ಕಲಬುರಗಿಯಲ್ಲಿ ವೇಶ್ಯಾವಾಟಿಕೆ: ಮೂವರು ಮಹಿಳೆಯರ ರಕ್ಷಣೆ

By Kannadaprabha NewsFirst Published Dec 8, 2023, 2:22 PM IST
Highlights

ಗಿರಾಕಿಗಳಿಂದ ಹಣ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ನಗರದ ಶಹಾಬಜಾರ ಖಟಗರಪುರದ ಗೀತಾಬಾಯಿ ಡೊಳ್ಳೆ, ರಾಮತೀರ್ಥ ನಗರದ ರಾಧಾ ಪಾಟೀಲ ಮತ್ತು ಆಳಂದ ತಾಲೂಕಿನ ಶಾಖಾಪುರದ ದಯಾನಂದ ಪ್ರಭು ಸಿಂಗೆ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ(ಡಿ.08):  ಸೇಡಂ ರಸ್ತೆಯ ಸೂರ್ಯನಗರ ಕಾಲೋನಿಯ ಈಶ್ವರ ಗುಡಿ ಹತ್ತಿರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ದಿಲೀಪ ಬಿ.ಸಾಗರ ಅವರು ಸಿಸಿಬಿ ಘಟಕದ ಸಿಬ್ಬಂದಿ ಮತ್ತು ಸಿಇಎನ್ ಠಾಣೆಯ ಮಹಿಳಾ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಮೂವರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. 

ಗಿರಾಕಿಗಳಿಂದ ಹಣ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ನಗರದ ಶಹಾಬಜಾರ ಖಟಗರಪುರದ ಗೀತಾಬಾಯಿ ಡೊಳ್ಳೆ, ರಾಮತೀರ್ಥ ನಗರದ ರಾಧಾ ಪಾಟೀಲ ಮತ್ತು ಆಳಂದ ತಾಲೂಕಿನ ಶಾಖಾಪುರದ ದಯಾನಂದ ಪ್ರಭು ಸಿಂಗೆ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos

ಬೆಂಗಳೂರು ಜೈಲಿನಲ್ಲಿದ್ದುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ದ ಸಂಜು: ಪಿಂಪ್‌ ಮಂಜುನಾಥ್‌ಗೆ ಸಾಥ್‌ ಕೊಟ್ಟೋರಾರು?

ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿ ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ. 

click me!