ವಾಟ್ಸಾಪ್ ಗ್ರೂಪ್‌ಗಳಲ್ಲಿ ಹೆಚ್ಚಾದ ಎಪಿಕೆ ಆ್ಯಪ್‌ಗಳ ಹಾವಳಿ: ಫೇಕ್ ಮೆಸೇಜ್‌ ಮೂಲಕ ವಂಚನೆ!

Published : Jan 18, 2025, 12:46 PM IST
ವಾಟ್ಸಾಪ್ ಗ್ರೂಪ್‌ಗಳಲ್ಲಿ ಹೆಚ್ಚಾದ ಎಪಿಕೆ ಆ್ಯಪ್‌ಗಳ ಹಾವಳಿ: ಫೇಕ್ ಮೆಸೇಜ್‌ ಮೂಲಕ ವಂಚನೆ!

ಸಾರಾಂಶ

ವಿಜಯಪುರ ಜಿಲ್ಲೆಯಾದ್ಯಂತ ಮೊಬೈಲ್ ಬಳಕೆದಾರರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಎಪಿಕೆ ಫೈಲ್ ಗಳುಳ್ಳ ಸಂದೇಶಗಳು ಬರುತ್ತಿವೆ. ಯಾವುದೋ ಅಪರಿಚಿತರು ಅಥವಾ ತಮ್ಮ ಪರಿಚಯಸ್ಥರಿಂದರ ಮೊಬೈಲ್ ಸಂಖ್ಯೆಯಿಂದಲೇ ಕೆಲವು ಸಂದೇಶಗಳು ಬರುತ್ತಿವೆ. ಅದನ್ನು ಕ್ಲಿಕ್ ಮಾಡಿದರೆ ಮಾಡಿದ ವರ ಮೊಬೈಲ್‌ಗಳು ಸಹ ಹ್ಯಾಕ್ ಆಗುತ್ತಿವೆ. 

ಶಶಿಕಾಂತ ಮೆಂಡೆಗಾರ 

ವಿಜಯಪುರ(ಜ.18): ಇಷ್ಟು ದಿನ ಕರೆ ಮಾಡಿ ಒಟಿಪಿ ಕೇಳುವ ಮೂಲಕ ವಂಚಿಸುತ್ತಿದ್ದ ವಂಚಕರ ಜಾಲದ ಬಗ್ಗೆ ಜನರು ಎಚ್ಚೆತ್ತುಕೊಂಡು, ಒಟಿಪಿ ಹೇಳುವುದನ್ನು ಬಂದ್ ಮಾಡಿದ್ದಾರೆ. ಆದರೆ, ಮತ್ತೆ ಒಂದು ಹೆಜ್ಜೆ ಮುಂದೆ ಹೋಗಿರುವ ಈ ವಂಚಕರು ಅಮಾಯಕರ ಸಂಖ್ಯೆಗಳನ್ನು ಹ್ಯಾಕ್ ಮಾಡಿ, ಅವರ ಮೊಬೈಲ್‌ನಲ್ಲಿರುವ ಸಂಖ್ಯೆಗಳು ಹಾಗೂ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಫೇಕ್ ಸಂದೇಶಗಳನ್ನು ಕಳುಹಿಸಿ ವಂಚಿಸಲು ಶುರು ಮಾಡಿದ್ದಾರೆ. 

ಹೇಗೆ ಹ್ಯಾಕ್‌ ಮಾಡ್ತಾರೆ?: 

ಮೊದಲಿಗೆ ಒಂದಿಷ್ಟು ನಂಬರ್‌ಗಳಿಗೆ ನಿಮಗೊಂದು ಗಿಫ್ಟ್ ಬಂದಿದೆ. ಬಹುಮಾನ ಬಂದಿದೆ. ಇದರ ಮೇಲೆ ಕ್ಲಿಕ್ ಮಾಡಿ ಎಂದು ಸಂದೇಶ ಕಳುಹಿಸುತ್ತಾರೆ. ಅವರು ಆ ಮೆಸೇಜ್ ಟಚ್ ಮಾಡಿದ ತಕ್ಷಣ ಮೊಬೈಲ್ ಬಳಕೆದಾರರಿಗೆ ಗೊತ್ತಾಗದಂತೆ ಅವರ ಮೊಬೈಲ್ ನಲ್ಲಿ ಒಂದು ಎಪಿಕೆ ಫೈಲ್ ಡೌನಲೋಡ್ ಮಾಡಿ ಅವರ ಇಡಿ ಮೊಬೈಲ್ ತಮ್ಮ ಹಿಡಿತಕ್ಕೆ ತೆಗೆದುಕೊಳ್ತಾರೆ. ಬಳಿಕ ಅವರ ಮೊಬೈಲ್‌ನಲ್ಲಿರುವ ಸಂಪರ್ಕ ಸಂಖ್ಯೆಗಳು ಹಾಗೂ ಗ್ರೂಪ್‌ ಗಳಿಗೆ ಸುಳ್ಳು ಸುಳ್ಳು ಮೆಸೇಜ್ ಕಳಿಸಿ ಅವರು ಅದನ್ನು ಒತ್ತಿದ ತಕ್ಷಣ ಅಮಾಯಕರಿಗೆ ಮೋಸ ಮಾಡುತ್ತಾರೆ.

50 ಸಾವಿರ ಸಾಲಕ್ಕೆ ಬಾಲಕಿ ಬದುಕು ಸರ್ವನಾಶ; ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ತವರಲ್ಲಿ ಇದೆಂಥ ಅಮಾನವೀಯ ಕೃತ್ಯ!

ವಿಜಯಪುರ ಜಿಲ್ಲೆಯಾದ್ಯಂತ ಮೊಬೈಲ್ ಬಳಕೆದಾರರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಎಪಿಕೆ ಫೈಲ್ ಗಳುಳ್ಳ ಸಂದೇಶಗಳು ಬರುತ್ತಿವೆ. ಯಾವುದೋ ಅಪರಿಚಿತರು ಅಥವಾ ತಮ್ಮ ಪರಿಚಯಸ್ಥರಿಂದರ ಮೊಬೈಲ್ ಸಂಖ್ಯೆಯಿಂದಲೇ ಕೆಲವು ಸಂದೇಶಗಳು ಬರುತ್ತಿವೆ. ಅದನ್ನು ಕ್ಲಿಕ್ ಮಾಡಿದರೆ ಮಾಡಿದ ವರ ಮೊಬೈಲ್‌ಗಳು ಸಹ ಹ್ಯಾಕ್ ಆಗುತ್ತಿವೆ. 

ಬರುವ  ಸಂದೇಶಗಳೇನು?: 

ಪ್ರಿಯ ಗ್ರಾಹಕರೇ, ನಿಮ್ಮ ಎಸ್‌ಬಿಐ ಬ್ಯಾಂಕ್ ಖಾತೆಯ ವಹಿವಾಟನ್ನು ತಡೆಹಿಡಿಯಲಾಗಿದೆ. ಖಾತೆಯಲ್ಲಿ ಆಧಾರ್ ಸಂಖ್ಯೆ ನವೀಕರಿಸದ ಕಾರಣ ಇಂದು ರಾತ್ರಿ ಖಾತೆಯನ್ನು ಶಾಶ್ವತವಾಗಿ ನಿರ್ಬಂಧಿಸಲಾಗುತ್ತದೆ. ದಯವಿಟ್ಟು ಈಗಲೇ ನವೀಕರಿಸಿ ಕೆವೈಸಿ ನವೀಕರಣಕ್ಕಾಗಿ ಎಸ್‌ಬಿಐ ಆಧಾ‌ರ್ ನವೀಕರಣ ಅಪ್ಲಿಕೇಶನ್ ಅನ್ನು ಸ್ಥಾಪಿಸಿ. ಎಂದು ಎಪಿಕೆ ಫೈಲ್ ಒಂದನ್ನು ಕಳುಹಿಸಲಾಗುತ್ತಿದೆ. ಅದನ್ನು ಕ್ಲಿಕ್ ಮಾ ಡಿದರೆ ತಕ್ಷಣವೇ ಎಪಿಕೆ ಫೈಲ್ ಡೌನ್ ಲೋಡ್ ಆಗಿ ಅವರಮೊಬೈಲ್ ಹ್ಯಾಕ್ ಮಾಡಲಾಗುತ್ತಿದೆ. ಇದು ಕೇವಲ ಒಂದು ಉದಾಹರಣೆ ಅಷ್ಟೆ. ಇದರಂತೆ ಕೆನರಾ ಬ್ಯಾಂಕ್‌ನಿಂದ, ಪಿಎಂ ಕಿಸಾನ್ ಇ-ಕೆವೈಸಿ ಮಾಡಿಸಬೇಕು, ಸಿಎಸ್‌ಪಿ ಸರ್ವಿಸ್, ಹೀಗೆ ಬೇರೆ ಬೇರೆ ಸಂಸ್ಥೆಗಳು ಹಾಗೂ ಯೋಜನೆ ಗಳ ಹೆಸರಿನಲ್ಲಿ ಎಪಿಕೆ ಫೈಲ್ ಕಳಿಸಿ ವಂಚಿಸಲಾಗುತ್ತಿದೆ. ಎಕ್ಸಿಸ್ ಬ್ಯಾಂಕ್‌ನಿಂದಲೂ 10 ಸೆಕೆಂಡ್ ನಲ್ಲಿ 5ಲಕ್ಷ ಲೋನ್ ಕೊಡುತ್ತೇವೆ ಅಪ್ಪೆ ಮಾಡಿ ಎಂದು ಸಂದೇಶ ಕಳುಹಿಸಲಾಗುತ್ತಿದೆ. ವಿಜಯಪುರದಲ್ಲೂ ಹೆಚ್ಚಾದ 

ಎಪಿಕೆ ಹಾವಳಿ!: 

ವಿಜಯಪುರದ ಜನತೆ ನಿತ್ಯ ಬೆಳಗ್ಗೆದ್ದು ಮೊಬೈಲ್ ಆನ್ ಮಾಡಿ, ವಾಟ್ಸಾಪ್ ಓಪನ್ ಮಾಡಿದರೆ ಸಾಕು, ಈ ರೀತಿಯಾಗಿ ವಂಚಿಸುವ ಎಪಿಕೆ ಆಪ್ ಗಳ ದಾಂಗುಡಿ ಶುರುವಾಗಿದೆ. ರೈತರ ಗ್ರೂಪ್, ದ್ರಾಕ್ಷಿ ಬೆಳೆಗಾರರ ಗ್ರೂಪ್ ಸೇರಿದಂತೆ ಹಲವು ಅಮಾಯಕರ ಗ್ರೂಪ್ ನಲ್ಲಿ ಇಂತಹ ಮೆಸೇಜ್ ಕಳುಹಿಸುತ್ತಾರೆ. ಅರಿಯದ ಅಮಾಯಕರು ಅಥವಾ ಅವಸರದಲ್ಲಿ ಗೊತ್ತಾಗದೆ ಅದರ ಮೇಲೆ ಬೆರಳಿಟ್ಟರೆ ಸಾಕು, ಮೋಸ ಹೊಗೋದು ಪಕ್ಕಾ. ಆ ಬಳಿಕ ಅವರ ಮೊಬೈಲ್ ನಂಬರ್‌ಗೆ ಲಿಂಕ್ ಆಗಿರುವ ಎಲ್ಲ ಬ್ಯಾಂಕ್ ಖಾತೆಗಳಲ್ಲಿನ ಹಣ ಎಗರಿಸಲಾಗುತ್ತದೆ. 

ಜೊತೆಗೆ ಅವರ ಗೌಪ್ಯತೆಯ ಅದೆಷ್ಟೋ ಫೋಟೋಗಳ, ವಿಡಿಯೋಗಳನ್ನು, ವಿಚಾರಗಳನ್ನು ಲೀಕ್ ಮಾಡಲಾಗುತ್ತದೆ. ಜಿಲ್ಲಾ ಕ್ರೈಂ ಸ್ಟೇಷನ್‌ನಲ್ಲೂ ಸಹ ನಿತ್ಯ ಒಂದಲ್ಲ ಒಂದು ಇಂತಹದ್ದೇ ಕೇಸ್‌ಗಳು ದಾಖಲಾಗುತ್ತಿವೆ. ಇನ್ನು ಕೆಲಸವರು ಏನು ಮಾಡಬೇಕು ಎಂಬುದು ಗೊತ್ತಾಗದೆ ಸುಮ್ಮನಾಗುತ್ತಿದ್ದಾರೆ. 

ವಂಚನೆಗೊಳಗಾಗಿ ಗ್ರೂಪ್ ಅಡ್ಡಿನ್‌ ಗಳ ಮೇಲೆ ಕ್ರಮ ಜರುಗಿಸಿ: ನಿತ್ಯ ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ರೀತಿ ಸುಳ್ಳು ಸಂದೇಶಗಳನ್ನು ಕಳಿಸುವ ವ್ಯಕ್ತಿಗಳ ಹಾಗೂ ಆ ಗ್ರೂಪ್ ಅಡ್ಡಿನ್‌ಗಳ ಮೇಲೆ ಸೂಕ್ತ ಕ್ರಮ ಜರುಗಿ ಸುವ ಕೆಲಸ ಆಗಬೇಕಿದೆ. ಈ ಮೂಲಕ ಪೊಲೀ ಸರು ಗ್ರೂಪ್‌ಗಳಲ್ಲಿ ಫೇಕ್ ಸಂದೇಶದೊಂದಿಗೆ ಎಪಿಕೆ ಫೈಲ್ ಕಳಿಸಿ ವಂಚಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುವುದು ಜನರ ಆಗ್ರಹ.

ಬೀದರ್ ಎಟಿಎಂ ಹಣ ಕದ್ದವರು ಬಿಹಾರಿಗಳು?: ಹೈದರಾಬಾದ್‌ನಲ್ಲೂ ದರೋಡೆಕೋರರ ದಾಂಧಲೆ

ಸುಳ್ಳು ಸಂದೇಶಗಳೊಂದಿಗೆ ಎಪಿಕೆ ಫೈಲ್ ಗಳನ್ನು ಕಳುಹಿಸಿ, ಅಮಾಯಕನ್ನು ವಂಚಿಸಲಾಗುತ್ತಿದೆ. ತಮ್ಮ ಮೊಬೈಲ್‌ಗಳಿಗೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಅಪರಿಚಿತರ ಸಂದೇಶ ಹಾಗೂ ಯಾವುದೇ ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬಾರದು. ಈ ಕುರಿತು ಸಾಮಾಜಿಕ ಜಾಲತಾಣಗಳ ಬಳಕೆದಾರರು ಎಚ್ಚರಿಕೆ ವಹಿಸಬೇಕಿದೆ. ಆಕಸ್ಮಿಕವಾಗಿ ಯಾರಾದರೂ ವಂಚನೆಗೊಳಗಾದರೆ ಸೈಬ‌ರ್ ಅಪರಾಧ ದೂರು ಸಂಖ್ಯೆ 1930ಗೆ ಕರೆಮಾಡಿ ದೂರು ಸಲ್ಲಿಸಬೇಕು. ಅಥವಾ ತಕ್ಷಣವೇ ಹತ್ತಿರದ ಠಾಣೆಯನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. 

ನಿತ್ಯ ಒಂದಲ್ಲ ಒಂದು ಗ್ರೂಪ್‌ಗಳಲ್ಲಿ ಈ ರೀತಿಯಾದ ಫೇಕ್ ಮೆಸೇಜ್ ಗಳು ಬರುತ್ತಿವೆ. ಅರಿತುಮರೆತು ಅದರ ಮೇಲೆ ಕ್ಲಿಕ್ ಮಾಡಿದರೇ ನಮ್ಮ ಖಾತೆಯನ್ನೇ ಗುಡಿಸಿಗುಂಡಾಂತರ ಮಾಡಿಬಿಡುತ್ತಾರೆ. ವ್ಯಕ್ತಿಯೊಬ್ಬರ ಮೊಬೈಲ್ ನಂಬರ್‌ಹ್ಯಾಕ್‌ ಮಾಡಲಾಗಿದ್ದು, ಅವರ ಸಂಖ್ಯೆ ಯಿಂದ ಗ್ರೂಪ್ ಗಳಲ್ಲಿ ಮೆಸೇಜ್ ಬರಲಾರಂಭಿಸಿವೆ. ವಿಜಯಪುರ ಜಿಲ್ಲೆಯ ಜನರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಬಿಜೆಪಿ ವಕ್ತಾರ ಸಂಜಯ ಪಾಟೀಲ ಕನಮಡಿ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ