ರಾಮನಗರ: ಡಿ ಬಾಸ್‌ ಎಂದು ಕೂಗಬೇಡಿ ಎಂದಿದ್ದಕ್ಕೆ ಚಾಕುವಿನಿಂದ ಇರಿತ, ದರ್ಶನ್‌ ಫ್ಯಾನ್ಸ್‌ನಿಂದ ಕೃತ್ಯ

Published : Sep 29, 2024, 08:48 AM IST
ರಾಮನಗರ: ಡಿ ಬಾಸ್‌ ಎಂದು ಕೂಗಬೇಡಿ ಎಂದಿದ್ದಕ್ಕೆ ಚಾಕುವಿನಿಂದ ಇರಿತ, ದರ್ಶನ್‌ ಫ್ಯಾನ್ಸ್‌ನಿಂದ ಕೃತ್ಯ

ಸಾರಾಂಶ

ರಾತ್ರಿ ಶೆಡ್ಡಿನಲ್ಲಿ ಕಿರಣ್ ಮತ್ತು ಮಹದೇವ್ ಪಾನಮತ್ತರಾಗಿ ನಟ ದರ್ಶನ್ ವಿಚಾರವಾಗಿ ಮಾತನಾಡುತ್ತಾ ಡಿ ಬಾಸ್, ಡಿ ಬಾಸ್ ಎಂದು ಕೂಗಾಡಲು ಆರಂಭಿಸಿದ್ದಾರೆ. ಇದಕ್ಕೆ ವೆಂಕಟಸ್ವಾಮಿ, ದಾಖಲಿಸಿದ್ದಾರೆ. ಅಕ್ಕಪಕ್ಕದಲ್ಲಿ ಮನೆಗಳಿವೆ ಏಕೆ ಕೂಗಾಡುತ್ತಿದ್ದೀರಿ ಎಂದು ಕೇಳಿದ್ದಾರೆ.  ನಮ್ಮ ಡಿ ಬಾಸ್ ಬಗ್ಗೆ ನಿನಗೆ ಏನು ಗೊತ್ತು, ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಇಬ್ಬರು ವೆಂಕಟಸ್ವಾಮಿ ಜೊತೆ ಜಗಳ ತೆಗೆದು ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾರೆ. 

ರಾಮನಗರ(ಸೆ.29):  ಚಿತ್ರನಟ ದರ್ಶನ್ ಅಭಿಮಾನಿಗಳಾದ ಗಾರೆ ಕೆಲಸಗಾರರಿಬ್ಬರು ಮೇಸ್ತ್ರಿ ಕುತ್ತಿಗೆಗೆ ಚಾಕು ಇರಿದು ಗಾಯಗೊಳಿಸಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿ ಸೂಲಿಕೆರೆ ಪಾಳ್ಯದ ಲೇಬರ್‌ಶೆಡ್‌ನಲ್ಲಿ ನಡೆದಿದೆ. ರಾಮನಗರ ತಾಲೂಕಿನ ಕಸಬಾ ಹೋಬಳಿ ದೊಡ್ಡಮಣ್ಣುಗುಡ್ಡೆ ಗ್ರಾಮದ ನಿವಾಸಿ ವೆಂಕಟಸ್ವಾಮಿ ಗಾಯಗೊಂಡಿದ್ದು, ಐಜೂರು ಬಡಾವಣೆ ನಿವಾಸಿಗಳಾದ ಕಿರಣ್, ಮಹದೇವ ದುಷ್ಕೃತ್ಯ ಎಸಗಿದವರು.

ವೆಂಕಟಸ್ವಾಮಿಯು ಗ್ರಾಮದ ಸುರೇಶ್‌ ಎನ್ನುವರ ಗುತ್ತಿಗೆ ತೆಗೆದುಕೊಂಡಿದ್ದ ಜಾಗದಲ್ಲಿ ಮೇಸ್ತ್ರಿ ಕೆಲಸ ಮಾಡಲು ಗ್ರಾಮದ ಕಾಳಯ್ಯ ಅವರೊಂದಿಗೆ ಕೆಂಗೇರಿ ಹೋಬಳಿ ಸೂಲಿಕೆರೆ ಪಾಳ್ಯಕ್ಕೆ ತೆರಳಿದ್ದಾರೆ. ಅವರ ಜೊತೆಯಲ್ಲಿ ಪರಿಚಯವಿರುವ ಕಿರಣ್ ಹಾಗೂ ಮಹದೇವ ಅವರನ್ನು ಕೆಲಸಕ್ಕಾಗಿ ಕರೆದುಕೊಂಡು ಹೋಗಿದ್ದಾರೆ. ಆ ಸ್ಥಳದಲ್ಲಿಯೇ ಶೆಡ್ ನಿರ್ಮಾಣ ಮಾಡಿಕೊಂಡು ಎಲ್ಲರೂ ವಾಸವಾಗಿದ್ದರು. 

ರೇಣುಕಾಸ್ವಾಮಿ ಕೊಲೆ ಕೇಸ್‌: ದರ್ಶನ್‌ಗೆ ಮತ್ತೊಂದು ಸಂಕಟ, ಬೇಲ್‌ ಸಿಗೋದು ಡೌಟು

ಸೆ.26ರಂದು ರಾತ್ರಿ ಶೆಡ್ಡಿನಲ್ಲಿ ಕಿರಣ್ ಮತ್ತು ಮಹದೇವ್ ಪಾನಮತ್ತರಾಗಿ ನಟ ದರ್ಶನ್ ವಿಚಾರವಾಗಿ ಮಾತನಾಡುತ್ತಾ ಡಿ ಬಾಸ್, ಡಿ ಬಾಸ್ ಎಂದು ಕೂಗಾಡಲು ಆರಂಭಿಸಿದ್ದಾರೆ. ಇದಕ್ಕೆ ವೆಂಕಟಸ್ವಾಮಿ, ದಾಖಲಿಸಿದ್ದಾರೆ. ಅಕ್ಕಪಕ್ಕದಲ್ಲಿ ಮನೆಗಳಿವೆ ಏಕೆ ಕೂಗಾಡುತ್ತಿದ್ದೀರಿ ಎಂದು ಕೇಳಿದ್ದಾರೆ. 

ನಮ್ಮ ಡಿ ಬಾಸ್ ಬಗ್ಗೆ ನಿನಗೆ ಏನು ಗೊತ್ತು, ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಇಬ್ಬರು ವೆಂಕಟಸ್ವಾಮಿ ಜೊತೆ ಜಗಳ ತೆಗೆದು ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾರೆ. ಆಗ ಸ್ಥಳಕ್ಕೆ ಬಂದ ಕಾಳಯ್ಯ ಜಗಳ ಬಿಡಿಸಿ ವೆಂಕಟಸ್ವಾಮಿ ಅವರನ್ನು ರಾಮೋಹಳ್ಳಿ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ವೆಂಕಟ ಸ್ವಾಮಿ ಪತ್ನಿ ಶಾಂತರವರು ಕಿರಣ್ ಮತ್ತು ಮಹದೇವ ವಿರುದ್ಧ ಕುಂಬಳ ಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು