ಸಂಧಾನಕ್ಕೂ ಸಿದ್ಧ ಸಮರಕ್ಕೂ ಸಿದ್ಧ, ಇದು ನನ್ನ ಮೇಲಿನ ಷಡ್ಯಂತ್ರ: ಮುರುಘಾ ಶ್ರೀ

By Sharath SharmaFirst Published Aug 27, 2022, 6:47 PM IST
Highlights

Muruga Mutt Sri leaked audio: ಮುರುಘಾ ಮಠ ಶರಣರ ಮೇಲೆ ಆರೋಪ ಕೇಳಿ ಬಂದ ನಂತರ ಇಂದು ಮಠದಲ್ಲಿ ನಡೆದ ಸಭೆಯಲ್ಲಿ ಅವರ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸಭೆಯಲ್ಲಿ ಭಾಗಿಯಾದವರೊಬ್ಬರು ಇದರ ಆಡಿಯೋ ರೆಕಾರ್ಡ್‌ ಮಾಡಿದ್ದು ಅದು ಈಗ ಭಾರೀ ವೈರಲ್‌ ಆಗುತ್ತಿದೆ.

ಚಿತ್ರದುರ್ಗ: ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ನಂತರ ಮಠದ ಸಭೆಯೊಂದರಲ್ಲಿ ಆರೋಪ ಸಂಬಂಧ ಮುರುಘಾ ಶರಣರು ಮಾತನಾಡುವ ಆಡಿಯೋ ಭಾರೀ ವೈರಲ್‌ ಆಗುತ್ತಿದೆ. ಸಭೆಯಲ್ಲಿ ಭಾಗಿಯಾಗಿದ್ದ ಭಕ್ತರ್ಯಾರೋ ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದು ಇದು ಎಲ್ಲೆಡೆ ಶೇರ್‌ ಆಗುತ್ತಿದೆ. ಆರೋಪವನ್ನು ಅಲ್ಲ ಗಳೆದಿರುವ ಶ್ರೀಗಳು ಇದು ಅಧಿಕಾರಕ್ಕಾಗಿ ನಡೆಯುತ್ತಿರುವ ಪಿತೂರಿ ಎಂದು ಹೇಳಿದ್ದಾರೆ. ಸಭೆಯಲ್ಲಿನ ಡಾ.ಶಿವಮೂರ್ತಿ ಮುರುಘಾ ಶರಣರು ಮಾತು ಆರಂಭಿಸಿ, "ಗಾಳಿಪಟಕ್ಕೆ ಕೆಳಗೆ ಇದ್ದಾಗ ಗಾಳಿ ಹೊಡೆದರೆ ಗೊತ್ತಾಗಲ್ಲ. ಎತ್ತರಕ್ಕೆ ಹೋದಂತೆ ಗಾಳಿ ಹೊಡೆತ ಬಹಳ‌ ಇರುತ್ತದೆ. ಸಣ್ಣವರಿಗೆ ಸಣ್ಣ ಕುತ್ತು ಬರುತ್ತವೆ, ದೊಡ್ಡವರಿಗೆ ದೊಡ್ಡ ಕುತ್ತು ಬರುತ್ತವೆ. ಕುತ್ತುಗಳು ಅಂದರೆ ಆಪತ್ತುಗಳು, ಕಿರುಕುಳಗಳು. ಯಾವ ಸತ್ಪುರುಷರು, ಸಮಾಜ ಸುಧಾರಕರ ಕಾಲದಲ್ಲಿಯೂ ಈ ರೀತಿಯಲ್ಲಿ ದುಷ್ಟ ಶಕ್ತಿಗಳಿದ್ದವು. ಸಾತ್ವಿಕರು ಸಕಾರಾತ್ಮಕ ಧೋರಣೆ ಹೊಂದಿರುತ್ತಾರೆ. ಅದಕ್ಕೆ ವ್ಯತಿರಿಕ್ತವಾದದ್ದು ನಕಾರಾತ್ಮಕ ಧೋರಣೆಗಳು. ಕ್ರೈಸ್ತ ಧರ್ಮದ ಯೇಸು ಕ್ರಿಸ್ತಗೆ ಶಿಲುಬೆಗೆ ಏರಿಸಿದ್ದು ಅದೇ ಧರ್ಮದವರು. ಪೈಗಂಬರ್ ಗೆ ಟಾರ್ಚರ್‌ ಮಾಡಿದ್ದು ಅದೇ ಧರ್ಮದವರು. ಬುದ್ದನಿಗೆ ಹಂದಿಯ ಮಾಂಸದ ರಸ ಉಣಿಸಿದ್ದವರ ಉದಾಹರಣೆ. ಸಾಕ್ರೆಟೀಸ್ ಬದುಕಿನಲ್ಲಿ ನಿಕಟವಾದ ಶಿಷ್ಯ ಇದ್ದ ಪ್ಲೇಟೋ. ಪ್ಲೆಟೊನಂಥ ಶಿಷ್ಯ ನಮಗೆ ಸಿಗಲಿಲ್ಲ," ಎಂದು ಬೇಸರ ವ್ಯಕ್ತಪಡಿಸಿದ ಶರಣರು. 

"ಶಿಷ್ಯರು ಮರಣ ದಂಡನೆ ತಪ್ಪಿಸಲು ಪ್ರಯತ್ನಿಸುತ್ತಾರೆ. ನಾನು ವ್ಯವಸ್ಥೆ ವಿರುದ್ಧ ರಾಜಿ ಮಾಡಿಕೊಂಡರೆ ಅತ್ಯಂತ ಕಳಂಕ. ಈ ನಿಸರ್ಗ ಬ್ರಹ್ಮಾಂಡ ಈ ವ್ಯವಸ್ಥೆ ಮಾಡಿದೆ," ಎಂದು ಸಾಕ್ರಟೀಸ್ ಬದುಕಿನ ಕೊನೆಯ ಕ್ಷಣಗಳನ್ನ ನೆನೆದ ಮುರುಘಾ ಶರಣರು. 

ಇದನ್ನೂ ಓದಿ: ಮುರುಘಾ ಮಠ ಶ್ರೀಗಳಿಂದ ಲೈಂಗಿಕ ದೌರ್ಜನ್ಯ; ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು

"ಕೊನೆ ಗಳಿಗೆಯಲ್ಲಿ ಸಾಕ್ರಟೀಸ್ ವಿಷ ಕುಡಿದ ಪ್ರಸಂಗ ಮೆಲುಕು ಹಾಕಿದ ಶರಣರು. ಜಗತ್ತಿನಲ್ಲಿ ಧರ್ಮಾಂಧರು, ಕಳ್ಳರು ಈ ರೀತಿ ಸನ್ನಿವೇಶ ಎದುರಿಸಿಲ್ಲ. ತಾತ್ವಿಕ ತಳಹದಿಯ ಮೇಲೆ ನಡೆದವರಿಗೆ ಕುತ್ತು ಇರುತ್ತದೆ. ಗಾಂಧಿ, ಬಸವಣ್ಣ, ಅವರಿಗೂ ಕೂಡಾ ನೋವಿನ ದಿನಗಳು ಇದ್ದವು. ಅಂಥ ದೊಡ್ಡ ಮಹಾನೀಯರ ಜೀವನದಲ್ಲಿ ದುರಂತ ನಡೆದಿವೆ. ಆ ದಿಸೆಯಲ್ಲಿ ನಾವು ಕೂಡಾ ಹೊರತಲ್ಲ. ಸ್ವಜಾತಿಯವರಿಂದ ಹಾಳಾಗಿದ್ದ ಸಂಸ್ಥಾನಗಳ ಇತಿಹಾಸ ನೆನೆದ ಶರಣರು. ಮುಂಜಾನೆಯ ಸುದ್ದಿ ಕೇಳಿ ನೀವೆಲ್ಲಾ ಇಲ್ಲಿ ಬಂದಿದ್ದೀರಾ. ನಮಗಿಂತ ನಿಮಗೆ ತುಂಬಾ ನೋವಾಗಿದೆ. ಸರ್ವಜಾತಿ, ದರ್ಮದವರು ಕೂಡಾ ಇಲ್ಲಿದ್ದೀರಿ. ಮುರುಘಾ ಶರಣರ ಬದುಕಿನ ಆತ್ಯಂತಿಕವಾದ ಕಿರುಕುಳ ಇದು. ಸಣ್ಣಪುಟ್ಟವು ಇರುತ್ತವಲ್ಲ. ನಮ್ಮಂತವರ ಜೊತೆಯೇ ಜಗಳ ಮಾಡಬೇಕು. ಬೇರೆಯವರ ಜೊತೆ ಜಗಳದಲ್ಲಿ ಏನೂ ಸಿಗಲ್ಲ. ಮಠದಲ್ಲಿ ನಡೆಯುತ್ತಿರುವುದು ಅಧಿಕಾರಕ್ಕಾಗಿ ಸಂಘರ್ಷ ನಡೆಯುತ್ತಿದೆ. ಮುರುಘಾಮಠ ಜನ ಬಂದು ನೋಡುವಂತೆ ನಾವು ಮಾಡಿದ್ದೇವೆ. 21 ನೇ ಶತಮಾನ ಅಂದರೆ ಈ ಕರಾಳ ಘಟನೆ," ಎಂದರು.

ಇದನ್ನೂ ಓದಿ: ಮಠದ ಮಾಜಿ ಆಡಳಿತಾಧಿಕಾರಿ ವಿರುದ್ಧ ಅತ್ಯಾಚಾರ ಯತ್ನ ದೂರು ನೀಡಿದ Muruga Matha ವಾರ್ಡನ್‌

ಮುಂದುವರೆದ ಅವರು "ರೋಲ್ ಕಾಲ್, ಬ್ಲಾಕ್ ಮೇಲ್ ತಂತ್ರದ ಮೂಲಕ ಅಧಿಕಾರಬೇಕು ಎಂಬ ಧೋರಣೆ ಮುಖ್ಯವಾಗಿದೆ. ನಾವು ಸಂಧಾನಕ್ಕೂ ಸಿದ್ದ, ಸಮರಕ್ಕೂ ಸಿದ್ದ. ಕೆಲವರು ಸಂಧಾನ ಮಾಡುತ್ತಿದ್ದಾರೆ, ಅದು ಫೇಲ್ ಆದರೆ ಸಮರ. ಸಂಧಾನ ಬೇಡವಾದಗ ಸಮರ ಇದ್ದೇ ಇರುತ್ತದೆ ಕೆಲವು ಸ್ವಾಮೀಜಿಗಳ ಜೀವನದಲ್ಲಿ ಇಂಥ ಘಟನೆ ನಡೆದಾಗ ಕೋರ್ಟ್ ಶುಲ್ಕ ನಾನು ಕೊಟ್ಟಿದ್ದೇನೆ. ನಾವೇ ದೈರ್ಯ ಹೇಳಿದ್ದೂ ಇದೆ. ನಮ್ಮ ವಿರುದ್ದ ಇದೊಂದು ಪಿತೂರಿ, ಒಳ ಸಂಚು ಮಾಡಿದ್ದಾರೆ. ಯಾವ ಸಮಸ್ಯೆ ಕೂಡಾ ಶಾಶ್ವತ ಅಲ್ಲ, ಎಲ್ಲವೂ ತಾತ್ಕಾಲಿಕ. ಮುರುಘಾ ಮಠದ ಮೇಲಿನ ಅಭಿಮಾನ ಬಡಿದೆಬ್ಬಿಸಲು ನಡೆದಿರುವ ಘಟನೆ. ಜನ ರಾಜ್ಯಾದ್ಯಂತ ಮಠಕ್ಕೆ ಆಗಮಿಸುತ್ತಿದ್ದಾರೆ. ಇದು ಗರಿಷ್ಠ ಮಟ್ಟದ ಕಿರುಕುಳ ಮತ್ತು ಪಿತೂರಿ. ಮಠದಲ್ಲಿ ಇದ್ದವರೇ ಷಡ್ಯಂತ್ರ ಮಾಡಿದ್ದಾರೆ. ಎಲ್ಲವನ್ನೂ ಕೂಡಾ ಕಾಲವೇ ನಿರ್ಣಯ ಮಾಡುತ್ತದೆ," ಎಂದರು.

ಇದನ್ನೂ ಓದಿ: ಮುರುಘಾ ಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಟ್ವಿಸ್ಟ್, ಆಡಳಿತಾಧಿಕಾರಿ ವಿರುದ್ಧ ರೇಪ್ ಕೇಸ್

"ಸಾಧ್ಯವಾದರೆ ಸಮಸ್ಯೆ ಬಗೆಹರಿಸೋಣ, ಇಲ್ಲ. ಹೋರಾಟ ಮಾಡೋಣ. ಎರಡು ವಿಚಾರಕ್ಕೂ ನಾವು ಸಿದ್ದ ಮತ್ತು ಬದ್ದ. ಯಾವ ಸುಖವೂ ಶಾಶ್ವತ ಅಲ್ಲ, ಸಮಸ್ಯೆಯೂ ಶಾಶ್ವತ ಅಲ್ಲ. ಯಾರು ಕೂಡಾ ದುಃಖ ಮಾಡಿಕೊಳ್ಳಬೇಡಿ ಎಂದ ಶರಣರು. ನೀವೆಲ್ಲಾ ನಮ್ಮ ಜೊತೆಗೆ ಇರುವುದು ದೊಡ್ಡ ಧೈರ್ಯ" ಎಂದುಮುರುಘಾ ಶರಣರು ಮಾತನಾಡಿದ್ದಾರೆ.

click me!