ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಗೆ ಬಂಧನ ಭೀತಿ, ಕಿರಿಕ್ ಪಾರ್ಟಿ ತಂಡಕ್ಕೆ ದೊಡ್ಡ ಸಂಕಷ್ಟ!

Published : Apr 09, 2021, 03:24 PM IST
ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಗೆ ಬಂಧನ ಭೀತಿ, ಕಿರಿಕ್ ಪಾರ್ಟಿ ತಂಡಕ್ಕೆ ದೊಡ್ಡ ಸಂಕಷ್ಟ!

ಸಾರಾಂಶ

ಹಿಟ್ ಚಿತ್ರ ಕಿರಿಕ್ ಪಾರ್ಟಿ ಚಿತ್ರ ತಂಡಕ್ಕೆ ಶುರುವಾಯ್ತು ಸಂಕಷ್ಟ/ ಸಂಪೂರ್ಣ ಚಿತ್ರ ತಂಡದ ವಿರುದ್ದ ನಾನ್ ಬೆಲಬಲ್ ವಾರೆಂಟ್ ಜಾರಿ/ 9 ನೇ ಎಸಿಎಂಎಂ ಕೋರ್ಟ್ ನಿಂದ ನಾನ್ ಬೆಲಬಲ್ ವಾರೆಂಟ್/ ಪ್ರತಿವಾದಿಗಳ ಬಂಧಿಸಿ ಕರೆ ತರಲು ಕೋರ್ಟ್ ನಿಂದ ಸೂಚನೆ/ ನಿರ್ದೇಶಕ ರಿಷಬ್ ಶೆಟ್ಟಿ, ಚಿತ್ರ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ   ಅಜನೀಶ್ ಲೋಕನಾಥ್ & ಪರಮ್ವಾ ಸ್ಟುಡೀಯೋಸ್ ಆರೋಪಿಗಳು

ಬೆಂಗಳೂರು(ಏ. 09)  ಸೂಪರ್.ಹಿಟ್ ಚಿತ್ರ ಕಿರಿಕ್ ಪಾರ್ಟಿ ಚಿತ್ರ ತಂಡಕ್ಕೆ  ಇದೀಗ ಸಂಕಷ್ಟ ಬಂದಿದೆ.  ಸಂಪೂರ್ಣ ಚಿತ್ರ ತಂಡದ ವಿರುದ್ದ ನಾನ್ ಬೆಲಬಲ್ ವಾರೆಂಟ್ ಜಾರಿಯಾಗಿದೆ. 9 ನೇ ಎಸಿಎಂಎಂ ಕೋರ್ಟ್ ನಿಂದ ನಾನ್ ಬೆಲಬಲ್ ವಾರೆಂಟ್ ಜಾರಿಯಾಗಿದೆ.

ಪ್ರತಿವಾದಿಗಳ ಬಂಧಿಸಿ ಕರೆ ತರಲು ಕೋರ್ಟ್ ನಿಂದ ಸೂಚನೆ ಸಿಕ್ಕಿದೆ. ನಿರ್ದೇಶಕ ರಿಷಬ್ ಶೆಟ್ಟಿ, ಚಿತ್ರ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡೀಯೋಸ್ ಆರೋಪಿ ಪಟ್ಟಿಯಲ್ಲಿ ಇದ್ದಾರೆ.

ಕಿರಿಕ್ ಪಾರ್ಟಿಗೆ ನಾಲ್ಕು ವರ್ಷ

ಕಿರಿಕ್ ಪಾರ್ಟಿಯಲ್ಲಿ ಲಹರಿ ಸಂಸ್ಥೆಗೆ ಸೇರಿದ ಹಾಡುಗಳ ಅಕ್ರಮ ಬಳಕೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಯಾರದೇ ಅನುಮತಿ ಇಲ್ಲದೇ ಹಾಡುಗಳನ್ನು ಬಳಕೆ ಮಾಡಿಕೊಂಡಿದ್ದರು ಎಂಬುದು ದೊಡ್ಡ ಸುದ್ದಿಯಾಗಿತ್ತು.

ಈ ಬಗ್ಗೆ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ಹಾಕಿದ್ದ ಲಹರಿ ರೆಕಾರ್ಡಿಂಗ್ಸ್  ಕಾನೂನು ಹೋರಾಟ ಆರಂಭಿಸಿತ್ತು.  ಕಾಪಿ ರೈಟ್ಸ್ ಆಕ್ಟ್ 63ಎ & 63 ಬಿ ಅಡಿಯಲ್ಲಿ ಕೇಸ್ ಹಾಕಲಾಗಿತ್ತು..

ಸೆಪ್ಟಂಬರ್ 28, 2019 ರಲ್ಲಿ ಕೇಸು ದಾಖಲಾಗಿತ್ತು. ಅರ್ಜಿಯಲ್ಲಿ ಸಿನಿಮಾ ರಿಲೀಸ್ ಮಾಡದಂತೆ ಕೋರಿಕೆ ಮಾಡಲಾಗಿತ್ತು. ಆದರೆ ಕೊನೆಗೆ ಆಡರ್ ಟೆಕಿಂಗ್ ಪಡೆದುಕೊಂಡು ಸಿನಿಮಾ ರಿಲೀಸ್ ಆಗಿತ್ತು. ಕ್ರಿಮಿನಲ್ ಕೇಸ್ ವಿಚಾರಣೆ ಎಸಿಎಂಎಂ ಕೋರ್ಟ್ನಲ್ಲಿ ಮುಂದುವರೆದಿತ್ತು.

ಇಲ್ಲಿತನಕ ಕಿರಿಕ್ ಪಾರ್ಟಿ ಟೀಂ ವಿರುದ್ದ 8 ಬಾರಿ ನಾನ್ ಬೆಲಬಲ್ ಜಾರಿಯಾಗಿದೆ. ರಿಷಬ್ ಶೆಟ್ಟಿ, ಅಜನೀಶ್ ಲೋಕನಾಥ್, ರಕ್ಷಿತ್ ಶೆಟ್ಟಿ ಕೋರ್ಟ್ ಗೆ ಬಂದಿಲ್ಲ
ಈ ಬಾರಿ ಬಂಧಿಸಿ ಕರೆತರಲು ಎಸಿಎಂಎಂ ಕೋರ್ಟ್ ನಿಂದ ಅದೇಶ ನೀಡಿದೆ. ಮೇ 27ಕ್ಕೆ ಕೋರ್ಟ್ ಮುಂದೆ ಹಾಜರು ಪಡಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!