ಸಾಲ ವಾಪಸ್‌ ಕೇಳಿದ ಸ್ನೇಹಿತನ ಬರ್ಬರ ಕೊಲೆ

Kannadaprabha News   | Asianet News
Published : Dec 21, 2020, 01:26 PM IST
ಸಾಲ ವಾಪಸ್‌ ಕೇಳಿದ ಸ್ನೇಹಿತನ ಬರ್ಬರ ಕೊಲೆ

ಸಾರಾಂಶ

ಸ್ನೇಹಿತನನ್ನು ಮಚ್ಚಿನಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ| ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನಡೆದ ಘಟನೆ| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು| 

ಮಾಲೂರು(ಡಿ.21): ಕುಡಿದ ಮತ್ತಿನಲ್ಲಿ ಹಣಕಾಸು ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಪಟ್ಟಣದ ಸಂತೇ ಮೈದಾನ ಸಮೀಪ ಶನಿವಾರ ತಡ ರಾತ್ರಿ ನಡೆದಿದೆ.

ಮೃತನನ್ನು ಬಾಬು(38)ಎಂದು ಗುರುತಿಸಲಾಗಿದೆ. ಸ್ನೇಹಿತನನ್ನು ಮಚ್ಚಿನಿಂದ ಹೊಡೆದು ಕೊಂದು ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ಶರಣಾದ ವ್ಯಕ್ತಿಯನ್ನು ಜಿಮ್‌ ಶಶಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಮೃತನ ತಂದೆ ಸರ್ದಾರ್‌ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ತನ್ನ ಹೆತ್ತಮ್ಮನ ಸಾವಿನ ರಹಸ್ಯವನ್ನು ಬಿಚ್ಚಿಟ್ಟ 8 ವರ್ಷದ ಮಗ..!

ವ್ಯಾಪಾರಕ್ಕಾಗಿ ಬಾಬು ವಿನಿಂದ 50 ಸಾವಿರ ಹಣ ಪಡೆದಿದ್ದ ಶಶಿ ಹಣ ವಾಪಾಸ್ಸು ನೀಡದ ಹಿನ್ನೆಲೆಯಲ್ಲಿ ಹಣ ವಾಪಾಸ್‌ ನೀಡುವಂತೆ ಬಾಬು ಒತ್ತಾಯಿಸುತ್ತಿದ್ದ. ಇದರಿಂದ ಬೇಸತ್ತಿದ್ದ ಶಶಿ ಶನಿವಾರ ರಾತ್ರಿ ಹಣ ಕೊಡುವುದಾಗಿ ತಿಳಿಸಿ ಕೋಲಾರ ರಸ್ತೆಯ ಬಜಾಜ್‌ ಶೋರಂ ಹಿಂಭಾಗದ ಖಾಲಿ ಜಾಗಕ್ಕೆ ಬರುವಂತೆ ತಿಳಿಸಿದ್ದಾನೆ.

ಅಲ್ಲಿಗೆ ಬಂದ ಬಾಬು ಜತೆ ಮದ್ಯ ಸೇವಿಸಿದ ಬಳಿಕ ಶಶಿ ಮಚ್ಚಿನ ನಿಂದ ಬಾಬುವಿನ ತಲೆಗೆ ಹೊಡೆದಿದ್ದಾನೆ. ನಂತರ ಮಚ್ಚಿನ ಸಮೇತ ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ವಿಷಯ ತಿಳಿಸಿ ಶರಣಾಗಿದ್ದಾನೆ. ತಕ್ಷಣ ಘಟನಾ ಸ್ಥಳಕ್ಕೆ ಹೋದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಶಶಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಎಸ್‌.ಪಿ.ಕಾರ್ತಿಕ್‌ ರೆಡ್ಡಿ ಭೇಟಿ ನೀಡಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೇ*ಪ್ ಆರೋಪಿ ಜೊತೆ ಸೇರಿಕೊಂಡು ವ್ಯಕ್ತಿ ವಿರುದ್ಧ ಸುಳ್ಳು ರೇ*ಪ್‌ ಕೇಸ್ ಹಾಕಿದ ಮಹಿಳೆ ಬಂಧನ
ಲೇಡಿ ಬಾಸ್​ ಎಲ್ಲೆಲ್ಲೋ ಮುಟ್ಟುತ್ತಾಳೆ, ಪ್ರಚೋದಿಸ್ತಾಳೆ, ಆಮೇಲೆ... ಉದ್ಯೋಗಿಯಿಂದ ಶಾಕಿಂಗ್​ ವಿಷ್ಯ ರಿವೀಲ್​