ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್;  ಆದಿತ್ಯ ಆಳ್ವಾಗೆ ಷರತ್ತುಬದ್ಧ ಜಾಮೀನು

Published : Feb 05, 2021, 06:22 PM IST
ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್;  ಆದಿತ್ಯ ಆಳ್ವಾಗೆ ಷರತ್ತುಬದ್ಧ ಜಾಮೀನು

ಸಾರಾಂಶ

ಸ್ಯಾಂಡಲ್ ವುಡ್ ಡ್ರಗ್ ಡೀಲ್ ಆರೋಪ ಕೇಸ್ / ಆದಿತ್ಯ ಆಳ್ವಾ ಸೇರಿ ನಾಲ್ವರು ಆರೋಪಿಗಳಿಗೆ ಜಾಮೀನು/ ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಿಂದ ಆದೇಶ/ ಆದಿತ್ಯ ಆಳ್ವಾ, ಆದಿತ್ಯ ಅಗರ್ವಾಲ್, ರಾಹುಲ್ ಹಾಗೂ ರವಿಶಂಕರ್ ಗೆ ಜಾಮೀನು ನಾಲ್ವರಿಗೂ ಷರತ್ತು ಬದ್ಧ ಜಾಮೀನು ನೀಡಿ ಆದೇಶ

ಬೆಂಗಳೂರು(ಫೆ.  05)  ಸ್ಯಾಂಡಲ್ ವುಡ್ ಡ್ರಗ್ ಡೀಲ್  ಪ್ರಕರಣದ ಆರೋಪಿ  ಆದಿತ್ಯ ಆಳ್ವಾಗೆ ಜಾಮೀನು ಸಿಕ್ಕಿದೆ. ಇತರೆ  ನಾಲ್ವರು ಆರೋಪಿಗಳಿಗೂ  ಜಾಮೀನು ದೊರೆತಿದೆ.

ಎನ್ ಡಿಪಿಎಸ್ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ ಆದಿತ್ಯ ಆಳ್ವಾ, ಆದಿತ್ಯ ಅಗರ್ವಾಲ್, ರಾಹುಲ್ ಹಾಗೂ ರವಿಶಂಕರ್ ಗೆ ಬೇಲ್ ಸಿಕ್ಕಿದೆ ನಾಲ್ವರಿಗೂ ಷರತ್ತು ಬದ್ಧ ಜಾಮೀನು ನೀಡಲಾಗಿದೆ.

ಕೊನೆಗೂ ಆದಿತ್ಯ ಆಳ್ವಾ ಸಿಕ್ಕಿಬಿದ್ದಿದ್ದು ಹೇಗೆ?

ಕಾಟನ್ ಪೇಟೆ ಡ್ರಗ್ಸ್ ಕೇಸ್ ಪ್ರಕರಣದ  A6 ಆರೋಪಿ, ಕಳೆದ ನಾಲ್ಕು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾನನ್ನು ಕೊನೆಗೂ ಬಂಧಿಸಿ ಕರೆತರಲಾಗಿತ್ತು.

ಕಳೆದ ಎರಡು ತಿಂಗಳಿಂದ ಆದಿತ್ಯನಿಗಾಗಿ ಬಲೆ ಬೀಸಿದ ಸಿಸಿಬಿ ಪೊಲೀಸರು, ಲುಕ್ ಔಟ್ ನೋಟಿಸ್ ಕೂಡಾ ಹೊರಡಿಸಿದ್ದರು. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ನಟಿ ಸಂಜನಾ ಮತ್ತು ರಾಗಿಣಿಗೂ ಬೇಲ್ ಸಿಕ್ಕಿತ್ತು.   23 ದಿನಗಳ ಜೈಲುವಾಸದ ನಂತರ ಆಳ್ವಾಗೆ ಜಾಮೀನು ಸಿಕ್ಕಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!