ಚಿತ್ತಾಪುರ: ಪತ್ನಿಗೆ ಗುಂಡುಹಾರಿಸಿ ಸಾಯಿಸಿದ್ದ ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ

Published : Sep 19, 2023, 10:45 PM IST
ಚಿತ್ತಾಪುರ: ಪತ್ನಿಗೆ ಗುಂಡುಹಾರಿಸಿ ಸಾಯಿಸಿದ್ದ ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ

ಸಾರಾಂಶ

ಬಸವರಾಜ ನಾರಾಯಣಿ ಹಾಗೂ ಅವರ ಪತ್ನಿ ಹಣಮವ್ವ ಇಬ್ಬರು ಮೃತಪಟ್ಟ ಕಾರಣ ಅವರ ನಾಲ್ಕು ಜನ ಸಣ್ಣ ಸಣ್ಣ ಮಕ್ಕಳ ಭವಿಷ್ಯ ಅತಂತ್ರವಾದಂತಾಗಿದೆ

ಚಿತ್ತಾಪುರ(ಸೆ.19):  ಅಲ್ಲೂರ(ಬಿ) ಗ್ರಾಮದ ಬಸವರಾಜ ಹಂಪಯ್ಯ ನಾರಾಯಣಿ(40) ಎನ್ನುವವರು ತನ್ನ ಪತ್ನಿ ಹಣಮವ್ವ(35)ಗಳನ್ನು ಅಲ್ಲೂರ(ಕೆ) ಗ್ರಾಮದ ಅವರ ಮನೆಯಲ್ಲಿ ಗುಂಡು ಹಾರಿಸಿ ಸಾಯಿಸಿ ಪರಾರಿಯಾಗಿ ತಲೆಮರೆಸಿಕೊಂಡಿದ್ದವನು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತರಾಗಿರುವ ಘಟನೆ ನಡೆದಿದೆ.

ಗಂಡ ಹೆಂಡತಿಯ ಮಧ್ಯೆ ಇದ್ದ ಕೌಟುಂಬಿಕ ಜಗಳದ ಹಿನ್ನಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಸವರಾಜ ನಾರಾಯಣಿ ಅವರ ಹೆಂಡತಿ ಹಣಮವ್ವ ತವರು ಊರಾದ ಅಲ್ಲೂರ(ಕೆ) ಗ್ರಾಮದಲ್ಲಿ ಬಂದು ವಾಸವಾಗಿದ್ದಳು. ಗುರುವಾರ ಅಲ್ಲೂರ(ಕೆ) ಗ್ರಾಮದಲ್ಲಿ ಊರ ಹಬ್ಬವಾದ 101 ಎತ್ತುಗಳ ವಿಶೇಷ ಪೂಜೆಯ ದಿನದಂದು ಗ್ರಾಮಸ್ಥರು ಸಂಬ್ರಮದಲ್ಲಿರುವ ಸಂದರ್ಭದಲ್ಲಿ ಬಸವರಾಜ ಕುಡಿದು ಅಲ್ಲೂರ(ಕೆ) ಗ್ರಾಮದಲ್ಲಿದ್ದ ತನ್ನ ಹೆಂಡತಿಯ ಮನೆಗೆ ಬಂದು ಜಗಳ ತೆಗೆದು ಗುಂಡು ಹೊಡೆದು ಸಾಯಿಸಿ ಪರಾರೀಯಾಗಿದ್ದ. ಈ ಘಟನೆ ನಡೆದ ನಂತರ ಚಿತ್ತಾಪುರ ಪೊಲಿಸ್ ಠಾಣಿಯ ಪೊಲಿಸರು ಅವರ ಪತ್ತೆಗೆ ಶೋಧ ನಡೆಸುತ್ತಿದ್ದರು.

ಕಿರುಕುಳ ತಾಳದೇ ತವರುಮನೆ ಸೇರಿದ್ದ ಪತ್ನಿಯನ್ನ ಗುಂಡು ಹಾರಿಸಿ ಕೊಂದ ಪತಿ!

ಶನಿವಾರ ದಂದು ಅಲ್ಲೂರ(ಬಿ) ಗ್ರಾಮದ ಅವನ ಮನೆಯಲ್ಲಿ ದುರ್ವಾಸನೆ ಬರುತ್ತಿರುವ ಕುರಿತು ಗ್ರಾಮಸ್ಥರು ಪೊಲಿಸರಿಗೆ ಮಾಹಿತಿ ನೀಡಿದ ಪರಿಣಾಮ ಪೊಲಿಸರು ಮನೆಗೆ ಭೆಟ್ಟಿ ನೀಡಿ ಪರಿಶೀಲಿಸಿದಾಗ ನೇಣು ಬಿಗಿದುಕೊಂಡ ಪರಿಸ್ಥಿತಿಯಲ್ಲಿ ಅವನ ಶವ ಪತ್ತೆಯಾಗಿದೆ. ಬಸವರಾಜ ನಾರಾಯಣಿ ಹಾಗೂ ಅವರ ಪತ್ನಿ ಹಣಮವ್ವ ಇಬ್ಬರು ಮೃತಪಟ್ಟ ಕಾರಣ ಅವರ ನಾಲ್ಕು ಜನ ಸಣ್ಣ ಸಣ್ಣ ಮಕ್ಕಳ ಭವಿಷ್ಯ ಅತಂತ್ರವಾದಂತಾಗಿದೆ.

ಘಟನಾ ಸ್ಥಳಕ್ಕೆ ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಐ ಶ್ರೀಶೈಲ ಅಂಬಾಟಿ ಪರಿಶೀಲನೆ ನಡೆಸಿದ್ದಾರೆ, ಚಿತ್ತಾಪುರ ಪೊಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ