ಲೋಹಕ್ಕೆ ಚಿನ್ನದ ಲೇಪ ಮಾಡಿ ಸಾಲ ಪಡೆದಿದ್ದ ಸ್ಯಾಂಡಲ್‌ವುಡ್ ನಿರ್ದೇಶಕ ಭೂಪ!

Published : Aug 17, 2021, 08:24 PM ISTUpdated : Aug 17, 2021, 08:29 PM IST
ಲೋಹಕ್ಕೆ ಚಿನ್ನದ ಲೇಪ ಮಾಡಿ ಸಾಲ ಪಡೆದಿದ್ದ ಸ್ಯಾಂಡಲ್‌ವುಡ್ ನಿರ್ದೇಶಕ  ಭೂಪ!

ಸಾರಾಂಶ

*ಸಿನಿಮಾ ಫ್ಲಾಪ್ ಆಗಿದ್ದಕ್ಕೆ ಅಡ್ಡದಾರಿ ಹಿಡಿದ ನಿರ್ದೇಶಕ * ಲೋಹಕ್ಕೆ ಚಿನ್ನದ ಲೇಪ ಮಾಡಿ ಅದನ್ನು ಅಡವಿಟ್ಟು ಸಾಲ * ಬಡ್ಡಿ ಕಟ್ಟಲು ನೊಟಿಸ್ ನೀಡಿದರೆ ಕ್ಯಾರೇ ಎನ್ನಲಿಲ್ಲ * ಬ್ಯಾಂಕ್ ಸಿಬ್ಬಂದಿಗೆ ಶಾಕ್ ನೀಡಿದ ಕಿಲಾಡಿ 

ಬೆಂಗಳೂರು(ಆ. 17)  ಸಿನಿಮಾ ಫ್ಲಾಪ್ ಆಗಿದ್ದಕ್ಕೆ  ಈ ನಿರ್ದೇಶಕ ಅಡ್ಡ ದಾರಿ ಹಿಡಿದ್ದಾನೆ. ನಿರ್ದೇಶಕನ ಮಾಸ್ಟರ್ ಪ್ಲಾನ್ ಗೆ ಪೊಲೀಸರೆ ದಂಗಾಗಿದ್ದಾರೆ. ಸಿನಿಮಾ ಸ್ಟೈಲ್ ನಲ್ಲಿ ಯಾಮಾರಿಸಿದ್ದ ಖತರ್ನಾಕ್ ನಿರ್ದೇಶಕ ಖಾಸಗಿ ಬ್ಯಾಂಕ್ ನಲ್ಲಿ ಚಿನ್ನ ಇಟ್ಟು 42.91 ಲಕ್ಷ ಹಣ ಪಡೆದಿದ್ದ. 

ಬಡ್ಡಿ ಕಟ್ಟಲು ನೋಟೀಸ್ ಕೊಟ್ಟರು ಕ್ಯಾರೆ  ಎನ್ನದ  ನಿರ್ದೇಶಕ  ಹರಾಜು ಹಾಕ್ತಿವಿ ಅಂದ್ರು ಡೋಂಟ್ ಕೇರ್ ಅಂದಿದ್ದ.  ಆಗ ಡೌಟ್ ಬಂದು ಬಂಗಾರ ಚೆಕ್ ಮಾಡಿದಾಗ ಬ್ಯಾಂಕ್ ಸಿಬ್ಬಂದಿಗೆ ಆಘಾತವಾಗಿದೆ.  ಲೋಹಕ್ಕೆ ಚಿನ್ನದ ಲೇಪ ಮಾಡಿ ಅದನ್ನು ಅಡವಿಟ್ಟಿದ್ದ ಸಂಗತಿ ಬೆಳಕಿಗೆ ಬಂದಿದೆ.

ವಂಚಕ ಅಂದರೆ ಯುವರಾಜ್ ಸ್ವಾಮಿ.. ಸ್ವಾಮಿ ಪುರಾಣ

ಮಾಸ್ಟರ್ ಪ್ಲಾನ್ ಮಾಡಿ ವಂಚನೆ ಮಾಡಿದ ನಿರ್ದೇಶಕನ ಬಂಧನವಾಗಿದೆ. ಕರಮಲ ಬಾಲರವಿಂದ್ರನಾಥ ಬಂಧಿತ ನಿರ್ದೇಶಕ ಮಧುರ ಸ್ವಪ್ನ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದ.  2016 ರಲ್ಲಿ ತೆರೆ ಕಂಡಿದ್ದ ಮಧುರ ಸ್ವಪ್ನ ಸಿನಿಮಾ ಅಂತ  ಹೆಸರು ಮಾಡಿರಲಿಲ್ಲ. 

ರಾಜಾಜಿನಗರ ಪೊಲೀಸರು ಆರೋಪಿ ಬಾಲರವಿಂದ್ರನಾಥನನ್ನು ಬಂಧಿಸಿದ್ದಾರೆ.  ಹಲವೆಡೆ ಇದೇ ರೀತಿ ವಂಚಿಸಿರೋ ಅನುಮಾನ ಸಹ ಇದೆ. ಹೆಚ್ಚಿನ ವಿಚಾರಣೆಗೆ ನಿರ್ದೇಶದಕನ್ನು ಒಳಪಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!