Mysuru: ಮಕ್ಕಳಿಲ್ಲವೆಂಬ ಕೊರಗು, ಪತ್ನಿ ತವರು ಸೇರಿಕೊಂಡ್ರೆ, ಪತಿ ಆತ್ಮಹತ್ಯೆ!

Published : Feb 17, 2023, 10:24 PM IST
Mysuru: ಮಕ್ಕಳಿಲ್ಲವೆಂಬ ಕೊರಗು,  ಪತ್ನಿ ತವರು ಸೇರಿಕೊಂಡ್ರೆ, ಪತಿ ಆತ್ಮಹತ್ಯೆ!

ಸಾರಾಂಶ

ಆ ದಂಪತಿ‌ ಜಂಗಲ್ ರೆಸಾರ್ಟ್ ನಲ್ಲಿ ಪುಟ್ಟದೊಂದು ಕೆಲಸ ಮಾಡಿಕೊಂಡಿದ್ರು. ಮದುವೆಯಾಗಿ 5 ವರ್ಷದಿಂದ ಸಂತೋಷದಿಂದ ಇದ್ದವರಿಗೆ ಒಂದೇ ಒಂದು ಕೊರಗು ಕಾಡುತ್ತಿತ್ತು. ಅದೇ ಕೊರಗಿನಲ್ಲಿ ಪತ್ನಿ ತವರು ಸೇರಿಕೊಂಡ್ರೆ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ವರದಿ : ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣನ್ಯೂಸ್

ಮೈಸೂರು (ಫೆ.17): ಆ ದಂಪತಿ‌ ಜಂಗಲ್ ರೆಸಾರ್ಟ್ ನಲ್ಲಿ ಪುಟ್ಟದೊಂದು ಕೆಲಸ ಮಾಡಿಕೊಂಡಿದ್ರು. ಮದುವೆಯಾಗಿ 5 ವರ್ಷದಿಂದ ಸಂತೋಷದಿಂದ ಇದ್ದವರಿಗೆ ಒಂದೇ ಒಂದು ಕೊರಗು ಕಾಡುತ್ತಿತ್ತು. ಅದೇ ಕೊರಗಿನಲ್ಲಿ ಪತ್ನಿ ತವರು ಸೇರಿಕೊಂಡ್ರೆ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ನಮ್ಮ ಜನ ವಯಸ್ಸಾದ ಮೇಲೂ ಒಂಟಿಯಾಗಿದ್ರೆ ಮದುವೆ ಆಗಿಲ್ವ ಅಂತ ಕೇಳ್ತಾರೆ. ಮದುವೆ ಆದ ಮೇಲೆ ಮಕ್ಕಳು ಯಾವಾಗ ಅಂತಾರೆ. ಎರಡು ವರ್ಷ ಕಳೆದ್ರೂ ಮಕ್ಕಳಾಗದಿದ್ರೆ ಏನೋ ತೊಂದರೆ ಇರಬೇಕು ಅನ್ಕೊತಾರೆ. ನಂತರೂ ಮಕ್ಕಳು ಆಗಲಿಲ್ಲ ಅಂದ್ರೆ ಕೇವಲ ಚುಚ್ಚು ಮಾತನಿಲ್ಲೇ ದಂಪತಿಗಳ ಮನಸ್ಸನ್ನ ಕೆಡಿಸಿ ಬಿಡ್ತಾರೆ. ಅಂತಹದೇ ಸನ್ನಿವೇಶಕ್ಕೆ ಇಲ್ಲೊಂದ ಆತ್ಮಹತ್ಯೆಯಾಗಿದೆ.

 ಮಕ್ಕಳಿಲ್ಲದ ಕೊರಗಿನಿಂದ ಬೇಸತ್ತು ಪತ್ನಿ ಇಲ್ಲದ ವೇಳೆ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರು ಜಿಲ್ಲೆ ಹೆಚ್‌.ಡಿ.ಕೋಟೆ ತಾಲೂಕಿನ ಜಂಗಲ್ ರೆಸಾರ್ಟ್ ನೌಕರ ಧರ್ಮರಾಜು (28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಜಂಗಲ್ ರೆಸಾರ್ಟ್ ನ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Belagavi: ದಾಂಪತ್ಯ ಕಲಹ ದೂರ ಮಾಡ್ತೀನಿ ಅಂತಾ ಬಂದಾಕೆ ಎರಡನೇ ಪತ್ನಿಯಾದಳು!
 
ಮದುವೆಯಾಗಿ  ಐದು ವರ್ಷ ಕಳೆದರೂ ಮಕ್ಕಳಿಲ್ಲದ ಚಿಂತೆಯಲ್ಲಿದ್ದ ಧರ್ಮರಾಜು ದಂಪತಿ. ಅಕ್ಕಪಕ್ಕದ ಮನೆಯವರು, ಸಹೋದ್ಯೋಗಿಗಳು ಇದರ ಬಗ್ಗೆ ಪದೇ ಪದೇ ಕೇಳಿ ಬೇಸರ ತರಿಸಿದ್ದರು. ಇತ್ತೀಚೆಗೆ ಮಕ್ಕಳಾಗಿಲ್ಲ ಅನ್ನುವ ವಿಚಾರದಲ್ಲಿ ಪತಿಪತ್ನಿ ನಡುವೆ ಮಾತಿನ ವಾಗ್ದಾಳಿ ನಡೆದು ಪತ್ನಿ ತವರಿಗೆ ತೆರಳಿದ್ದಳು. ಇದರಿಂದ ತೀರಾ ಬೇಸರಗೊಂಡಿದ್ಧ ಧರ್ಮರಾಜು ಪತ್ನಿ ಇಲ್ಲದ ವೇಳೆ ಕರ್ತವ್ಯಕ್ಕೆ ರಜೆ ಹಾಕಿ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತದೇಹ ಪತ್ತೆ ಪ್ರಕರಣ, ತನಿಖೆಗೂ ಮೊದಲೇ ಭಜರಂಗದಳ ಹೆಸರು ಹೇಳಿದ ಸಿಎಂ ಕ್ಷಮೆಯಾಚನೆಗೆ ಪಟ್ಟು!

ಪ್ರಕರಣ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳಾಗದ ವಿಚಾರಕ್ಕೆ ಆತ್ಮಹತ್ಯೆ ಆಗಿರೋದು ಮಾತ್ರ ದುರಂತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು