ಹೈದರಾಬಾದ್‌: ನಿರ್ಮಾಣ ಹಂತದಲ್ಲಿದ್ದ ಪೊಲೀಸ್ ಕಂಟ್ರೋಲ್ ಕೇಂದ್ರದಲ್ಲೇ ಕಳ್ಳತನ: ದೂರು ದಾಖಲು

Published : Jun 11, 2022, 08:48 PM IST
ಹೈದರಾಬಾದ್‌: ನಿರ್ಮಾಣ ಹಂತದಲ್ಲಿದ್ದ ಪೊಲೀಸ್ ಕಂಟ್ರೋಲ್ ಕೇಂದ್ರದಲ್ಲೇ ಕಳ್ಳತನ: ದೂರು ದಾಖಲು

ಸಾರಾಂಶ

ಯೋಜನಾ ವ್ಯವಸ್ಥಾಪಕರು ಕಳ್ಳತನದ ಕುರಿತು ಬಂಜಾರ ಹಿಲ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳತನವಾಗಿರುವ ವಸ್ತು ಸುಮಾರು 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹೈದರಾಬಾದ್‌ (ಜೂ. 11): ಹೈದರಾಬಾದ್‌ನ ಹೃದಯಭಾಗದಲ್ಲಿರುವ ಬಂಜಾರಾ ಹಿಲ್ಸ್‌ನಲ್ಲಿರುವ ತೆಲಂಗಾಣದ ನಿರ್ಮಾಣವಾಗುತ್ತಿರುವ ಪೊಲೀಸ್ ಕಮಾಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ಕಳ್ಳತನ ನಡೆದಿದೆ. ನಿರ್ಮಾಣ ಹಂತದಲ್ಲಿರುವ ಕೇಂದ್ರದಿಂದ ಹಲವಾರು ಲಕ್ಷ ಮೌಲ್ಯದ ತಾಮ್ರದ ತಂತಿಯ ಕಟ್ಟುಗಳನ್ನು ಅಪರಿಚಿತ ವ್ಯಕ್ತಿಗಳು ಕದ್ದೊಯ್ದಿದ್ದಾರೆ. ಯೋಜನಾ ವ್ಯವಸ್ಥಾಪಕರು ಕಳ್ಳತನದ ಕುರಿತು ಬಂಜಾರ ಹಿಲ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳತನವಾಗಿರುವ ವಸ್ತು ಸುಮಾರು 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಳ್ಳತನದಲ್ಲಿ ಒಳಗಿನವರ ಪಾತ್ರವನ್ನು ಶಂಕಿಸಿ, ಪೊಲೀಸರು ಸೈಟ್‌ನಲ್ಲಿ ಕೆಲವು ಕಾರ್ಮಿಕರನ್ನು ಪ್ರಶ್ನಿಸಿದ್ದಾರೆ. 

ರಾಜ್ಯ ಸರ್ಕಾರವು ಬಂಜಾರ ಹಿಲ್ಸ್‌ನ ರಸ್ತೆ ಸಂಖ್ಯೆ 12 ರಲ್ಲಿ ಪ್ರತಿಷ್ಠಿತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ನಿರ್ಮಿಸುತ್ತಿದೆ. 585 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಬಹುಮಹಡಿ ಕೇಂದ್ರವು ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಮೇಲೆ ನಿಗಾ ಇಡುವ ಉದ್ದೇಶದಿಂದ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ. ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು, ಸೌಲಭ್ಯವು ದೊಡ್ಡ ಕೂಟಗಳ ಮೇಲೆ, ವಿಶೇಷವಾಗಿ ವಿವಿಧ ಧಾರ್ಮಿಕ ಹಬ್ಬಗಳ ಸಮಯದಲ್ಲಿ ನಿಗಾ ಇರಿಸಲಿದೆ.

95 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಗೃಹ ಸಚಿವ ಮಹಮೂದ್ ಅಲಿ ಕಳೆದ ತಿಂಗಳು ಹೇಳಿದ್ದರು. ಕೇಂದ್ರವು ಐದು ಕಟ್ಟಗಳನ್ನು ಒಳಗೊಂಡಿದೆ. ಒಂದು ಕಟ್ಟಡವು ಹೈದರಾಬಾದ್ ಪೋಲೀಸ್ ಕಮಿಷನರ್ ಕಚೇರಿಯನ್ನು ಹೊಂದಿರುತ್ತದೆ, ಮತ್ತೊಂದು ಕಟ್ಟಡ ತಂತ್ರಜ್ಞಾನದ ಸಮ್ಮಿಳನ ಕೇಂದ್ರವಾಗಿರುತ್ತದೆ - ತುರ್ತು ಪ್ರತಿಕ್ರಿಯೆ ನಿರ್ವಹಣಾ ವ್ಯವಸ್ಥೆ, ಡಯಲ್ 100 ಮತ್ತು ವಾರ್ ರೂಮ್  ನಿರ್ವಹಿಸಲಿದೆ.

ಇದನ್ನೂ ಓದಿ: ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಅತ್ತೆಯನ್ನೇ ಕೊಂದ ಸೊಸೆ

ಇದನ್ನೂ ಓದಿ: ಮೊಬೈಲ್ ಕಿತ್ತು ಎಸ್ಕೇಪ್: 7 ಪ್ರಕರಣಗಳಲ್ಲಿ ಬೇಕಾಗಿದ್ದ ಸುಲಿಗೆಕೋರರ ಬಂಧನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!