
ಜೈಪುರ (ಜೂ. 22): ರಾಜಸ್ಥಾನದ ಜೈಪುರದಿಂದ ಮತ್ತೆ ನಾಯಿ ದಾಳಿಯ ಸುದ್ದಿ ಬೆಳಕಿಗೆ ಬಂದಿದೆ. ನಿನ್ನೆಯಷ್ಟೇ ಜೈಪುರದ ಬಜಾಜ್ ನಗರ ಪೊಲೀಸ್ ಠಾಣೆಯಲ್ಲಿ ಮನೆಯ ಮಾಲೀಕನನ್ನು ತಲೆಗೆ ಕಚ್ಚಿದ ಪ್ರಕರಣದಲ್ಲಿ ಪಾಲಿಕೆ ಸೇಂಟ್ ಬರ್ನಾಡ್ ನಾಯಿಯನ್ನು ವಶಕ್ಕೆ ಪಡೆದಿದ್ದರ ಬಗ್ಗೆ ವರದಿಯಾಗಿತ್ತು. ಘಟನೆ ಕುರಿತು ಬಜಾಜ್ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಈ ಘಟನೆಯ ನಂತರ ಇದೀಗ ಜೈಪುರದಿಂದ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದೆ. ಇದು ಜೈಪುರದಿಂದ ಬಜಾಜ್ ನಗರ ಪೊಲೀಸ್ ಠಾಣೆ ಸಮೀಪವಿರುವ ಗಾಂಧಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಿದೇಶಿ ತಳಿಯ ನಾಯಿ ಪಿಟ್ ಬುಲ್ 7 ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿದ್ದು, ಇಂದು ಬಾಲಕಿಯ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ.
ತಾಯಿಯೊಂದಿಗೆ ಪಾರ್ಕ್ಗೆ ಹೋಗಿದ್ದ ವೇಳೆ ನಾಯಿ ದಾಳಿ: ವಾಸ್ತವವಾಗಿ, ಗಾಂಧಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ 7 ವರ್ಷದ ಪೂನಂ ಜೂನ್ 16ರ ಸಂಜೆ ಜಲಾನಾ ಡುಂಗ್ರಿಯ ಶಿವ ಕಾಲೋನಿ ಬಳಿಯ ಉದ್ಯಾನವನದಲ್ಲಿ ತನ್ನ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಳು. ಶಿವ್ ಕಾಲೋನಿಯಲ್ಲಿ ವಾಸವಾಗಿರುವ ಪೂನಂ ತನ್ನ ತಾಯಿಯೊಂದಿಗೆ ಪಾರ್ಕ್ನಲ್ಲಿ ಸುತ್ತಾಡುತ್ತಿದ್ದಳು.
ವಾಕಿಂಗ್ ಮಾಡುವಾಗ ಪಾರ್ಕ್ನಲ್ಲಿ ನಾಯಿಗಳಿಗೆ ಅವಕಾಶವಿರಲಿಲ್ಲ. ಆದರೂ ಈ ವೇಳೆ ಪಕ್ಕದಲ್ಲಿ ವಾಸಿಸುತ್ತಿದ್ದ ಯುವಕನೊಬ್ಬ ಪಿಟ್ಬುಲ್ ನಾಯಿಯನ್ನು ಪಾರ್ಕ್ನಲ್ಲಿ ಸುತ್ತಾಡಿಸುತ್ತಿದ್ದ. ಮಗು ತನ್ನ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಈ ಸಮಯದಲ್ಲಿ ಪಿಟ್ಬುಲ್ ನಾಯಿ ಬಾಲಕಿಯ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಲಾಗಿದೆ. ಮೊದಲು ನಾಯಿ ಬಾಲಕಿ ಹಿಂದೆ ಓಡಿದ್ದು ಬಳಿಕ ಮಗು ಕೆಳಗೆ ಬಿದ್ದಾಗ ಅವಳ ಮೊಣಕೈಗೆ ಕಚ್ಚಿ ಮಾಂಸ ಹೊರತೆಗಿದಿದೆ.
ಇದನ್ನೂ ಓದಿ: ಇಂಜೆಕ್ಷನ್ ಕೊಟ್ಟು ನನ್ನ ನಾಯಿನ ಸಾಯಿಸಬೇಕಿತ್ತು: ಭಾವುಕರಾದ ರಕ್ಷಿತ್ ಶೆಟ್ಟಿ
ನಾಯಿಯನ್ನು ವಾಕಿಂಗ್ ಮಾಡಿಸುತ್ತಿದ್ದ ಯುವಕ ಬಹಳ ಕಷ್ಟಪಟ್ಟು ನಾಯಿಯನ್ನು ನಿಯಂತ್ರಿಸಿ ನಂತರ ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ. ಈ ಘಟನೆಯಿಂದ ಬಾಲಕಿಯ ತಾಯಿ ಭಯಭೀತಳಾಗಿದ್ದು, ಆಕೆ ಕಿರುಚಲು ಸಹ ಸಾಧ್ಯವಾಗಿರಲಿಲ್ಲ. ನಂತರ ಕಾಲೋನಿಯ ಜನರು ಅಲ್ಲಿಗೆ ಬಂದು ರಕ್ತಸಿಕ್ತ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಜೈಪುರದ ಎಸ್ಎಂಎಸ್ ಆಸ್ಪತ್ರೆಯಲ್ಲಿ ಬಾಲಕಿಯ ಚಿಕಿತ್ಸೆ ನಡೆಯುತ್ತಿದೆ. ಇಂದು ಆಕೆಗೆ ಪ್ಲಾಸ್ಟಿಕ್ ಸರ್ಜರಿ ಆಗಿದೆ. ಬಾಲಕಿಯ ತೊಡೆಯ ಬಳಿಯಿಂದ ಚರ್ಮವನ್ನು ತೆಗೆದು ಮೊಣಕೈ ಬಳಿ ಜೋಡಿಸಲಾಗಿದೆ. ಮತ್ತೊಂದೆಡೆ ಇಷ್ಟು ದೊಡ್ಡ ಘಟನೆ ನಡೆದರೂ ಗಾಂಧಿನಗರ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿಲ್ಲ. ಪಿಟ್ಬುಲ್ನನ್ನು ಇನ್ನೂ ಅದೇ ಮನೆಯಲ್ಲಿ ಕಟ್ಟಲಾಗಿದೆ. ಬಾಲಕಿಯ ಮನೆಯವರು ಪಿಟ್ಬುಲ್ ಮಾಲೀಕನ ವಿರುದ್ಧ ಗಾಂಧಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಈ ದೂರಿನ ಬಗ್ಗೆ ಪೋಲಿಸರು ಯಾವುದೇ ಕ್ರಮ ಕೈಗೊಂಡಿಲ್ಲ.
ಇದನ್ನೂ ಓದಿ: ಬೆಂಗ್ಳೂರು; ಕುತ್ತಿಗೆಯನ್ನೇ ಸೀಳಿದ ಮಹಿಳೆ ಜತೆ ವಾಕಿಂಗ್ ಬಂದಿದ್ದ ಪಿಟ್ ಬುಲ್ , ಪ್ರಾಣ ಹೋಯ್ತು!
ಜೈಪುರ ನಗರದಲ್ಲಿ ಕೇವಲ ಎರಡು ತಿಂಗಳ ಅವಧಿಯಲ್ಲಿ ವಿದೇಶಿ ತಳಿಯ ನಾಯಿಗಳ ದಾಳಿ ಪ್ರಕರಣಗಳಲ್ಲಿ 10ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿರುವುದು ಗಮನಾರ್ಹ. ಇವರಲ್ಲಿ ಕೆಲವರು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾರೆ. ಈ 10 ಜನರಲ್ಲಿ 6 ಜನ ಮಕ್ಕಳಾಗಿರುವುದು ಆತಂಕ್ಕೆ ಎಡೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ