
ಜೈಪುರ(ಆ. 17) ಕುಡುಕ ಗಂಡನ ಕೆಟ್ಟ ವರ್ತನೆ ತಾಳಲಾರದೆ ಪತ್ನಿ ಕರೆಂಟ್ ಶಾಕ್ ಕೊಟ್ಟು ಆತನನ್ನು ಕೊಲ್ಲುವ ಯತ್ನ ಮಾಡಿದ್ದಾಳೆ.
ಕುಡುಕ ಗಂಡ ಕಂಠ ಪೂರ್ತಿ ಮದ್ಯ ಸೇವನೆ ಮಾಡಿ ಪ್ರತಿದಿನ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಪತಿ ಸದ್ಯ ಬಿಕನೇರ್ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗಂಡ 32 ವರ್ಷದ ಮಹೇಂದ್ರ ದನ್ ನನ್ನು ಪತ್ನಿ ಆಗಸ್ಟ್ 12 ರಂದು ಕೊಲೆ ಮಾಡಲು ಯತ್ನಿಸಿದ್ದಾಳೆ. ಕೆಲಸ ಮುಗಿಸಿ ಮನೆಗೆ ಬಂದ ಗಂಡನಿಗೆ ಹೊಟ್ಟೆ ತುಂಬಾ ಆಹಾರ ನೀಡಿದ್ದಾಳೆ. ಆದರೆ ಆಹಾರದಲ್ಲಿ ಮತ್ತು ಬರುವ ಔಷಧ ಸೇರಿಸಿದ್ದಳು. ಗಂಡ ಎಚ್ಚಗೊಂಡಾಗ ಆತನ ಕಾಲುಗಳನ್ನು ವೈರ್ ನಿಂದ ಬಿಗಿಯಾಗಿ ಕಟ್ಟಲಾಗಿತ್ತು. ಕರೆಂಟ್ ಶಾಕ್ ಕೊಡಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಳು.
ಛೇ.. ಒಂದು ಹಲ್ಲು ಸೆಟ್ ಮುರಿದಿದ್ದಕ್ಕೆ ಕಂದಮ್ಮನ ಕೊಲೆ
ಶಾಕ್ ಕೊಟ್ಟ ನಂತರ ಗಂಡ ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದಾನೆ. ಮರುದಿನ ಎಷ್ಷರಗೊಂಡಾಗ ಪತ್ನಿ ಮಾಡಿದ ಕೆಲಸ ಗೊತ್ತಾಗಿದೆ. ಅಪ್ಪ ಮತ್ತು ಸಹೋದರ ಈ ವಿಚಾರವನ್ನು ತಿಳಿಸಿದ್ದಾರೆ ಎಂದು ಹೇಳಿಕೆಯಲ್ಲಿ ಮಹೇಂದ್ರ ತಿಳಿಸಿದ್ದಾನೆ.
ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರತಿದಿನ ಚಿತ್ರಹಿಂಸೆ ತಾಳಲಾರದೆ ಇಂಥ ಕೆಲಸ ಮಾಡಿದೆ ಎಂದು ಒಪ್ಪಿಕೊಂಡಿದ್ದಾಳೆ .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ