ಬೆಂಗಳೂರು: ಕಾರಿನಲ್ಲಿ ಸಜೀವ ದಹನ, ಒಳ ಉಡುಪಿನಿಂದ ಮೃತ ವ್ಯಕ್ತಿಯ ಗುರುತು ಪತ್ತೆ..!

Published : Apr 06, 2023, 08:15 PM ISTUpdated : Apr 06, 2023, 08:17 PM IST
ಬೆಂಗಳೂರು: ಕಾರಿನಲ್ಲಿ ಸಜೀವ ದಹನ, ಒಳ ಉಡುಪಿನಿಂದ ಮೃತ ವ್ಯಕ್ತಿಯ ಗುರುತು ಪತ್ತೆ..!

ಸಾರಾಂಶ

ಮಾರ್ಚ್ 29 ರಂದು ನಡೆದಿದ್ದ ಘಟನೆ, ವಿನೋದ್ ಜೀವಕ್ಕೆ ಸೊಳ್ಳೆ ಬತ್ತಿ ಕುತ್ತು ತಂದಿದೆ ಅಂತ ಪೊಲೀಸರು ತನಿಖೆಯಿಂದ ತಿಳಿದು ಬಂದಿದೆ. 

ಬೆಂಗಳೂರು(ಏ.06):  ಒಳ ಉಡುಪಿನಿಂದ ಮೃತ ವ್ಯಕ್ತಿ ಗುರುತು ಪತ್ತೆಯಾಗಿದೆ. ಹೌದು, ಮಾರ್ಚ್ 29 ರಂದು ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೇವಿನಗರದಲ್ಲಿ ನಿಂತಿದ್ದ ಕಾರಿನಲ್ಲಿ ಮಲಗಿದ್ದ ವ್ಯಕ್ತಿ ಸಜೀವ ದಹನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿ ಗುರುತನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ವಿನೋದ್ ಮೃತ ವ್ಯಕ್ತಿ ಅನ್ನೋದು ಗೊತ್ತಾಗಿದೆ. 

ಮಾರ್ಚ್ 29 ರಂದು ಘಟನೆ ನಡೆದಿತ್ತು. ವಿನೋದ್ ಜೀವಕ್ಕೆ ಸೊಳ್ಳೆ ಬತ್ತಿ ಕುತ್ತು ತಂದಿದೆ ಅಂತ ಪೊಲೀಸರು ತನಿಖೆಯಿಂದ ತಿಳಿದು ಬಂದಿದೆ. 

ಬೆಂಗಳೂರು: ರಸ್ತೆ ಬದಿ ನಿಂತಿದ್ದ ಕಾರಿಗೆ ಆಕಸ್ಮಿಕ ಬೆಂಕಿ, ನಿರ್ಗತಿಕ ವ್ಯಕ್ತಿ ಸಜೀವ ದಹನ

ಮೃತ ವಿನೋದ್‌ನ ಪತ್ನಿ ದೂರವಾಗಿದ್ದರು. ಹೀಗಾಗಿ ದೊಡ್ಡಬೊಮ್ಮಸಂದ್ರದಲ್ಲಿ ತಾಯಿ ಜೊತೆಗೆ ವಿನೋದ್‌ ವಾಸವಿದ್ದ. ಮದ್ಯ ವ್ಯಸನಿಯಾಗಿದ್ದ ವಿನೋದ್ ಎಲ್ಲೆಂದರಲ್ಲಿ ಕುಡಿದು ಮಲಗುತ್ತಿದ್ದನಂತೆ. ಸ್ಕ್ರಾಪ್ ಕಾರಿನಲ್ಲಿ ಸೊಳ್ಳೆ ಬತ್ತಿ ಹಚ್ಚಿಕೊಂಡು ವಿನೋದ್ ಮಲಗಿದ್ದನಂತೆ. ಸೊಳ್ಳೆ ಬತ್ತಿಯಿಂದ ಬೆಂಕಿ ತಗುಲಿದ ಪರಿಣಾಮ ವಿನೋದ್‌ ಸಜೀವ ದಹನವಾಗಿದ್ದ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!