- ಶಾಲಾ ಬಸ್‌ನ್ನು ಅಡಗಟ್ಟಿ ಬಾಲ​ಕಿ​ಯರ ಮೇಲೆ ಹಲ್ಲೆ: ನಾಲ್ವರ ಬಂಧ​ನ

By Kannadaprabha NewsFirst Published Jun 17, 2023, 4:30 AM IST
Highlights

ಭಾಲ್ಕಿ ತಾಲೂ​ಕಿನ ಬರದಾಪೂರ -ಡಾವರಗಾಂವ್‌ ಮಾರ್ಗ ಮಧ್ಯದ ಸೇತುವೆ ಮಧ್ಯ ಡಾವರಗಾಂವ್‌ ಗ್ರಾಮದ ಕೆಲವು ಹುಡುಗರು ಶಾಲಾ ಬಸ್‌ನ್ನು ಅಡಗಟ್ಟಿಬಸ್‌​ನ​ಲ್ಲಿದ್ದ ಅಪ್ರಾಪ್ತ ಬಾಲ​ಕಿ​ಯರಿಗೆ ಅವಾಚ್ಯ ಶಬ್ಧಗ​ಳಿಂದ ನಿಂದಿಸಿರುವ ಹಿನ್ನೆ​ಲೆ​ ಪೋಕ್ಸೋ ಕಾಯ್ದೆ​ಯಡಿ ಪ್ರಕ​ರಣ ದಾಖ​ಲಿ​ಸಿ​ಕೊಂಡು ನಾಲ್ವ​ರನ್ನು ಬಂಧಿಸಿ ನ್ಯಾಯಾಂಗ ಬಂಧ​ನಕ್ಕೆ ಒಪ್ಪಿ​ಸಿದ ಘಟನೆ ನಡೆ​ದಿದೆ.

ಬೀದ​ರ್‌ (ಜೂ.17) ಭಾಲ್ಕಿ ತಾಲೂ​ಕಿನ ಬರದಾಪೂರ -ಡಾವರಗಾಂವ್‌ ಮಾರ್ಗ ಮಧ್ಯದ ಸೇತುವೆ ಮಧ್ಯ ಡಾವರಗಾಂವ್‌ ಗ್ರಾಮದ ಕೆಲವು ಹುಡುಗರು ಶಾಲಾ ಬಸ್‌ನ್ನು ಅಡಗಟ್ಟಿಬಸ್‌​ನ​ಲ್ಲಿದ್ದ ಅಪ್ರಾಪ್ತ ಬಾಲ​ಕಿ​ಯರಿಗೆ ಅವಾಚ್ಯ ಶಬ್ಧಗ​ಳಿಂದ ನಿಂದಿಸಿರುವ ಹಿನ್ನೆ​ಲೆ​ ಪೋಕ್ಸೋ ಕಾಯ್ದೆ​ಯಡಿ ಪ್ರಕ​ರಣ ದಾಖ​ಲಿ​ಸಿ​ಕೊಂಡು ನಾಲ್ವ​ರನ್ನು ಬಂಧಿಸಿ ನ್ಯಾಯಾಂಗ ಬಂಧ​ನಕ್ಕೆ ಒಪ್ಪಿ​ಸಿದ ಘಟನೆ ನಡೆ​ದಿದೆ.

ಗುರು​ವಾರ ಸಂಜೆ 6ರ ಸುಮಾ​ರಿಗೆ ಕಾಲೇಜಿನ ವಿದ್ಯಾರ್ಥಿ ಅಭಿಶೇಕ ಸಂತೋಷ ಮದರಗಾಂವೆ ಹಾಗೂ ಆತನ ಐದಾರು ಜನ ಸ್ನೇಹಿತರು ಕೂಡಿ 4 ಬೈಕ್‌​ಗಳ ಮೇಲೆ ಶಾಲಾ ಬಸ್ಸಿಗೆ ಅಡ್ಡಗಟ್ಟಿನಿಲ್ಲಿಸಿ ಒಮ್ಮೇಲೆ ಬಸ್ಸಿನೊಳಗೆ ಬಂದು ಪೃಥ್ವಿ​ರಾಜ್‌ ಎಂಬ ವಿದ್ಯಾ​ರ್ಥಿಗೆ ಅವಾಚ್ಯ ಶಬ್ಧಗ​ಳಿಂದ ನಿಂದಿ​ಸಿ​ ಹಲ್ಲೆ ಮಾಡುತ್ತಿದ್ದ ಸಂದರ್ಭ ಜಗಳ ಬಿಡಿ​ಸಲು ಮುಂದಾದ ಅಪ್ರಾಪ್ತ ವಿದ್ಯಾ​ರ್ಥಿ​ನಿ​ಯರ ಖಾಸಗಿ ಅಂಗ​ಗಳನ್ನು ಮುಟ್ಟಿ, ಹಿಂದಕ್ಕೆ ತಳ್ಳಿ ಹಲ್ಲೆ ಮಾಡಿ​ದ್ದಾರೆ. ನಂತರ ಬಸ್‌ನ ಹಿಂದಿನ ಗಾಜು ಒಡೆದು ಜೀವ ಬೆದ​ರಿ​ಕೆ​ಯೊ​ಡ್ಡಿ​ದ್ದಾ​ರೆ. ಈ ಸಂದ​ರ್ಭ​ದಲ್ಲಿ ಬಸ್‌ ಚಾಲಕ ಸಂಜು​ಕು​ಮಾರ ಸಹ ಹಲ್ಲೆಗೆ ಪ್ರಚೋ​ದನೆ ನೀಡಿ​ದ್ದಾ​ನೆ ಎಂದು ಕಾಲೇ​ಜಿನ ಪ್ರಾಂಶು​ಪಾಲ ಮಸ್ತಾನ್‌ ವಲಿ ಖಟ​ಕ​ಚಿಂಚೋಳಿ ಠಾಣೆ​ಯಲ್ಲಿ ದೂರು ದಾಖ​ಲಾ​ಗಿ​ದೆ.

ಅಪ್ರಾಪ್ತ ಬಾಲಕಿ ರೇಪ್‌ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಾಕಿದ ಗಾಯಕನ ಬಂಧನ

ಡಾವ​ರ​ಗಾಂವ್‌ ಗ್ರಾಮ ಮೂಲದ ಅಭಿ​ಷೇಕ, ಸಿದ್ಧಲಿಂಗ ಕುಂಬಾ​ರ, ಶೇಖ್‌ ಅವೇಶ ಮಂಜಲಿಸಾಬ, ಶ್ರೀಕಾಂತ ಮೇತ್ರೆ, ಕುರಬಬೇಳಗಿ ಗ್ರಾಮದ ಮಲಿಕಾರ್ಜುನ ಮೇತ್ರೆ, ಮಹೇಂದ್ರ ವೆಂಕಟ ಮೇತ್ರೆ ಹಾಗೂ ಬಸ್‌ ಚಾಲಕ ಸಂಜು​ಕು​ಮಾರ ವಿರುದ್ಧ ದೂರು ದಾಖ​ಲಿ​ಸಿದ್ದು ತಪ್ಪಿ​ತ​ಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಖಟ​ಕ​ಚಿಂಚೋಳಿ ಪೊಲೀಸ್‌ ಠಾಣೆ​ಯಲ್ಲಿ ಕಲಂ 109,323,341,427,504,506 ಜೊತೆ 149 ಐಪಿಸಿ ಮತ್ತು ಕಲಂ: 08 ಫೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

'ಅರೆಬೆತ್ತಲೆ ದೇಹದ ಮೇಲೆ ತನ್ನದೇ ಮಕ್ಕಳಿಂದ ಆರ್ಟ್‌' ರೆಹಾನಾ ಫಾತಿಮಾ ವಿರುದ್ಧ ಪೋಕ್ಸೋ ಕೇಸ್‌ ರದ್ದು ಮಾಡಿದ ಹೈಕೋರ್ಟ್‌!

ಘಟನೆ ಖಂಡಿಸಿ ವಿದ್ಯಾರ್ಥಿಗಳು, ಪಾಲಕರು, ಕೆಲ ಸಂಘಟನೆಗಳ ಪ್ರಮುಖರು ಕಿಡಿಗೇಡಿ ಯುವಕರನ್ನು ಕೂಡಲೇ ಬಂ​ಧಿಸಲು ಆಗ್ರಹಿಸಿ ಕೆಲ ಕಾಲ ಪ್ರತಿಭಟನೆ ಕೂಡ ನಡೆಸಿದ್ದಾರೆ.

click me!