ತನ್ನ ಬಳಿ ನಾನು ಸಾಲ ತಗೊಳಲ್ಲ ಎಂದ ಮಹಿಳೆಗೆ, ಚಾಕು ಇರಿದ ವ್ಯಕ್ತಿ!

Published : Oct 12, 2023, 09:40 AM IST
ತನ್ನ ಬಳಿ ನಾನು ಸಾಲ ತಗೊಳಲ್ಲ ಎಂದ ಮಹಿಳೆಗೆ, ಚಾಕು ಇರಿದ ವ್ಯಕ್ತಿ!

ಸಾರಾಂಶ

ತನ್ನ ಬಳಿ ನಾನು ಸಾಲ ತಗೊಳಲ್ಲ ಎಂದ ಮಹಿಳೆಗೆ ವ್ಯಕ್ತಿಯೊಬ್ಬ ಚಾಕು ಇರಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ  ನಡೆದಿದೆ.

ಬೆಳಗಾವಿ (ಅ.12): ತನ್ನ ಬಳಿ ನಾನು ಸಾಲ ತಗೊಳಲ್ಲ ಎಂದ ಮಹಿಳೆಗೆ ವ್ಯಕ್ತಿಯೊಬ್ಬ ಚಾಕು ಇರಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ  ನಡೆದಿದೆ. ಚಾಕು ಇರಿದ ವ್ಯಕ್ತಿ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಯನಾ ಪ್ರವೀಣ ಶೆಟ್ಟಿ(34) ಚಾಕು ಇರಿತಕ್ಕೊಳಗಾದ ಮಹಿಳೆಯಾಗಿದ್ದಾರೆ. ಮಲ್ಲಿಕಾರ್ಜುನ ಕುಂಬಾರ ಚಾಕು ಇರಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ.

ಮಗಳ ಅತ್ಯಾಚಾರಕ್ಕೆ ಮಲತಂದೆಗೆ ಅವಕಾಶ, ತಾಯ್ತನಕ್ಕೆ ಕಳಂಕ ಎಂದು ಜಾಮೀನು ನಿರಾಕರಿಸಿದ ಕೋರ್ಟ್!

ಕಳೆದ ವರ್ಷ ನಯನಾ ಪತಿಗೆ ಆರೋಪಿ ಮಲ್ಲಿಕಾರ್ಜುನ್ 1 ಲಕ್ಷ ಸಾಲ ನೀಡಿದ್ದ, ನಯನಾ ಪತಿ ಪ್ರವೀಣ್ ಸಾಲ ಪಡೆದ ಹಣವನ್ನು ಮತ್ತೆ ಮರಳಿ ತೀರಿಸಿದ್ದರು. ಮತ್ತೆ ಎನಾದರೂ ಸಾಲ ಬೇಕಾದರೆ ತೆಗೆದುಕೊಳ್ಳಿ ಎಂದು ಆರೋಪಿ ಮಲ್ಲಿಕಾರ್ಜುನ್ ತಿಳಿಸಿದ್ದ. ನೀವು ಕೊಟ್ಟ ಹಣಕ್ಕೆ ಜಾಸ್ತಿ ಬಡ್ಡಿ ತೆಗೆದುಕೊಳ್ತಿರಿ, ನಮಗೆ ಸಾಲ ಬೇಡ ಎಂದು  ನಯನಾ ಹೇಳಿದ್ದರು.

ಶಾಸಕ ಮುನಿರತ್ನ ಹನಿಟ್ರ್ಯಾಪ್‌ಗೆ ಬಿಬಿಎಂಪಿ ಆಯುಕ್ತೆ ತುಳಸಿ

ಇದೇ ಕಾರಣಕ್ಕೆ ನಯನಾ ಮೇಲೆ ಸಿಟ್ಟಾಗಿದ್ದ ಆರೋಪಿ ಮಲ್ಲಿಕಾರ್ಜುನ್ ಕಳೆದ 2 ದಿನಗಳ ಹಿಂದೆ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ನಂತರ ಮನೆಗೆ ಬಂದು ವಿಷ ಸೇವಿಸಿದ್ದನು. ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು