SHOCKING NEWS:ಕೇರಳದಿಂದ ತಂದು ಗುಂಡ್ಲುಪೇಟೆಯಲ್ಲಿ ಕೊಳೆತ ಗೋ ಮಾಂಸ ಮಾರಾಟ! ಜಾಣ ಕುರುಡಾದ ಪೊಲೀಸ್ ಇಲಾಖೆ

Published : Oct 22, 2024, 05:01 PM ISTUpdated : Oct 22, 2024, 05:13 PM IST
SHOCKING NEWS:ಕೇರಳದಿಂದ ತಂದು ಗುಂಡ್ಲುಪೇಟೆಯಲ್ಲಿ ಕೊಳೆತ ಗೋ ಮಾಂಸ ಮಾರಾಟ! ಜಾಣ ಕುರುಡಾದ ಪೊಲೀಸ್ ಇಲಾಖೆ

ಸಾರಾಂಶ

ಕೇರಳದಿಂದ ಮಾಂಸ ತ್ಯಾಜ್ಯ ತಂದು ಕರ್ನಾಟಕದ ಗಡಿಯಲ್ಲಿ ಸುರಿದಿದ್ದು ಆಯ್ತು, ಇದೀಗ ಸತ್ತ ಗೋವುಗಳನ್ನು ತಂದು ಅದರ ಮಾಂಸವನ್ನು ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ  ಮಾರಾಟ ಮಾಡುತ್ತಿರುವ ಆಘಾತಕಾರಿ  ಘಟನೆ ಬೆಳಕಿಗೆ ಬಂದಿದೆ.

ಚಾಮರಾಜನಗರ ಅ(.22): ಕೇರಳದಿಂದ ಮಾಂಸ ತ್ಯಾಜ್ಯ ತಂದು ಕರ್ನಾಟಕದ ಗಡಿಯಲ್ಲಿ ಸುರಿದಿದ್ದು ಆಯ್ತು, ಇದೀಗ ಸತ್ತ ಗೋವುಗಳನ್ನು ತಂದು ಅದರ ಮಾಂಸವನ್ನು ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ  ಮಾರಾಟ ಮಾಡುತ್ತಿರುವ ಆಘಾತಕಾರಿ  ಘಟನೆ ಬೆಳಕಿಗೆ ಬಂದಿದೆ.

ದಂಧೆಕೋರರು ಸತ್ತ ಜಾನುವಾರುಗಳನ್ನು ಕೇರಳದಿಂದ ಕಂಟೈನರ್‌ಗಳಲ್ಲಿ ಸಾಗಿಸುತ್ತಿದ್ದರೂ ತಪಾಸಣೆ ನಡೆಸದೆ ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ. ಪೊಲೀಸರು ಗಡಿಯಲ್ಲಿ ತಪಾಸಣೆ ನಡೆಸದೆ ನಿರ್ಲಕ್ಷ್ಯ ಮಾಡಿರುವುದರಿಂದ ಅಕ್ರಮಗಳಿಗೆ ರಹದಾರಿಯಾಗಿದೆ. ವಾಸ್ತವವಾಗಿ ಇದೆಲ್ಲ ಪೊಲೀಸರ ಮುಗಿನಡಿಯೇ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಚಾಮರಾಜನಗರದಲ್ಲಿ ಪೊಲೀಸರ ಮನೆಗೇ ಇಲ್ಲ ರಕ್ಷಣೆ: ಪೇದೆ ಮನೆಗೆ ಕನ್ನ ಹಾಕಿ ಚಿನ್ನಾಭರಣ ಕದ್ದ ಕಳ್ಳರು!

 ಕೇರಳದಿಂದ ಸತ್ತ ಜಾನುವಾರುಗಳನ್ನು ಕಂಟೈನರ್ ಮೂಲಕ ಚಾಮರಾಜನಗರ, ಗುಂಡ್ಲುಪೇಟೆಗೆ ಸಾಗಿಸುವ ದಂಧೆಕೋರರು ಬಳಿಕ ಸತ್ತ ಗೋವುಗಳ ಮಾಂಸ, ಮೂಳೆ, ಚರ್ಮ ಬೇರ್ಪಡಿಸಿ ಒಣಗಿಸಿ ಸ್ಥಳೀಯರಿಗೆ 150 ರೂಪಾಯಿಗೆ ಕೆಜಿಯಂತೆ ಮಾಂಸ ಮಾರಾಟ ಮಾಡಲಾಗುತ್ತಿದೆ. ಜಾನುವಾರುಗಳ ಕೊಂಬು ಹಾಗೂ ಮೂಳೆ ಪುಡಿ ಮಾಡಿ ಪುನಃ ಕೇರಳಕ್ಕೆ ರವಾನಿಸುತ್ತಿದೆ ಎಂಬ ಮಾಹಿತಿ ಬೆಚ್ಚಿಬಿಳಿಸಿದೆ. ಇನ್ನು ಆಘಾತಕಾರಿ ವಿಚಾರವೆಂದರೆ ಇಷ್ಟೆಲ್ಲ ನಡೆಯುತ್ತಿರುವುದು ಪೊಲೀಸರಿಗೂ ತಿಳಿದಿದೆ. ಅವರಿಗೆ ಮಾಮೂಲು ಕೊಟ್ಟೇ ದಂಧೆಕೋರರು ಮಾರಾಟ ಮಾಡುತ್ತಿದ್ದಾರೆ. ಪೊಲೀಸರಷ್ಟೆ ಅಲ್ಲ, ಪುರಸಭಾ ಅಧಿಕಾರಿಗಳಿಗೂ, ಜಮೀನು ಮಾಲೀಕನಿಗೂ ದಂಧೆಕೋರರು ಮಾಮೂಲು ನೀಡುತ್ತಿರುವ ಆರೋಪವೂ ಕೇಳಿಬಂದಿದೆ.

Chamarajanagar: 6 ವರ್ಷಗಳ ಹಿಂದೆ ನಿರ್ಮಾಣವಾದ್ರು ಇನ್ನು ಉದ್ಘಾಟನೆಯಾಗದೆ ತುಕ್ಕು ಹಿಡಿಯುತ್ತಿದೆ ವಾಟರ್ ಪ್ಲಾಂಟ್

 ಈ ಬಗ್ಗೆ ಮಾಹಿತಿ ಅರಿತ ಸ್ಥಳೀಯ ಯುವಕರು ಸ್ಥಳಕ್ಕೆ ಹೋದಾಗ ಕಂಟೈನರ್ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ದಂಧೆ ಬಹಳ ದಿನಗಳಿಂದಲೂ ನಡೆಯುತ್ತಿದೆ. ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕದ ಪಕ್ಕದ ಜಮೀನಿನಲ್ಲಿ ಈ ದಂಧೆ ನಡೆಯುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!