
ಹೈದರಾಬಾದ್ (ಜ.22): ಕರ್ನಾಟಕದ ಬೀದರ್ಗೆ ಸಾಗಿಸಲಾಗುತ್ತಿದ್ದ 1300 ಕೇಜಿ ಗಾಂಜಾವನ್ನು ಹೈದರಾಬಾದ್ ಸಮೀಪ ವಶ ಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಈ ಗಾಂಜಾ ಮೌಲ್ಯ ಸುಮಾರು 2 ಕೋಟಿ ರುಪಾಯಿ.
‘ಗಾಂಜಾ ಸಾಗಿಸಲಾಗುತ್ತಿದೆ’ ಎಂಬ ಗುಪ್ತಚರ ಮಾಹಿತಿ ಹೈದರಾಬಾದ್ ವಲಯದ ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ ಬಂದಿತ್ತು. ಇದರ ಜಾಡು ಹಿಡಿದು ಹೊರಟ ನಿರ್ದೇಶನಾಲಯದ ಸಿಬ್ಬಂದಿಯು, ಪೆಡ್ಡ ಅಂಬರ್ಪೇಟ್ ಟೋಲ್ ಪ್ಲಾಜಾದಲ್ಲಿ ಲಾರಿಯಲ್ಲಿದ್ದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಅತ್ತ ಅರಶಿನ, ಇತ್ತ ಮೆಣಸು, ಮಧ್ಯದಲ್ಲಿ ಗಾಂಜಾ.....
ಕಳ್ಳಸಾಗಣೆದಾರರು ಎಷ್ಟುಚಾಲಾಕಿಯಾಗಿದ್ದರು ಎಂದರೆ ಭತ್ತದ ಹೊಟ್ಟನ್ನು ಲೋಡ್ ಮಾಡಿ ಅದರೊಳಗೆ ಗಾಂಜಾವನ್ನು ಹೂತಿಟ್ಟಿದ್ದರು. ಇದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ನಿರ್ದೇಶನಾಲಯ ಹೇಳಿದೆ.
ಬೆಂಗಳೂರು: ಐಟಿ ಉದ್ಯೋಗಿಗಳಿಗೆ ಓರಿಸ್ಸಾದಿಂದ ಗಾಂಜಾ ಸಪ್ಲೈ, ಚಮತ್ಕಾರಿ ಸ್ಮಗ್ಲರ್ ಅರೆಸ್ಟ್
ಬಂಧಿತರಲ್ಲಿ ಒಬ್ಬನಾದ ಲಾರಿ ಚಾಲಕನನ್ನು ವಿಚಾರಣೆ ನಡೆಸಿದಾಗ, ‘ತೆಲಂಗಾಣದ ಭದ್ರಾಚಲಂನಲ್ಲಿ ಗಾಂಜಾ ಲೋಡ್ ಮಾಡಲಾಗಿತ್ತು. ಬೀದರ್ಗೆ ಇದನ್ನು ಸಾಗಿಸುತ್ತಿದ್ದೆವು’ ಎಂದು ಹೇಳಿದ್ದಾನೆ. ಈ ಗಾಂಜಾ ಬೆಳೆದವರು ಯಾರು, ಇದರ ರೂವಾರಿ ಯಾರು ಎಂಬ ಬಗ್ಗೆ ತನಿಖೆ ಮುಂದುವರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ