ಬೆಳಗಾವಿ: ನಾಡ ಪಿಸ್ತೂಲ್‌ ಹೊಂದಿದ್ದ ನಾಲ್ವರ ಬಂಧನ

Kannadaprabha News   | Asianet News
Published : Nov 07, 2020, 03:37 PM IST
ಬೆಳಗಾವಿ: ನಾಡ ಪಿಸ್ತೂಲ್‌ ಹೊಂದಿದ್ದ ನಾಲ್ವರ ಬಂಧನ

ಸಾರಾಂಶ

ಸೆಮಿ ನಾಡ ಪಿಸ್ತೂಲ್‌ ಹೊಂದಿದ್ದ ನಾಲ್ಕು ಜನರ ಬಂಧನ| ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಉಚ್ಚವಡೆ ಕ್ರಾಸ್‌ನಲ್ಲಿ ಅರೆಸ್ಟ್‌| ಈ ಸಂಬಂಧ ಖಾನಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಬೆಳಗಾವಿ(ನ.07): ಅಕ್ರಮವಾಗಿ ಸೆಮಿ ನಾಡ ಪಿಸ್ತೂಲ್‌ ಹೊಂದಿದ್ದ ನಾಲ್ಕು ಜನರನ್ನು ಪೊಲೀಸರು ಬಂಧಿಸಿ, ಅವರಿಂದ ಒಂದು ಪಿಸ್ತೂಲ್‌, ಮೂರು ಜೀವಂತ ಗುಂಡು ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಓರ್ವ ಸೇರಿದಂತೆ ರಾಜ್ಯದ ಮೂವರನ್ನು ಬಂಧಿಸಲಾಗಿದೆ. 

ಖಾನಾಪೂರ ತಾಲೂಕಿನ ಉಚ್ಚವಡೆ ಕ್ರಾಸ್‌ನಲ್ಲಿ ಖಾನಾಪುರ ಸಿಪಿಐ ಸುರೇಶ ಶಿಂಗಿ ಗಸ್ತು ತಿರುತ್ತಿದ್ದ ಸಂದರ್ಭದಲ್ಲಿ ಒಂದು ಕಾರ್‌ ಹಾಗೂ ಎರಡು ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಗುಂಪಾಗಿ ನಿಂತಿದ್ದರು. ಪೊಲೀಸ್‌ ವಾಹನ ಕಾಣುತ್ತಿದ್ದಂತೆ ಮೂವರು ಓಡಿ ಹೋಗಿದ್ದಾರೆ. ಅನುಮಾನಗೊಂಡ ಪೊಲೀಸರು ಇನ್ನುಳಿದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಷಯ ಬೆಳ​ಕಿಗೆ ಬಂದಿದೆ.

ಕಲಬುರಗಿ: ಹೆಂಡತಿ ಎದುರೇ ಅಳಿಯನಿಂದ ಅತ್ತೆ ಕೊಲೆ..!

ತಪಾಸಣೆ ನಡೆಸಿದಾಗ ದಾಖಲೆ ಪತ್ರಗಳಿಲ್ಲದ ಒಂದು ಸೆಮಿ ಆಟೋಮ್ಯಾಟಿಕ್‌ ನಾಡ ಪಿಸ್ತೂಲ್‌, ಮೂರು ಜೀವಂತ ಗುಂಡು, ನಾಲ್ಕು ಮೊಬೈಲ್‌, 34 ಸಾವಿರ ನಗದು, ಒಂದು ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಖಾನಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ