Meesho ಆ್ಯಪ್ ನಲ್ಲಿ ಒಂದು ಟೀ ಶರ್ಟ್ ಬುಕ್ ಮಾಡಿ 10 ಲಕ್ಷ ಕಳೆದುಕೊಂಡ ಮಹಿಳೆ!

Published : Jan 13, 2023, 01:29 PM IST
Meesho ಆ್ಯಪ್ ನಲ್ಲಿ ಒಂದು ಟೀ ಶರ್ಟ್ ಬುಕ್ ಮಾಡಿ 10 ಲಕ್ಷ  ಕಳೆದುಕೊಂಡ ಮಹಿಳೆ!

ಸಾರಾಂಶ

Meesho ಆ್ಯಪ್ ನಲ್ಲಿ ಒಂದು ಟೀ ಶರ್ಟ್ ಬುಕ್ ಮಾಡಿದ್ದ ಮಹಿಳೆಯೊಬ್ಬರು 10 ಲಕ್ಷ ರೂ ಕಳೆದುಕೊಂಡಿರುವ ಘಟನೆ ನಡೆದಿದೆ. ಲಾಟರಿ ಹೆಸರಲ್ಲಿ ಮಹಿಳೆಗೆ ಖದೀಮರು ಲಕ್ಷ-ಲಕ್ಷ ಪಂಗನಾಮ ಹಾಕಿದ್ದಾರೆ.

ಬೆಂಗಳೂರು (ಜ.13): Meesho ಆ್ಯಪ್ ನಲ್ಲಿ ಒಂದು ಟೀ ಶರ್ಟ್ ಬುಕ್ ಮಾಡಿದ್ದ ಮಹಿಳೆಯೊಬ್ಬರು 10 ಲಕ್ಷ ರೂ ಕಳೆದುಕೊಂಡಿರುವ ಘಟನೆ ನಡೆದಿದೆ. ಲಾಟರಿ ಹೆಸರಲ್ಲಿ ಮಹಿಳೆಗೆ ಖದೀಮರು ಲಕ್ಷ-ಲಕ್ಷ ಪಂಗನಾಮ ಹಾಕಿದ್ದಾರೆ. ಅರುಣ ಎಂಬ ಮಹಿಳೆಗೆ ವಂಚಿಸಿರುವ ಆನ್ಲೈನ್ ಖದೀಮರು ಲಾಟರಿಯಲ್ಲಿ ಕಾರು ಬಂದಿದೆ ಎಂದು ಪತ್ರ ಕಳುಹಿದ್ದರು. ಟೀ ಶರ್ಟ್ ಜೊತೆ ವಂಚಕರು  ಪೋಸ್ಟ್ ಕಾರ್ಡ್, ಸ್ಕ್ರಾಚ್ ಕಾರ್ಡ್, ಲೇಟರ್  ಕಳುಹಿಸಿದ್ದರು. ಲೇಟರ್ ನಲ್ಲಿ ಲಾಟರಿ ಮೂಲಕ ಕಾರು ಬಹುಮಾನ ಬಂದಿದೆ ಎಂದು ವಂಚಕರು ಬಿಂಬಿಸಿದ್ದರು. ಅಚ್ಚ ಕನ್ನಡದಲ್ಲಿ ಮಾತನಾಡಿ ಮಹಿಳೆಗೆ  ಸೈಬರ್ ಚೋರರು ಯಾಮಾರಿಸಿದ್ದರು.

ಇದನ್ನು ನಂಬಿದ ಮಹಿಳೆ ಅರುಣಾ ಪತ್ರದಲ್ಲಿದ್ದ ಸಂಖ್ಯೆಗೆ ವಾಟ್ಸ್ ಆ್ಯಪ್ ನಲ್ಲಿ ಮೆಸೇಜ್ ಮಾಡಿದ್ದರು. ಆ ಕಡೆಯಿಂದ ಕಾರು, ಬೇಕೋ ಹಣ ಬೇಕೋ ಎಂದು ವಂಚಕರು ಕೇಳಿದ್ದರು. ಆರ್ಥಿಕ ಸಮಸ್ಯೆ ಇರುವ ಕಾರಣ ಕಾರಿನ ಬದಲು ಹಣ ನೀಡಿ  ಎಂದು ಅರುಣ ಉತ್ತರಿಸಿದ್ದರು.

ಅಕ್ರಮವಾಗಿ ಪೆಂಗೋಲಿಯನ್ ಚಿಪ್ಪು ಸಾಗಾಟ: 25 ಲಕ್ಷ ಬೆಲೆ ಬಾಳುವ ಚಿಪ್ಪು ವಶ

ಮೊದಲಿಗೆ ಪ್ರೊಸೆಸಿಂಗ್ ಫೀ ಎಂದು 14,800 ರೂ ಕಳುಹಿಸುವಂತೆ ವಂಚಕರು ಹೇಳಿದ್ದರು. ನಂತರ 40 ಸಾವಿರ ಹಣ ಬರುತ್ತದೆ ಇತರೆ ಫೀಜ್ ಕಟ್ಟಿ ಎಂದು ಬರೋಬ್ಬರಿ 10 ಲಕ್ಷ ವಂಚಿಸಿದ್ದಾರೆ. ಇದೀಗ ಹಣ ಕಳೆದುಕೊಂಡು ಕಂಗಾಲಾಗಿರುವ ಮಹಿಳೆ ಸದ್ಯ ವಿದ್ಯಾರಣ್ಯಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮನೆಯಲ್ಲಿ ಮಾರಕಾಸ್ತ್ರ ಹಿಡಿದು ನಿಂತಿದ್ದ ರಾಬರ್ಸ್: ಸಿನಿಮೀಯ ರೀತಿಯಲ್ಲಿ ಸೆರೆಯಾಗಿದ್ದು ಹೇಗೆ?

ಇದೇ ರೀತಿಯಾಗಿ ಯಲಹಂಕದ ವ್ಯಕ್ತಿಯೊಬ್ಬರಿಗೆ  ಖದೀಮರು  ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ನೊಂದ ಮಹಿಳೆಯಿಂದ ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!