
ಹೈದರಾಬಾದ್(ಜು.06): ಮನ್ಸೂನ್ನಿಂದ ಕೆರೆ ನದಿಗಳು ತುಂಬಿವೆ. ಜಲಪಾತಗಳ ಸೌಂದರ್ಯ ಹೆಚ್ಚಿದೆ. ಇಲ್ಲೇ ಒಂದು ಫೋಟೋ ತೆಗೆಯೋಣ ಅಂತ ಗಡಿಬಿಡಿಯಲ್ಲಿ ಧಾವಿಸೋ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.
ಸೆಲ್ಫೀ ತೆಗೆಯೋ ಗೀಳಿನಿಂದ ಮೂವರು ಸಹೋದರಿಯರು ನೀರಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತೆಲಂಗಾಣದ ನಿರ್ಮಲ್ ಜಿಲ್ಲೆಯ ಶಿಂಗಂಗಂನಲ್ಲಿ ಘಟನೆ ನಡೆದಿದೆ.
ಭಾನುವಾರ ಸಂಜೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಶಿಂಗಂಗಂ ಗ್ರಾಮದಲ್ಲಿ ಸೆಲ್ಫೀ ಕ್ಲಿಕ್ ಮಾಡುವ ಕ್ರೇಝ್ಗೆ ಮೂವರು ಅಪ್ರಾಪ್ತ ಸಹೋದರಿಯರು ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಬಾಲಕಿಯರನ್ನು ಸುನೀತಾ (16), ವೈಶಾಲಿ (14) ಮತ್ತು ಅಂಜಲಿ (14) ಎಂದು ಗುರುತಿಸಲಾಗಿದೆ.
ಮೂವರು ಹದಿಹರೆಯದ ಸಹೋದರಿಯರು ಭಾನುವಾರ ಸಂಜೆ ಕಾಣೆಯಾಗಿದ್ದರು. ಮರುದಿನ ಸೋಮವಾರ ಅವರ ಮೃತದೇಹ ಗ್ರಾಮದ ಹೊರವಲಯದಲ್ಲಿರುವ ಕೊಳವೊಂದರಲ್ಲಿ ಪತ್ತೆಯಾಗಿವೆ. ಸೆಲ್ಫಿಗಳನ್ನು ಕ್ಲಿಕ್ ಮಾಡಲು ಮೂವರು ಕೊಳಕ್ಕೆ ಹೋಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಜೋಯಿಡಾ: ಸೆಲ್ಫಿ ಹುಚ್ಚಿಗೆ ಯುವಜೋಡಿ ಬಲಿ..!...
ಹುಡುಗಿಯೊಬ್ಬಳು ಸೆಲ್ಫಿ ತೆಗೆದುಕೊಳ್ಳುವಾಗ ಜಾರಿ ಕೊಳಕ್ಕೆ ಬಿದ್ದಿದ್ದಳು. ತರುವಾಯ, ಅವಳ ಇಬ್ಬರು ಸಹೋದರಿಯರು ಅವಳನ್ನು ಉಳಿಸಲು ನೀರಿಗೆ ಹಾರಿದರು. ದುರದೃಷ್ಟವಶಾತ್, ಮೂವರೂ ಮುಳುಗಿದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಕರ್ನಾಟಕದ ಮಂಗಳೂರು ಜಿಲ್ಲೆಯ ಜೋಕಾಟ್ಟೆ ರಸ್ತೆ ಸಂಖ್ಯೆ 04 ಬಳಿ ಸೆಲ್ಫಿ ಕ್ಲಿಕ್ ಮಾಡುವಾಗ 16 ವರ್ಷದ ಬಾಲಕನಿಗೆ ತೀವ್ರ ಸುಟ್ಟ ಗಾಯಗಳಾಗಿದ್ದ ಘಟನೆಯ ನಂತರ ನಡೆದ ಸೆಲ್ಫೀ ಟ್ರಾಜಿಡಿ ಇದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ