ಹೊಸಪೇಟೆ: ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಬಸ್ ಕಂಡಕ್ಟರ್‌, ಕಾರಣ?

By Suvarna NewsFirst Published Jul 30, 2021, 11:06 AM IST
Highlights

* ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ  ನಡೆದ ಘಟನೆ
* ಲಗೇಜ್‌ ವಿಚಾರವಾಗಿ ಕಾರ್ಗೊ‌ ಗುತ್ತಿಗೆದಾರ ಹಾಗೂ ಕಂಡೆಕ್ಟರ್ ನಡುವೆ ಜಗಳ 
* ಆತ್ಮಹತ್ಯೆ ಯತ್ನಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ 

ವಿಜಯನಗರ(ಜು.30): ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ ಕಂಡಕ್ಟರ್‌ವೊಬ್ಬರು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ.  ವಿಭಾಗದ ಕುತುಬುದ್ದಿನ್ ಎಂಬುವರೇ ಆತ್ಮಹತ್ಯೆಗೆ ಯತ್ನಿಸಿದ ನಿರ್ವಾಹಕರಾಗಿದ್ದಾರೆ. 

ಲಗೇಜ್‌ ವಿಚಾರವಾಗಿ ಕಾರ್ಗೊ‌ ಗುತ್ತಿಗೆದಾರ ಹಾಗೂ ಕಂಡೆಕ್ಟರ್ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಈ ವಿಚಾರವಾಗಿಯೇಕುತುಬುದ್ದೀನ್ ಪಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಮೆಟ್ರೋ ನಿಲ್ದಾಣದಿಂದ ಜಿಗಿದು ಆತ್ಮಹತ್ಯೆಗೆ ಯತ್ನ, ಯುವತಿ ರಕ್ಷಿಸಿದ ಪೊಲೀಸ್ ವಿಡಿಯೋ ವೈರಲ್!

ಸದ್ಯ ಕುತುಬುದ್ದೀನ್ ಅವರನ್ನ ಹೊಸಪೇಟೆ ನಗರದ ಸರ್ಕಾರಿ‌ ಆಸ್ಪತ್ರೆಯಲ್ಲಿ‌ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕುತುಬುದ್ದೀ ಅವರಿಗೆ ಪ್ರಾಣಾಪಾಯವಿಲ್ಲ ಎಂದು ತಿಳಿದು ಬಂದಿದೆ. ಆತ್ಮಹತ್ಯೆ ಯತ್ನಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಹೊಸಪೇಟೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
 

click me!