ಹುನ್ನೂರು ವರ್ತಕನ ಹತ್ಯೆಗೆ ಸಂಚು, ಐವರು ಸುಪಾರಿ ಹಂತಕರ ಬಂಧ‌ನ

Published : Jul 23, 2023, 09:26 AM IST
ಹುನ್ನೂರು ವರ್ತಕನ ಹತ್ಯೆಗೆ ಸಂಚು,  ಐವರು ಸುಪಾರಿ ಹಂತಕರ ಬಂಧ‌ನ

ಸಾರಾಂಶ

ಹುನ್ನೂರು ಗ್ರಾಮದ ಪ್ರಮುಖ ವರ್ತಕರೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ 5 ಜನ ಸುಪಾರಿ ಕಿಲ್ಲರ್‌ಗಳನ್ನು ಜಮಖಂಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಾಗಲಕೋಟೆ (ಜು.23): ಹುನ್ನೂರು ಗ್ರಾಮದ ಪ್ರಮುಖ ವರ್ತಕರೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ 5 ಜನ ಸುಪಾರಿ ಕಿಲ್ಲರ್‌ಗಳನ್ನು ಜಮಖಂಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕಣದಾಳ ಗ್ರಾಮದ ಕಿರಣ ಭೀಮಪ್ಪ ಚಿಗರಿ, ಬಸ್ತವಾಡದ ಸಿದ್ದಪ್ಪ ಶಿವಪ್ಪ ಲಟ್ಟೆ, ಕಣದಾಳದ ಪರಶುರಾಮ ಭರಮಪ್ಪ ಕರಿಹೊಳೆ ಹಾಗೂ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಸಿದ್ದಾರ್ಥ ಶಿವಾನಂದ ಹಿರೇಮಠ, ರಬಕವಿ-ಬನಹಟ್ಟಿತಾಲೂಕಿನ ಕುಲಹಳ್ಳಿ ಗ್ರಾಮದ ದಾನೇಶ ಮಾರುತಿ ಭಜಂತ್ರಿ ಬಂಧಿತ ಆರೋಪಿಗಳು.

ಮಣಿಪುರ ಯುವತಿಗೆ ರ‍್ಯಾಪಿಡೋ ಬೈಕ್‌ ಚಾಲಕನಿಂದ ಆಶ್ಲೀಲ ಮೆಸೇಜ್‌: ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ಆರೋಪ

ಜಮಖಂಡಿ ನಗರದ ರುದ್ರಾಸ್ವಾಮಿ ಪೇಠ ಗಲ್ಲಿಯ ಸಂಜು ವಿಠ್ಠಲ ಕಡಕೋಳ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಉಳಿದಂತೆ ಜಮಖಂಡಿ ಗ್ರಾಮೀಣ ಪೊಲೀಸರು ಈ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಸುಪಾರಿ ಕಿಲ್ಲರ್‌ಗಳಿಂದ ಪಿಸ್ತೂಲ್‌, ಲಾಂಗ್‌ ಹಾಗೂ . 5335 ನಗದು ವಶಕ್ಕೆ ಪಡೆಯಲಾಗಿದೆ ಡಿವೈಎಸ್ಪಿ ತಿಳಿಸಿದ್ದಾರೆ.

ತಾಲೂಕಿನ ಮುತ್ತೂರ ಪುನರ್ವಸತಿ ಕೇಂದ್ರದಲ್ಲಿ ಆರು ಜನರು ಸೇರಿ ಕೊಲೆಗೆ ಸಂಚು ರೂಪಿಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ವರ್ತಕರೊಬ್ಬರನ್ನು ಕೊಲೆ ಮಾಡಲು ಉದ್ದೇಶಿಸಿದ್ದರ ಬಗ್ಗೆ ಆರೋಪಿತರು ಬಾಯಿ ಬಿಟ್ಟಿದ್ದಾರೆಂದು ಡಿವೈಎಸ್ಪಿ ಶಾಂತವೀರ ಮಾಹಿತಿ ನೀಡಿದರು.

ಮಣಿಪಾಲದಲ್ಲಿ ವೈಶ್ಯಾವಾಟಿಕೆ ಆರೋಪಿಗಳ ಬಂಧನ ಮಹಿಳೆಯರ ರಕ್ಷಣೆ

ಗ್ರಾಮೀಣ ಠಾಣೆ ಎಸೈ ಮಹೇಶ ಸಂಕ ಹಾಗೂ ಸಿಬ್ಬಂದಿ ಕೆ.ಪಿ.ಸವದತ್ತಿ, ಬಿ.ಎಸ್‌.ಬಿರಾದಾರ, ಎಸ್‌.ಎಸ್‌.ನಾಯಕ, ಬಾಬು ಗುಳಬಾಳ, ಬಿ.ಪಿ.ಕುಸನಾಳ, ಎಲ್‌.ಎಚ್‌.ಲಾಯಣ್ಣವರ, ಎಸ್‌.ಜಿ.ಸಾಲಮನಿ, ಎಸ್‌.ಎಸ್‌.ಹಿರೇಮಠ, ವಿ.ಎಸ್‌.ಜಾಧವ, ಎಸ್‌.ಎಂ.ಬಡಿಗೇರ, ಪಿ.ಎಂ.ಹೊಸಮನಿ, ಎಸ್‌.ಎಸ್‌.ಜಕಾತಿ, ಆರ್‌.ಎಚ್‌.ಪೂಜಾರಿ, ಬಿ.ಬಿ.ವನಜೋಳ, ಎಂ.ಎಸ್‌.ಸನದಿ, ಎನ್‌.ಬಿ.ಬಿಸಲದಿನ್ನಿ, ಕೆಲೂಡಿ, ಗನಸೈದ ನಡಗಡ್ಡಿ, ಬಸವರಾಜ ಜಗಲಿ, ಚಂದ್ರಶೇಖರ ಜಿಟ್ಟೆಪ್ಪಗೋಳ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಎಸ್ಪಿ ಬಹುಮಾನ ಘೋಷಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು