ರಾಯಚೂರು: ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ; ಮುಖ್ಯ ಶಿಕ್ಷಕ ಪೊಲೀಸರ ವಶಕ್ಕೆ

Published : Mar 30, 2023, 10:27 AM IST
ರಾಯಚೂರು: ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ; ಮುಖ್ಯ ಶಿಕ್ಷಕ ಪೊಲೀಸರ ವಶಕ್ಕೆ

ಸಾರಾಂಶ

: ಮುಖ್ಯ​ಶಿ​ಕ್ಷ​ಕ​ರೊ​ಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಪಾಲಕರು ಶಾಲೆಗೆ ತೆರಳಿ ಗಲಾಟೆ ಮಾಡಿದ ಘಟನೆ ತಾಲೂಕಿನ ಶಕ್ತಿನಗರದಲ್ಲಿ ಜರು​ಗಿತು.

ರಾಯಚೂರು (ಮಾ.30) : ಮುಖ್ಯ​ಶಿ​ಕ್ಷ​ಕ​ರೊ​ಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಪಾಲಕರು ಶಾಲೆಗೆ ತೆರಳಿ ಗಲಾಟೆ ಮಾಡಿದ ಘಟನೆ ತಾಲೂಕಿನ ಶಕ್ತಿನಗರದಲ್ಲಿ ಜರು​ಗಿತು.

ಶಕ್ತಿ​ನ​ಗ​ರದ ಕೆಪಿಸಿಎಲ್‌ ಡಿಎವಿ(KPCL DAV) ಶಾಲೆಯ ಮುಖ್ಯಶಿಕ್ಷಕ ವಿಜಯ ಅಂಗಡಿ(Vijay angadi) ಎನ್ನುವವರು ವಿದ್ಯಾರ್ಥಿನಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ ಅನು​ಚಿ​ತ​ವಾಗಿ ವರ್ತಿ​ಸಿದ್ದು, ಇದೆ​ಲ್ಲವೂ ಮೊಬೈಲ್‌ನಲ್ಲಿ ರೆಕಾರ್ಡ್‌(Mobile record) ಆಗಿದೆ. ಮುಖ್ಯಶಿಕ್ಷಕ ವರ್ತ​ನೆ​ಯಿಂದ ಬೇಸತ್ತ ವಿದ್ಯಾ​ರ್ಥಿನಿ ಪಾಲಕರ ಗಮನಕ್ಕೆ ತಂದಿದ್ದು, ಪಾಲಕರು, ಸಂಬಂಧಿಕರು ಮಾತ್ರವಲ್ಲದೇ ಬಡಾವಣೆಯ ನೂರಾರು ಜನ ಶಾಲೆಗೆ ತೆರಳಿ ಗಲಾಟೆ ಮಾಡಿ ಮುಖ್ಯಶಿಕ್ಷಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗ​ಮಿ​ಸಿದ ಶಕ್ತಿನಗರ ಪೊಲೀಸರು(Shaktinagara police), ಮುಖ್ಯಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ. ಪಾಲಕರು ನೀಡಿದ ದೂರ​ನ್ನಾ​ಧ​ರಿ​ಸಿ ಮುಖ್ಯಶಿಕ್ಷಕನನ್ನು ಎಸ್ಪಿ ಕಚೇರಿಗೆ ಕರೆದುಕೊಂಡು ಹೋಗಿ ವಿಚಾ​ರಣೆ ನಡೆ​ಸಿ​ದ್ದಾ​ರೆ.

ರಾಯಚೂರು: ಮೊದಲ ಪಟ್ಟಿ​ಯಲ್ಲಿ ಜಿಲ್ಲೆಯ ಇಬ್ಬರು ಹಾಲಿ ಶಾಸ​ಕ​ರಿಗೆ ಟಿಕೆಟ್‌

ಪಿಯುಸಿ ಪರೀಕ್ಷೆ: 12,529 ವಿದ್ಯಾರ್ಥಿಗಳು ಹಾಜರು

ರಾಯಚೂರು: ಜಿಲ್ಲೆಯಾದ್ಯಂತ ನಡೆಯುತ್ತಿರುವ ಪಿಯುಸಿ ವಾರ್ಷಿಕ ಪರೀಕ್ಷೆಯ ಸಮಾಜಶಾಸ್ತ್ರ ಹಾಗೂ ಕಂಪ್ಯೂಟರ್‌ ವಿಷಯದ ಪರೀಕ್ಷೆಗಳು ಬುಧವಾರ ನಡೆದಿದ್ದು, ಈ ಪರೀಕ್ಷೆಯಲ್ಲಿ ಒಟ್ಟು 13,739 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ಇದರಲ್ಲಿ ಒಟ್ಟು 12,529 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದಂತೆ 1,210 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಸಮಾಜಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ 3106 ವಿದ್ಯಾರ್ಥಿಗಳು ಹಾಜರಾಗಿದ್ದರೆ 359 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಲಿಂಗಸುಗೂರು 2319 ಹಾಜರು, 133 ಗೈರು, ಸಿಂಧನೂರು ತಾಲೂಕಿನಲ್ಲಿ 2118 ಹಾಜರು, 220 ಗೈರು, ಮಾನ್ವಿ ತಾಲೂಕಿನಲ್ಲಿ 1438 ಹಾಜರು, 114 ಗೈರು, ದೇವದುರ್ಗ ತಾಲೂಕಿನಲ್ಲಿ 1375 ಹಾಜರು, 210 ಗೈರು, ಮಸ್ಕಿ 614 ಹಾಜರು, 65 ಗೈರು, ಸಿರವಾರ 490 ಹಾಜರಾಗಿದ್ದರೆ 66 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಕಾಂಗ್ರೆಸ್‌ನ ಬಸ​ನ​ಗೌ​ಡ​ರಿಗೆ ತಿರು​ಗೇಟು ​ನೀ​ಡು​ವುದೇ ಬಿಜೆಪಿ?: ರೆಡ್ಡಿ ಪಕ್ಷದಿಂದ ಎದುರಾಗಿದೆ ಮತ ವಿಭಜನೆಯ ಭೀತಿ

ಕಂಪ್ಯೂಟರ್‌ ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ 372 ವಿದ್ಯಾರ್ಥಿಗಳು ಹಾಜರಾಗಿದ್ದರೆ 17 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಲಿಂಗಸುಗೂರು 155 ಹಾಜರು, 08 ಗೈರು, ಸಿಂಧನೂರು ತಾಲೂಕಿನಲ್ಲಿ 428 ಹಾಜರು, 15 ಗೈರು, ಮಾನ್ವಿ ತಾಲೂಕಿನಲ್ಲಿ 102 ಹಾಜರು, 03 ಗೈರು, ದೇವದುರ್ಗದಲ್ಲಿ 12 ಜನ ವಿದ್ಯಾರ್ಥಿಗಳು ಗೈರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ