ಪುತ್ರಿ ಸಾವು: 10 ತಿಂಗ್ಳಿಂದ ಕಾದು ಆಕೆಯ ಪ್ರಿಯಕರನನ್ನು 17 ಬಾರಿ ಚುಚ್ಚಿ ಕೊಂದ ತಂದೆ

Published : Jul 25, 2020, 06:37 PM ISTUpdated : Jul 25, 2020, 07:00 PM IST
ಪುತ್ರಿ ಸಾವು: 10 ತಿಂಗ್ಳಿಂದ ಕಾದು ಆಕೆಯ ಪ್ರಿಯಕರನನ್ನು 17 ಬಾರಿ ಚುಚ್ಚಿ ಕೊಂದ ತಂದೆ

ಸಾರಾಂಶ

 ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪುತ್ರಿಯ ಸಾವಿಗೆ ಆಕೆಯ ಪ್ರಿಯಕರನನ್ನು ಕೊಂದು ತಂದೆ ಸೇಡು ತೀರಿಸಿಕೊಂಡಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ, (ಜುಲೈ.25): ತನ್ನ ಮಗಳ ಆತ್ಮಹತ್ಯೆ ಗೆ ಪ್ರಿಯಕರನೇ ಕಾರಣ ಅಂತ  10 ತಿಂಗಳಿಂದ ಹೊಂಚು ಹಾಕಿದ್ದ ತಂದೆಯೊರ್ವ ತಡರಾತ್ರಿ ಪ್ರಿಯಕರನ ಎದೆಗೆ 17 ಬಾರಿ ಇರಿದು ಕೊಂದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯಗವ ಮದ್ದಲಖಾನೆ ಬಳಿ ನಡೆದಿದೆ.

ಯಗವಮದ್ದಲಖಾನೆ ಗ್ರಾಮದ 25 ವರ್ಷದ ಹರೀಶ್ ಕೊಲೆಯಾದ ಯುವಕ. ವೆಂಕಟೇಶ್ ಹಾಗೂ ಆತನ ಸ್ನೇಹಿತ ಗಣೇಶ್  ಕೊಲೆ ಮಾಡಿದವರು. ಅಂದಹಾಗೆ ಈ ಕೊಲೆಯಾದ ಹರೀಶ್ ಕೊಲೆ‌ ಮಾಡಿದ ವೆಂಕಟೇಶ್ ಮಗಳು ಶಿರೀಶಾ ಪರಸ್ಪರ ಪ್ರೀತಿಸುತ್ತಿದ್ದರು. 

ಬಾದಾಮಿ: ಅಕ್ರಮ ಸಂಬಂಧ ಶಂಕೆ, ಚಾಕುವಿನಿಂದ ಇರಿದು ಹೆಂಡತಿಯ ಕೊಲೆಗೈದ ಗಂಡ..!

ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಕೊನೆಗೆ ಶಿರೀಷಾಳಿಗೆ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿಕೊಡಲಾಗಿತ್ತು. ಆದ್ರೆ 10 ತಿಂಗಳ ಹಿಂದೆ  ತನ್ನ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಳು. 

ಅಂದಿನಿಂದ ಈ ಸಾವಿಗೆ ಪ್ರಿಯಕರ ಹರೀಶ್ ಕಾರಣ..ಅವನನ್ನ ಪ್ರೀತಿ ಮಾಡಿದ್ರಿಂದಲೇ ನನ್ನ ಮಗಳ ಸಾವಾಯಿತು ಅಂತ ಕಾದಿದ್ದ ವೆಂಕಟೇಶ್ ತಡರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದ ಹರೀಶ್ ನನ್ನ ಹಿಂಬಾಲಿಸಿ ಕೊಲೆ‌ ಮಾಡಿದ್ದಾರೆ. 

ಪ್ರಕರಣ ಸಂಬಂಧ ಆರೋಪಿಗಳಾದ ವೆಂಕಟೇಶ್ ಹಾಗೂ ಗಣೇಶ್ ನನ್ನ ಬಾಗೇಪಲ್ಲಿ ಸಿಪಿಐ ನಯಾಜ್ ಹಾಗೂ ಪಿಎಸ್ ಐ ಸುನಿಲ್ ಕುಮಾರ್ ಬಂಧಿಸಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು