ಮದುವೆಗೆ ಕರೆದುಕೊಂಡು ಹೋಗಿ ಯುವಕನ ಮರ್ಮಾಂಗವನ್ನೇ ಕತ್ತರಿಸದರು!

Published : Apr 11, 2021, 08:50 PM ISTUpdated : Apr 11, 2021, 08:52 PM IST
ಮದುವೆಗೆ ಕರೆದುಕೊಂಡು ಹೋಗಿ ಯುವಕನ ಮರ್ಮಾಂಗವನ್ನೇ ಕತ್ತರಿಸದರು!

ಸಾರಾಂಶ

ತೃತೀಯ ಲಿಂಗಿಗಳು ಮಾಡಿದ ಕೆಲಸ/ ಮದುವೆಗೆ ಕರೆದುಕೊಂಡು ಹೋದ ಯುವಕನ ಮರ್ಮಾಂಗ ಕತ್ತರಿಸಿದರು/ ಉತ್ತರ ಪ್ರದೇಶದಿಂದ ಘಟನೆ ವರದಿ/ ಇಬ್ಬರು ತೃತೀಯ ಲಿಂಗಿಗಳ ಬಂಧನ

ನವದೆಹಲಿ(ಏ. 11)  ಇಬ್ಬರು ತೃತೀಯಲಿಂಗಿಗಳು  24 ವರ್ಷದ ಯುವಕನ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ್ದಾರೆ.  ಉತ್ತರ ಪ್ರದೇಶದಿಂದ ಘಟನೆ ವರದಿಯಾಗಿದೆ. 

ತೃತೀಯಲಿಂಗಿಗಳ ಜತೆ ಯುವಕ ಮದುವೆ ಸಮಾರಂಭವೊಂದಕ್ಕೆ ನೃತ್ಯ ಮಾಡಲು ತೆರಳಿದ್ದ.  ಸಂತ್ರಸ್ತನ ಸಹೋದರಿ  ದೆಹಲಿ ಗೇಟ್ ಪೊಲೀಸರಿಗೆ ದೂರು ನೀಡಿದ್ದಾರೆ.  ದೂರಿನ ಆಧಾರದಲ್ಲಿ ಗುಡ್ಡಿ ಮತ್ತು ರಜ್ಜಿ ಎಂಬುವರನ್ನು ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 326 ರ ಅಡಿ ದೂರು ದಾಖಲಾಗಿದೆ.

ಬಾರ್ ಗಲಾಟೆಯಲ್ಲಿ ಮರ್ಮಾಂಗ ಕಳೆದುಕೊಂಡ ಯುವಕ

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅನೇಕರನ್ನು ತನಿಖೆಗೆ ಒಳಪಡಿಸಿದ್ದಾರೆ. ಯುವಕ ಘಟನೆಯನ್ನು ಯಾವ ಕಾರಣಕ್ಕೆ ಮುಚ್ಚಿಟ್ಟಿದ್ದ ಎನ್ನುವುದರ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ. 

ಏಪ್ರಿಲ್  ಏಳರಂದು ಮದುವೆಗೆ ತೆರಳಿದ್ದ.  ಮದುವೆಗೆ  ವ್ಯಕ್ತಿ ಗಾಯಗೊಂಡಿದ್ದ  ಮರುದಿನ ನಡೆದ ವಿಚಾರವನ್ನು ತಿಳಿಸಿದ್ದಾನೆ.    ಗಂಡ ತನಗೆ ಮೋಸ  ಮೋಸ ಮಾಡುತ್ತಿದ್ದಾನೆ ಎಂದು ಪತ್ನಿಯೊಬ್ಬಳು ಗಂಡನ ಮರ್ಮಾಂಗ ಕತ್ತಿಸಿದ್ದ ಘಟನೆ ಮುಂಬೈನಿಂದ ವರದಿಯಾಗಿತ್ತು. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು