
ಬೆಂಗಳೂರು (ಡಿ.15): ಸಂಜನಾ ಬೇಲ್ ಆದ ಬೆನ್ನಲ್ಲೇ,ಜೈಲಿನಲ್ಲಿ ಇರುವ ರಾಗಿಳಿ ಅಳಲು ತೋಡಿಕೊಂಡಿದ್ದಾರೆ. ರಾಗಿಣಿ ಅಷ್ಟೇ ಅಲ್ಲದೆ ಅವರ ತಂದೆ ತಾಯಿಯೂ ಈ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಸಿಸಿಬಿ ಜಂಟಿ ಪೊಲೀಸ್ ಆಯುಕ್ತರನ್ನ ಭೇಟಿ ಮಾಡಲು ರಾಗಿಣಿ ತಂದೆ ತಾಯಿ ತೆರಳಿದ್ದಾರೆ. ರಾಗಿಣಿ ತಂದೆ ರಾಕೇಶ್, ತಾಯಿ ರೋಹಿಣಿ ಆಯುಕ್ತರನ್ನು ಭೇಟಿ ಮಾಡಲು ತೆರಳಿದ್ದು ತನಿಖೆಯ ಮಾಹಿತು ಪಡೆಯಲಿದ್ದಾರೆ.
ಇಸ್ಲಾಂಗೆ ನಟಿ ಸಂಜನಾ ಬಲವಂತದ ಮತಾಂತರ : ಪೊಲೀಸರಿಗೆ ದೂರು
ತನಿಖೆಯಿಂದಾಗಿ ಏನಾದ್ರು ಸಮಸ್ಯೆ ಆಗ್ತಿದ್ಯಾ..? ಸಂಜನಾಗೆ ಹೇಗೆ ಬೇಲ್ ಸಿಕ್ಕಿದೆ ಎಂದು ಈ ಬಗ್ಗೆ ಮಾಹಿತಿ ಪಡೆಯಲು ಪೋಷಕರು ಆಗಮಿಸಿದ್ದಾರೆ.
ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಜೊತೆ ರಾಗಿಣಿ ಪೋಷಕರು ಆಗಮಿಸಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ರಾಗಿಣಿ ಅರ್ಜಿ ಹಾಕಿದ್ದು, NDPS ಕೋರ್ಟ್,ಹೈಕೋರ್ಟ್ ನಲ್ಲಿ ಜಾಮೀನು ಸಿಗದ ಕಾರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸದ್ಯ ತಮ್ಮ ಮಗಳಿಗೂ ಬೇಲ್ ಕೊಡಿಸುವತ್ತ ಪೋಷಕರು ತಯಾರಿ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ