪೊಲೀಸ್‌ ವಶಕ್ಕೆ| ಸಂಬಂಧ ದೂರು ನೀಡಿ​ದ ಸಂತ್ರಸ್ತ ಯುವತಿ| ತಡರಾತ್ರಿಯಾಗಿದ್ದರಿಂದ ಎಲ್ಲ ವಿದ್ಯಾ​ರ್ಥಿ​ಗಳು ಆರೋ​ಪಿಯ ಮನೆ​ಯಲ್ಲೇ ಮಲ​ಗಿ​ದ್ದರು|  

ಬೆಂಗಳೂರು(ಡಿ.16): ಸಹ​ಪಾಠಿ ಯುವ​ತಿ​ಯನ್ನು ಔತ​ಣ​ಕ್ಕೆಂದು ಕರೆದು ಲೈಂಗಿಕ ದೌರ್ಜನ್ಯ ಎಸ​ಗಿದ ಆರೋ​ಪದ ಮೇಲೆ ಎಂಜಿ​ನಿ​ಯ​ರಿಂಗ್‌ ವಿದ್ಯಾ​ರ್ಥಿ​ಯನ್ನು ರಾಜ​ರಾ​ಜೇ​ಶ್ವ​ರಿ​ನ​ಗರ ಠಾಣೆ ಪೊಲೀ​ಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಭಾರ​ತ ಮೂಲದ ತುಷಾರ್‌ (23) ಎಂಬ ಎಂಜಿ​ನಿ​ಯ​ರಿಂಗ್‌ ವಿದ್ಯಾ​ರ್ಥಿ​ಯನ್ನು ವಶಕ್ಕೆ ಪಡೆ​ಯ​ಲಾ​ಗಿದ್ದು, ಈ ಸಂಬಂಧ ಸಂತ್ರಸ್ತ ಯುವತಿ ದೂರು ನೀಡಿ​ದ್ದಾರೆ ಎಂದು ಪೊಲೀ​ಸರು ಹೇಳಿ​ದ​ರು.

ಸಂತ್ರಸ್ತೆ ಹಾಗೂ ಆರೋಪಿ ನಗರದ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಾಜರಾಜೇಶ್ವರಿನಗರದ ಅಪಾ​ರ್ಟ್‌​ಮೆಂಟ್‌ನ ಫ್ಲ್ಯಾಟ್‌​ನಲ್ಲಿ ಆರೋಪಿ ವಾಸ​ವಾ​ಗಿ​ದ್ದಾನೆ. ಅದೇ ಫ್ಲ್ಯಾಟ್‌​ನಲ್ಲಿ ಡಿ.9ರಂದು ಔತಣಕೂಟ ಇಟ್ಟುಕೊಂಡಿದ್ದರು. ಯುವತಿ ಸೇರಿ ಎಲ್ಲ ಸಹಪಾಠಿಗಳನ್ನು ಆರೋಪಿ, ಔತಣಕೂಟಕ್ಕೆ ಆಹ್ವಾನಿಸಿದ್ದ. ತನ್ನ ಮನೆಗೆ ಬಂದಿದ್ದ ಸ್ನೇಹಿ​ತರ ಜತೆ ಆರೋ​ಪಿ ತಡರಾತ್ರಿ ಒಂದು ಗಂಟೆಯವರೆಗೂ ಮದ್ಯ ಕುಡಿದು ಊಟ ಮಾಡಿದ್ದಾನೆ ಎಂದು ಪೊಲೀ​ಸರು ತಿಳಿ​ಸಿ​ದ್ದಾ​ರೆ.

ಬ್ರೇಕಪ್‌ ಬಳಿಕ ಸ್ತ್ರೀಯರು ರೇಪ್‌ ದೂರು ನೀಡ್ತಾರೆ: ಮಹಿಳಾ ಆಯೋಗ ಅಧ್ಯಕ್ಷೆ!

ಬಳಿಕ ತಡರಾತ್ರಿಯಾಗಿದ್ದರಿಂದ ಎಲ್ಲ ವಿದ್ಯಾ​ರ್ಥಿ​ಗಳು ಆರೋ​ಪಿಯ ಮನೆ​ಯಲ್ಲೇ ಮಲ​ಗಿ​ದ್ದರು. ಯುವತಿ ಪ್ರತ್ಯೇಕ ಕೊಠಡಿಯಲ್ಲಿ ನಿದ್ರೆಗೆ ಜಾರಿದ್ದರು. ಆಗ ಕೊಠಡಿಗೆ ಹೋಗಿದ್ದ ಆರೋಪಿ, ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ​ದ್ದಾ​ನೆ. ಎಚ್ಚರಗೊಂ​ಡ ಯುವತಿ ಜೋರಾ​ಗಿ ಕೂಗಿ​ಕೊಂಡಿ​ದ್ದಾರೆ. ಅಲ್ಲ​ದೆ, ಈ ಸಂಬಂಧ ಪೊಲೀಸ್‌ ಠಾಣೆ​ಯ​ಲ್ಲಿ ದೂರು ನೀಡಿದ್ದರು. ಹೀಗಾಗಿ ಆರೋ​ಪಿ​ಯ​ನ್ನು ವಶಕ್ಕೆ ಪಡೆದು ವಿಚಾ​ರಣೆ ನಡೆ​ಸ​ಲಾ​ಗು​ತ್ತಿದೆ ಎಂದು ಪೊಲೀ​ಸರು ಹೇಳಿ​ದ​ರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!