ವಿಜಯ್‌ ಹಜಾರೆ ಸೆಮೀ​ಸ್‌: ಕರ್ನಾ​ಟ​ಕ-ಛತ್ತೀಸ್‌ಗಢ ಫೈಟ್

Published : Oct 22, 2019, 11:42 AM IST
ವಿಜಯ್‌ ಹಜಾರೆ ಸೆಮೀ​ಸ್‌: ಕರ್ನಾ​ಟ​ಕ-ಛತ್ತೀಸ್‌ಗಢ ಫೈಟ್

ಸಾರಾಂಶ

ಮಳೆಯಾಟಕ್ಕೆ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ರದ್ದಾಗಿದೆ. ಗ್ರೂಪ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಛತ್ತೀಸ್‌ಗಢ ಹಾಗೂ ತಮಿಳುನಾಡು ತಂಡಗಳು ಅಂತಿಮ ನಾಲ್ಕರಘಟ್ಟ ಪ್ರವೇಶಿಸಿವೆ. ಇದೀಗ ಫೈನಲ್’ಗಾಗಿ ಕರ್ನಾಟಕ ಹಾಗೂ ಛತ್ತೀಸ್‌ಗಢ ತಂಡಗಳು ಕಾದಾಡಲಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗ​ಳೂ​ರು[ಅ.22]: ಭಾರೀ ಮಳೆ ಕಾರಣ ಸೋಮ​ವಾರ ನಡೆದ ವಿಜಯ್‌ ಹಜಾರೆ ರಾಷ್ಟ್ರೀಯ ಏಕ​ದಿನ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯ​ಗಳು ಫಲಿ​ತಾಂಶ ಕಾಣದೆ ಮುಕ್ತಾ​ಯ​ಗೊಂಡವು. ಮುಂಬೈ ತಂಡ​ವನ್ನು ಹಿಂದಿಕ್ಕಿ ಛತ್ತೀಸ್‌ಗಢ, ಪಂಜಾಬ್‌ ತಂಡ​ವನ್ನು ಹಿಂದಿ​ಕ್ಕಿ ತಮಿ​ಳು​ನಾಡು ಸೆಮಿ​ಫೈ​ನಲ್‌ ಪ್ರವೇ​ಶಿ​ಸಿ​ದವು.

ಬುಧ​ವಾರ ಇಲ್ಲಿನ ಚಿನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ನಡೆ​ಯ​ಲಿ​ರುವ ಮೊದಲ ಸೆಮಿ​ಫೈ​ನಲ್‌ನಲ್ಲಿ ಆತಿ​ಥೇಯ ಕರ್ನಾ​ಟಕ ತಂಡಕ್ಕೆ ಛತ್ತೀಸ್‌ಗಢ ಎದು​ರಾ​ಗ​ಲಿದ್ದು, ಅಂದೇ ಮತ್ತೊಂದು ಮೈದಾ​ನ​ದಲ್ಲಿ ನಡೆ​ಯ​ಲಿ​ರುವ 2ನೇ ಸೆಮಿ​ಫೈ​ನಲ್‌ನಲ್ಲಿ ಗುಜ​ರಾತ್‌ ಹಾಗೂ ತಮಿ​ಳು​ನಾಡು ತಂಡ​ಗಳು ಎದು​ರಾ​ಗ​ಲಿ​ವೆ.

ವಿಜಯ್‌ ಹಜಾರೆ ಟ್ರೋಫಿ 2019: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

ಛತ್ತೀಸ್‌ಗಢ ಹಾಗೂ ಮುಂಬೈ ನಡು​ವಿನ ಪಂದ್ಯ​ದಲ್ಲಿ ಮೊದಲು ಬ್ಯಾಟ್‌ ಮಾಡಿದ ಛತ್ತೀಸ್‌ಗಢ 45.4 ಓವ​ರಲ್ಲಿ 6 ವಿಕೆಟ್‌ಗೆ 190 ರನ್‌ ಗಳಿ​ಸಿತ್ತು. ಮುಂಬೈಗೆ 39 ಓವರ್‌ಗಳಲ್ಲಿ 195 ರನ್‌ ಗುರಿ ನೀಡ​ಲಾ​ಗಿತ್ತು. 11.3 ಓವರಲ್ಲಿ ವಿಕೆಟ್‌ ನಷ್ಟ​ವಿ​ಲ್ಲದೆ 95 ರನ್‌ ಗಳಿ​ಸಿ ಗೆಲು​ವಿ​ನತ್ತ ಮುನ್ನಡೆದಿದ್ದ ಮುಂಬೈಗೆ ಮಳೆ ಆಘಾತ ನೀಡಿತು. 20 ಓವರ್‌ ಆಟ ಪೂರ್ಣ​ಗೊ​ಳ್ಳದೆ ಮಳೆ ನಿಯಮ ಅಳ​ವ​ಡಿಸಿ ವಿಜೇತ ತಂಡ​ವನ್ನು ನಿರ್ಧ​ರಿ​ಸಲು ಸಾಧ್ಯ​ವಿ​ಲ್ಲದ ಕಾರಣ, ಮುಂಬೈಗೆ ಹಿನ್ನಡೆಯಾಯಿತು. ಲೀಗ್‌ ಹಂತ​ದಲ್ಲಿ ‘ಎ’ ಗುಂಪಿ​ನ​ಲ್ಲಿದ್ದ ಮುಂಬೈ 8 ಪಂದ್ಯ​ಗ​ಳಿಂದ 4 ಗೆಲುವು ಸಾಧಿ​ಸಿತ್ತು. ಆದರೆ ಛತ್ತೀ​ಸ್‌ಗಢ 8 ಪಂದ್ಯ​ಗ​ಳಿಂದ 5 ಗೆಲುವು ಸಾಧಿ​ಸಿದ್ದ ಕಾರಣ, ಸೆಮೀಸ್‌ಗೆ ಪ್ರವೇಶ ದೊರೆ​ಯಿತು.

ಹರಿಣಗಳ ಶಿಕಾರಿ; ಸರಣಿ ಕ್ಲೀನ್ ಸ್ವೀಪ್ ಮಾಡಿದ ಟಿಂ ಇಂಡಿಯಾ

ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯ​ದಲ್ಲಿ ತಮಿ​ಳು​ನಾಡು 39 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿ​ಸಿತು. ಪಂಜಾಬ್‌ 12.2 ಓವರ್‌ಗಳಲ್ಲಿ 52 ರನ್‌ಗೆ 2 ವಿಕೆಟ್‌ ಕಳೆ​ದು​ಕೊಂಡಿ​ದ್ದಾಗ ಮಳೆ ಸುರಿದ ಕಾರಣ, ಪಂದ್ಯ ಸ್ಥಗಿತಗೊ​ಳಿ​ಸ​ಲಾ​ಯಿತು. ಲೀಗ್‌ ಹಂತ​ದಲ್ಲಿ ‘ಸಿ’ ಗುಂಪಿ​ನ​ಲ್ಲಿದ್ದ ತಮಿ​ಳು​ನಾಡು, 9 ಪಂದ್ಯ​ಗ​ಳಲ್ಲಿ 9 ಗೆಲುವು ಸಾಧಿ​ಸಿತ್ತು. ‘ಬಿ’ ಗುಂಪಿ​ನ​ಲ್ಲಿದ್ದ ಪಂಜಾಬ್‌ 8 ಪಂದ್ಯ​ಗ​ಳಿಂದ 5 ಗೆಲುವು ಪಡೆ​ದಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚೇರ್ ಮೇಲೆ ಕೂತು ಹೋಮ ಹವನ ಮಾಡಿದ ಶ್ರೇಯಸ್ ಅಯ್ಯರ್, ಸನಾತನಿಯೋ, ಅಲ್ವೋ ಚರ್ಚೆ!
ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?