ನವಲಗುಂದದಲ್ಲಿ ಮನಬಂದಂತೆ ಗುಂಡಿನ ದಾಳಿ: ಬೆಚ್ಚಿಬಿದ್ದ ಜನತೆ

By Suvarna NewsFirst Published Jul 26, 2020, 10:46 AM IST
Highlights

ಮನಬಂದಂತೆ ಗುಂಡು ಹಾರಿಸಿದ ವ್ಯಕ್ತಿ| ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಗರಳ್ಳಿ ಗ್ರಾಮದಲ್ಲಿ ನಡೆದ ಘಟನೆ| ಗುಂಡು ಹಾರಿಸಿದ್ದಕ್ಕೆ ನಿಖರ ಕಾರಣವೇನು ತಿಳಿದು ಬಂದಿಲ್ಲ| ಗ್ರಾಮದಲ್ಲಿ ಬೀಡು ಬಿಟ್ಟ ಪೊಲೀಸರು| 

ನವಲಗುಂದ(ಜು.26): ಫೈನಾನ್ಸಿಯರ್‌ನೋರ್ವ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಓರ್ವನ ಸ್ಥಿತಿ ಗಂಭೀರವಾಗಿದ್ದು, ಹಲವರಿಗೆ ತೀವ್ರ ಗಾಯಗಳಾದ ಘಟನೆ ಶನಿವಾರ ತಾಲೂಕಿನ ನಾಗರಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮಲ್ಲಪಗಪ ಕರಿ ಎಂಬಾತನೇ ಗುಂಡಿನ ದಾಳಿ ನಡೆಸಿರುವವನು.  ಶರಣಪ್ಪ ಕಾಳೆ ಎಂಬಾತನಿಗೆ ಗುಂಡು ತಗುಲಿದ್ದು, ನವಲಗುಂದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಿಮ್ಸ್‌ನಲ್ಲಿ ದಾಖಲಿಸಲಾಗಿದೆ.

EMI ಸಾಲ ವಸೂಲಿ ಗಲಾಟೆ ವೇಳೆ ಬಿತ್ತು ಗುಂಡೇಟು!

ನಾಗರಳ್ಳಿ ಗ್ರಾಮದ ನಾಗಪ್ಪ ಹರ್ತಿ ಅವರೊಂದಿಗೆ ಬೆಳಿಗ್ಗೆ ಮಲ್ಲಪ್ಪ‌ಕರಿ ಜಗಳ ಮಾಡಿಕೊಂಡಿದ್ದ. ಸಂಜೆ ಗ್ರಾಮದಲ್ಲಿ ಕಂಡ ಕಂಡವರ ಮೇಲೆ ಗುಂಡು ಹಾರಿಸಿದ್ದಾನೆ. ಆದರೆ ಗುಂಡು ಹಾರಿಸಿದ್ದಕ್ಕೆ ಕಾರಣವೇನು ಎಂಬುದು ಗೊತ್ತಾಗಿಲ್ಲ. ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟಿದ್ದು ಹೆಚ್ಚುವರಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ನಾಗರಳ್ಳಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
 

click me!