ತೀರ್ಥಹಳ್ಳಿ: ಸೋಲಾರ್ ಪ್ಯಾನಲ್ ಪ್ಲೇಟ್ ಕಳವು ಪ್ರಕರಣ: ಗ್ರಾಪಂ ಕಂಪ್ಯೂಟರ್ ಆಪರೇಟರ್ ಸೇರಿ ಇಬ್ಬರ ಬಂಧನ

By Ravi JanekalFirst Published Feb 4, 2023, 9:47 AM IST
Highlights

6 ಲಕ್ಷ ರೂಪಾಯಿ ಮೌಲ್ಯದ ಸೋಲಾರ್ ಪ್ಯಾನಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಸೇರಿದಂತೆ ಇಬ್ಬರನ್ನು ಬಂದಿಸಲಾಗಿದೆ.

ಶಿವಮೊಗ್ಗ (ಫೆ.4) : 6 ಲಕ್ಷ ರೂಪಾಯಿ ಮೌಲ್ಯದ ಸೋಲಾರ್ ಪ್ಯಾನಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಸೇರಿದಂತೆ ಇಬ್ಬರನ್ನು ಬಂದಿಸಲಾಗಿದೆ. ತೀರ್ಥಹಳ್ಳಿಯ ಗೃಹಸಚಿವ ಆರಗ ಜ್ಞಾನೇಂದ್ರ ಅವರ ವಿಧಾನಸಭಾ ಕ್ಷೇತ್ರವಾದ ಉಂಬೈಬೈಲ್ ಗ್ರಾಪಂ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಸುಮಾರು 6 ಲಕ್ಷ ರೂ. ಮೌಲ್ಯದ ಸೋಲಾರ್ ಪ್ಯಾನೆಲ್ ಪ್ಲೇಟ್‌ಗಳ ಕಳವು ಮಾಡಲಾಗಿತ್ತು. ಈ ಪ್ರಕರಣದಲ್ಲಿ ಗ್ರಾಪಂ ಕಂಪ್ಯೂಟರ್ ಆಪರೇಟರ್ ಗಳೇ ಕಳುವು ಮಾಡಿರುವ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆ ತುಂಗಾನಗರ ಠಾಣೆ ಪೊಲೀಸರು ಗ್ರಾಪಂ ಸಿಬ್ಬಂದಿಯನ್ನು ಬಂಧಿಸಿದ್ದಾರೆ. 

ಉಂಬೈಬೈಲ್‌ನ ಮಧು ಮತ್ತು ಧನು ಬಂಧಿತ ಆರೋಪಿಗಳು. ಮಧು ಅದೇ ಗ್ರಾಪಂ ಪಿಡಿಒ ಕಚೇರಿಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿದ್ದ. 2018-19ನೇ ಸಾಲಿನಲ್ಲಿ ಉಂಬ್ಳೆಬೈಲು ಗ್ರಾಪಂನ ಕಣಗಲಸರ ಗ್ರಾಮದ ಚಿಕ್ಕೆರೆ ಕೆರೆ ಹತ್ತಿರ 6 ಲಕ್ಷ ರೂ. ಮೌಲ್ಯದ ಸೋಲಾರ‌ ಪ್ಯಾನೆಲ್ ಪ್ಲೇಟ್‌ಗಳನ್ನು ಅಳವಡಿಸಿದ್ದು 2022 ಸೆಪ್ಟೆಂಬರ್‌ನಲ್ಲಿ ಕಳವು ಮಾಡಲಾಗಿತ್ತು. 

ಪಿಡಿಒ ಎಂ.ಅಮಿತ್‌ರಾಜ್ 2022ರ ಸೆ.13ರಂದು ತುಂಗಾನಗರ ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಿದ್ದು, ತುಂಗಾನಗರ ಪೊಲೀಸರು ಉಂಬೈಬೈಲ್‌ನ ಧನು ಎಂಬಾತನನ್ನು ಬಂಧಿಸಿದ್ದರು. ಆ ಬಳಿಕ ಮಧು ನಾಪತ್ತೆಯಾಗಿದ್ದು ನಂತರ ತಾನಾಗಿಯೇ ಠಾಣೆಗೆ ಬಂದು ಶರಣಾಗಿದ್ದಾನೆ. 

ಕಾರು ಕಳವು ಪ್ರಕರಣ: ಮತ್ತಿಬ್ಬರ ಬಂಧನ, 3 ಲಕ್ಷ ಮೌಲ್ಯದ ಸ್ವತ್ತು ವಶ

ಇದೀಗ ತುಂಗಾನಗರ ಠಾಣೆಯ ಪೊಲೀಸರು ಕಳುವು ಪ್ರಕರಣದ ಹಿಂದಿರುವ ಸತ್ಯಾಂಶವನ್ನು ತನಿಖೆಯ ಮೂಲಕ ಬಯಲು ಮಾಡಬೇಕಾಗಿದೆ

click me!