
ಮಡಿಕೇರಿ(ಫೆ.20): ತಂದೆಯೇ ಮಗನನ್ನು ಗುಂಡಿಟ್ಟು ಕೊಂದ ಘಟನೆ ಮಡಿಕೇರಿ ಸಮೀಪದ ಕಟ್ಟೆಮಾಡು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಮಡಿಕೇರಿ ಸಮೀಪದ ಮರುಗೋಡು ಗ್ರಾ.ಪಂ. ವ್ಯಾಪ್ತಿಯ ಕಟ್ಟೆಮಾಡುವಿನ ನಿವಾಸಿ ನಂದೇಟಿರ ಚಿಟ್ಟಿಯಪ್ಪ (67) ಕೇವಲ 2000 ರು. ವಿಚಾರಕ್ಕೆ ಮಗ ನಿರನ್ ತಿಮ್ಮಯ್ಯ(28)ನನ್ನು ಗುಂಡಿಕ್ಕಿ ಕೊಂದಿದ್ದಾನೆ.
ಕೊಡಗು: ಕಾಫಿ ತೋಟದ ನೀರಿನ ತೊಟ್ಟಿಗೆ ಬಿದ್ದು ನರಳಿ ಹೆಣ್ಣಾನೆ ಸಾವು
ಕೊಲೆಯಾದ ನಿರನ್ ತಿಮ್ಮಯ್ಯ ಮತ್ತು ಮತ್ತೋರ್ವ ಪುತ್ರ ಪ್ರತೀ ತಿಂಗಳು ತಂದೆ ತಾಯಿಗೆ 2000 ರು. ನೀಡುವುದಾಗಿ ಅವರಲ್ಲೇ ಒಪ್ಪಂದವಾಗಿತ್ತು. ಅದರಂತೆ ನಿರನ್ ಕಳೆದ ಜನವರಿಯಲ್ಲಿ 2000 ರು. ನೀಡಿರಲಿಲ್ಲ. ಇದೇ ವಿಚಾರವಾಗಿ ತಂದೆ ಮಗನ ನಡುವೆ ಕಲಹ ಏರ್ಪಟ್ಟಿದ್ದು, ತಂದೆ ಚಿಟ್ಟಿಯಪ್ಪ ತನ್ನ ಬಳಿಯಿದ್ದ ಸಿಂಗಲ್ ಬ್ಯಾರಲ್ 12 ಬೋರ್ ಗನ್ನಿಂದ ಗುಂಡಿಕ್ಕಿದ್ದಾನೆ. ಗುಂಡೇಟಿನಿಂದ ನಿರನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ