ವಾಮಾಚಾರ ಮಾಡುತ್ತಿದ್ದ ದಂಪತಿ ಸಜೀವ ದಹನ, 17 ಮಂದಿಗೆ ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್‌!

Published : Nov 17, 2023, 04:27 PM IST
ವಾಮಾಚಾರ ಮಾಡುತ್ತಿದ್ದ ದಂಪತಿ ಸಜೀವ ದಹನ, 17 ಮಂದಿಗೆ ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್‌!

ಸಾರಾಂಶ

ಒಡಿಶಾದಲ್ಲಿ ವಾಮಾಚಾರದ ಕಾರಣಕ್ಕೆ ದಂಪತಿಗಳನ್ನು ಸಜೀವವಾಗಿ ದಹನ ಮಾಡಿದ್ದ ಪ್ರಕರಣದಲ್ಲಿ ಜಿಲ್ಲಾ ಕೋರ್ಟ್‌ 17 ಮಂದಿಗೆ ಜೀವಾವಧಿ ಶಿಕ್ಷೆ ನೀಡಿದೆ. ಮೂರು ವರ್ಷದ ಹಿಂದೆ ಈ ಪ್ರಕರಣ ನಡೆದಿತ್ತು.  

ಭುವನೇಶ್ವರ (ನ.17): ಒಡಿಶಾದ ಜಾಜ್‌ಪುರ ಜಿಲ್ಲೆಯ ನ್ಯಾಯಾಲಯವು ಶುಕ್ರವಾರ 17 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮೂರು ವರ್ಷಗಳ ಹಿಂದೆ, ವಾಮಾಚಾರದ ಶಂಕೆಯಲ್ಲಿ ದಂಪತಿಯನ್ನು ಜೀವಂತ ಸುಟ್ಟುಹಾಕಿದ ಆರೋಪವನ್ನು ಇವರ ಮೇಲೆ ಮಾಡಲಾಗಿತ್ತು. ನ್ಯಾಯಾಲಯವು ತಪ್ಪಿತಸ್ಥರಿಗೆ ತಲಾ 10,000 ರೂಪಾಯಿ ದಂಡವನ್ನೂ ವಿಧಿಸಿದೆ. 2020ರ ಜುಲೈ 7 ರ ರಾತ್ರಿ, ಹಲವಾರು ಗ್ರಾಮಸ್ಥರು ಒಡಿಶಾದ ಕಳಿಂಗ ನಗರದ ನಿಮಾಪಾಲಿ ಗ್ರಾಮದಲ್ಲಿ ದಂಪತಿಗಳ ಮನೆಗೆ ಪ್ರವೇಶಿಸಿದರು. ದಂಪತಿಯನ್ನು ಶೈಲಾ ಬಲ್ಮುಜ್ ಮತ್ತು ಸಾಂಬ್ರಿ ಬಲ್ಮುಜ್ ಎಂದು ಗುರುತಿಸಲಾಗಿದೆ. ಗ್ರಾಮಸ್ಥರು ದಂಪತಿ ಮೇಲೆ ಹಲ್ಲೆ ನಡೆಸಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಇದರಲ್ಲಿ ಪತಿ-ಪತ್ನಿ ಸಜೀವ ದಹನವಾಗಿದ್ದಾರೆ.

ಜಾಜ್‌ಪುರ ರಸ್ತೆ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹೃಷಿಕೇಶ್ ಆಚಾರ್ಯ ಅವರು ಪ್ರಕರಣದ ವಿಚಾರಣೆ ನಡೆಸಿ 20 ಸಾಕ್ಷಿಗಳು ಮತ್ತು ಹಲವಾರು ಸಾಕ್ಷ್ಯಗಳ ಆಧಾರದ ಮೇಲೆ ಶಿಕ್ಷೆಯನ್ನು ಪ್ರಕಟಿಸಿದರು. ವಿಚಾರಣೆ ವೇಳೆ ನ್ಯಾಯಾಧೀಶರು 20 ಸಾಕ್ಷಿಗಳ ಹೇಳಿಕೆಗಳನ್ನು ಆಲಿಸಿದರು ಮತ್ತು ಅನೇಕ ಸಾಕ್ಷ್ಯಗಳನ್ನು ಈ ವೇಳೆ ಗಮನಿಸಿದ್ದಾರೆ ಎಂದು ಸರ್ಕಾರಿ ವಕೀಲ ರಜತ್ ಕುಮಾರ್ ರಾವುತ್ ಹೇಳಿದರು. ಈ ಹೇಳಿಕೆಗಳು ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಧೀಶರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.

ಒಡಿಶಾದ ಸಂಬಲ್‌ಪುರ ಜಿಲ್ಲೆಯ ದಿಮಿರಿಕುಡ ಗ್ರಾಮದಲ್ಲಿ ವಾಮಾಚಾರ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿದ್ದಾರೆ. ಕಿಸಿಂಡಾ ಪೊಲೀಸರ ಪ್ರಕಾರ, ಸೋಮವಾರ ಈ ಘಟನೆ ನಡೆದಿದ್ದು, 50 ವರ್ಷದ ಶುಕ್ರು ಮಾಝಿ ಮೇಲೆ ಮಾಟಮಂತ್ರದ ಆರೋಪ ಹೊರಿಸಲಾಗಿತ್ತು.

ಸ್ಥಳ ಮಹಜರಿಗೆ ಬಂದಾಗ ಹೈಡ್ರಾಮ..! ಅವನನ್ನ ನಮಗೆ ಒಪ್ಪಿಸಿ ಎಂದ ಉಡುಪಿ ಜನರು..!

ಮಾಜ್ಹಿಯ ಮಾಟಮಂತ್ರದಿಂದಾಗಿ ನಾಲ್ಕು ವರ್ಷಗಳ ಹಿಂದೆ ತನ್ನ ನಾಲ್ಕು ವರ್ಷದ ಮಗನನ್ನು ಕಳೆದುಕೊಂಡಿದ್ದಾಳೆ ಎಂದು ಮಾಝಿಯ ನೆರೆಮನೆಯ ಸಂಜು ಶಂಕಿಸಿದ್ದಾರೆ. ಇದರಿಂದಾಗಿ ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಕೊರಿಯರ್‌ ಡೆಲಿವರಿ ಸ್ಕ್ಯಾಮ್‌: 5 ರೂ ಪಾವತಿ ಮಾಡಿ 80 ಸಾವಿರ ಕಳೆದುಕೊಂಡ ಮಹಿಳೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು