
ಬೆಂಗಳೂರು(ಏ. 24) ಕೊರೋನಾ ಲಾಕ್ ಡೌನ್ ಪರಿಣಾಮ ಎಲ್ಲ ಕಡೆ ಮದ್ಯ ಬಂದ್ ಆಗಿದೆ. ಆದರೆ ಬೆಂಗಳೂರಿನಲ್ಲಿ ಸರ್ಕಾರಿ ಅಧಿಕಾರಿಗಳೆ ಮದ್ಯ ಸಾಗಾಟ ಮಾಡುತ್ತಿರವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಸರ್ಕಾರಿ ಅಧಿಕಾರಿಗಳಿಂದಲೇ ಎಣ್ಣೆ ಸಾಗಾಟ ನಡೆದಿದೆ. ಜಿಎಸ್ಟಿ ಇಲಾಖೆಗೆ ಸೇರಿದ ವಾಹನದಲ್ಲಿ ಮದ್ಯ ಸಾಗಾಟ ಮಾಡಲಾಗುತ್ತಿತ್ತು. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲ ಘಟನೆಯಾಗಿದೆ.
ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಮದ್ಯ ಕಂಡುಬಂದಿದ್ದು ಎಸಿಪಿ ವಾಸು ಮದ್ಯ ಹಾಗೂ ವಾಹನ ಸೀಜ್ ಮಾಡಿದ್ದಾರೆ . ಚಾಲಕನ ಜತೆ ಒಬ್ಬರು ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಎರಡು ತಿಂಗಳು ಮದ್ಯ ಸಿಗದಿದ್ದರೆ ಶೇ. 50 ಜನ ಎಣ್ಣೆ ಬಿಡ್ತಾರಂತೆ!
ಮೂರು ಕೇಸ್ ಮದ್ಯ ಕೆಎ 01 ಜಿ 5956 ವಾಹನದಲ್ಲಿ ಸಿಕ್ಕಿದೆ. ಜಿಎಸ್ ಟಿ ಎನ್ಪೋರ್ಸಮೆಂಟ್ ವಾಹನದಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ವಿಚಾರ ನಿಜಕ್ಕೂ ಹೊಸ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೇ 3ರವರೆಗೆ ಈಗಾಗಲೇ ಲಾಕ್ ಡೌನ್ ಮುಂದುವರಿಯಲಿದೆ ಎಂದು ತಿಳಿಸಲಾಗಿದ್ದು ಕೆಲ ಸಡಿಲಿಲಕೆ ಮಾತ್ರ ಮಾಡಲಾಗಿದೆ. ಬೆಂಗಳೂರು ಮಹಾನಗರಕ್ಕೆ ಪಾದರಾಯನಪುರ ಮತ್ತು ಸೋಂಕಿತ ಬಿಹಾರಿ ವ್ಯಕ್ತಿ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ