ಯುವತಿಗಾಗಿ ಬಡಿದಾಡಿಕೊಂಡ ಸ್ನೇಹಿತರು, ಲಿವಿಂಗ್ ರಿಲೇಷನ್‌ಶಿಪ್ ಗಲಾಟೆ ಕೊಲೆಯಲ್ಲಿ ಅಂತ್ಯ!

Published : Oct 11, 2022, 07:05 PM IST
ಯುವತಿಗಾಗಿ ಬಡಿದಾಡಿಕೊಂಡ ಸ್ನೇಹಿತರು, ಲಿವಿಂಗ್ ರಿಲೇಷನ್‌ಶಿಪ್ ಗಲಾಟೆ ಕೊಲೆಯಲ್ಲಿ ಅಂತ್ಯ!

ಸಾರಾಂಶ

ಅವರಿಬ್ಬರು ಸ್ನೇಹಿತರು ದೂರದ ದೇಶದಿಂದ ಸಿಲಿಕಾನ್​ ಸಿಟಿಗೆ ಬಂದು ಬದುಕು ಕಟ್ಟಿಕೊಳ್ಳೋ ಕನಸು ಕಂಡಿದ್ದರು. ಕನಸನ್ನ ನನಸು ಮಾಡಿಕೊಳ್ಳಲು ನಗರಕ್ಕೆ ಬಂದವರು ಇಲ್ಲಿ ಜೀವನ ಕಟ್ಟಿಕೊಳ್ಳುವ ಬದಲು ಯುವತಿಗಾಗಿ ಬಡಿದಾಡಿಕೊಂಡು ಓರ್ವ ಸತ್ತರೆ ಮತ್ತೋರ್ವ ಜೈಲು ಸೇರಿದ್ದಾನೆ.

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್. ಬೆಂಗಳೂರು

ಬೆಂಗಳೂರು (ಅ.11): ಅವರಿಬ್ಬರು ಸ್ನೇಹಿತರು ದೂರದ ದೇಶದಿಂದ ಸಿಲಿಕಾನ್​ ಸಿಟಿಗೆ ಬಂದು ಬದುಕು ಕಟ್ಟಿಕೊಳ್ಳೋ ಕನಸು ಕಂಡಿದ್ದರು. ಕನಸನ್ನ ನನಸು ಮಾಡಿಕೊಳ್ಳಲು ನಗರಕ್ಕೆ ಬಂದವರು ಇಲ್ಲಿ ಜೀವನ ಕಟ್ಟಿಕೊಳ್ಳುವ ಬದಲು ಯುವತಿಗಾಗಿ ಬಡಿದಾಡಿಕೊಂಡು ಓರ್ವ ಯಮಲೋಕ ಸೇರಿದ್ರೆ ಮರ್ತೋರ್ವ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ತಮ್ಮದೇ ಉದ್ಯಮ ಆರಂಭಿಸಿ ಜೀವನದಲ್ಲಿ ಒಂದೊಳ್ಳೆ ಮಟ್ಟಕ್ಕೆ ಬೆಳೆಯುವ ಕನಸು ಕಂಡಿದ್ದ ಆ ಇಬ್ಬರು ವಿದೇಶಿ ಸ್ನೇಹಿತರು ಬೆಂಗಳೂರಿಗೆ ಬಂದಿದ್ದರು. ಈ ಫೋಟೋದಲ್ಲಿರುವ ಸೊಲೊಮನ್​ ಹಾಗೂ ಒಬೆರ ವಿಕ್ಟರ್​ ಆಫ್ರಿಕಾದಿಂದ ಇಲ್ಲಿಗೆ ಬ್ಯುಸಿನೆಸ್​ ಮಾಡಲು ಬಂದಿದ್ದರು. ಮೊದಲು ಒಟ್ಟಿಗೆ ಇದ್ದವರಿಗೆ ಭಾರತೀಯ​ ಯುವತಿಯೊಬ್ಬಳ ಪರಿಚಯವಾಗಿತ್ತು. ಈ ಪರಿಚಯ ನಂತರ ವಿಕ್ಟರ್​ ಜತೆ ಪ್ರೀತಿಯಾಗಿ ಬದಲಾಗಿತ್ತು. ಈ ಕಾರಣದಿಂದಲೇ ಕಳೆದ 3 ವರ್ಷಗಳಿಂದ ವಿಕ್ಟರ್​ ಹಾಗೂ ಆ ಯುವತಿ ಲಿವಿಂಗ್​ ರಿಲೇಷನ್​ನಲ್ಲಿದ್ದರು. ಅಮೃತ್ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಾಸರಹಳ್ಳಿಯ ಮುನಿಕೆಂಪಣ್ಣ ಲೇಔಟ್​ನಲ್ಲಿ ಬಾಡಿಗೆ ಮನೆಯಲ್ಲಿ  ವಾಸವಿದ್ದ ವಿಕ್ಟರ್​ ಹಾಗೂ ಯುವತಿಯನ್ನ ನೋಡಲು ಸ್ನೇಹಿತ ಸೊಲೊಮನ್​ ಆಗಾಗ ಬರುತ್ತಿದ್ದ. 

ವಿಕ್ಟರ್​ ಜತೆ ಲಿವಿಂಗ್​ ರಿಲೇಶನ್​ ಶಿಪ್​ಗೆ ಬರುವ ಮೊಲದು ಸೊಲೊಮನ್​ ಹಾಗೂ ಯುವತಿ ತುಂಬಾ ಕ್ಲೋಸ್​ ಆಗಿದ್ದರಂತೆ. ಈ ಕಾರಣದಿಂದಲೇ ಈ ಮೂವರ ನಡುವೆ ಆಗಾಗ ಜಗಳ ಸಹ ಆಗುತ್ತಿತ್ತಂತೆ. ಇದರಿಂದಲೇ ಈ ಯುವತಿ ಕೊನೆಗೆ ಇಬ್ಬರಿಂದಲೂ ದೂರುವಾಗಿದ್ಲು. ನಂತರ ಮತ್ತೆ ವಿಕ್ಟರ್​ ಜತೆ ವಾಸ ಮಾಡುತ್ತಿದ್ದಳು.

Bengaluru: ತಡರಾತ್ರಿ ಭೀಕರ ಅಪಘಾತ; ನಿವೃತ್ತ ಯೋಧ ಸ್ಥಳದಲ್ಲೇ ಸಾವು

ಮೊನ್ನೆ ಸಂಜೆ ಯುವತಿ ವಿಕ್ಟರ್​ ಇದ್ದ ಮನೆಗೆ ಹೋಗಿದ್ದಳು. ಈ ವಿಚಾರ ಸೊಲೊಮನ್​ ಸಹ ಅಲ್ಲಿಗೆ ಹೋಗಿದ್ದಾನೆ. ಇಬ್ಬರು ಒಟ್ಟಿಗೆ ಇರುವುದುನ್ನು ಕಂಡ ಸೊಲೊಮನ್​ ಗಲಾಟೆ ಮಾಡಿದ್ದಾನೆ. ಈ ಜಗಳದಲ್ಲಿ ವಿಕ್ಟರ್​ ತನ್ನ ಸ್ನೇಹಿತ ಸೊಲೂಮನ್​ಗೆ ಹಲ್ಲೆ ಮಾಡಿ ಬಳಿಕ ಚಾಕು  ಹೊಟ್ಟೆ,  ಕತ್ತಿಗೆ ಚುಚ್ಚಿ ಕೊಲೆ ಮಾಡಿದ್ದಾನೆ.

ಹಬ್ಬದಂದು ಮುಸ್ಲಿಂ ಯುವಕರ ಪುಂಡಾಟ, ಮಾರಕಾಸ್ತ್ರ ಹಿಡಿದು ಹಿಂದೂ ವಿರೋಧಿ ಭಾಷಣದ ತುಣುಕಿಗೆ ಡಾನ್ಸ್!

ಕೊಲೆ ಮಾಡಿದ ಬಳಿಕ ಆರೋಪಿ ವಿಕ್ಟರ್ ತನ್ನ ಸ್ನೇಹಿತನ ಮನಗೆ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಅಮೃತ್ ಹಳ್ಳಿ ಪೊಲೀಸರು ಒಬೆರ ವಿಕ್ಟರ್​ನನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.  ವಿಚಾರಣೆ ವೇಳೆ ಆರೋಪಿ ಯುವತಿ ಕುರಿತಾದ ವಿಚಾರಿ ಬಾಯಿ ಬಿಟ್ಟಿದ್ದಾನೆ. ಒಟ್ನಲ್ಲಿ ಇಬ್ಬರು ಸ್ನೇಹಿತರು ಒಟ್ಟಿಗೆ ವಿದೇಶದಿಂದ ಬಂದು ಈ ರೀತಿ ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ವಿಪರ್ಯಾಸ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?