
ಬೆಂಗಳೂರು[ಅ.22]: ಭಾರೀ ಮಳೆ ಕಾರಣ ಸೋಮವಾರ ನಡೆದ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ಫಲಿತಾಂಶ ಕಾಣದೆ ಮುಕ್ತಾಯಗೊಂಡವು. ಮುಂಬೈ ತಂಡವನ್ನು ಹಿಂದಿಕ್ಕಿ ಛತ್ತೀಸ್ಗಢ, ಪಂಜಾಬ್ ತಂಡವನ್ನು ಹಿಂದಿಕ್ಕಿ ತಮಿಳುನಾಡು ಸೆಮಿಫೈನಲ್ ಪ್ರವೇಶಿಸಿದವು.
ಬುಧವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ನಲ್ಲಿ ಆತಿಥೇಯ ಕರ್ನಾಟಕ ತಂಡಕ್ಕೆ ಛತ್ತೀಸ್ಗಢ ಎದುರಾಗಲಿದ್ದು, ಅಂದೇ ಮತ್ತೊಂದು ಮೈದಾನದಲ್ಲಿ ನಡೆಯಲಿರುವ 2ನೇ ಸೆಮಿಫೈನಲ್ನಲ್ಲಿ ಗುಜರಾತ್ ಹಾಗೂ ತಮಿಳುನಾಡು ತಂಡಗಳು ಎದುರಾಗಲಿವೆ.
ವಿಜಯ್ ಹಜಾರೆ ಟ್ರೋಫಿ 2019: ಸೆಮಿಫೈನಲ್ಗೆ ಲಗ್ಗೆಯಿಟ್ಟ ಕರ್ನಾಟಕ
ಛತ್ತೀಸ್ಗಢ ಹಾಗೂ ಮುಂಬೈ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಛತ್ತೀಸ್ಗಢ 45.4 ಓವರಲ್ಲಿ 6 ವಿಕೆಟ್ಗೆ 190 ರನ್ ಗಳಿಸಿತ್ತು. ಮುಂಬೈಗೆ 39 ಓವರ್ಗಳಲ್ಲಿ 195 ರನ್ ಗುರಿ ನೀಡಲಾಗಿತ್ತು. 11.3 ಓವರಲ್ಲಿ ವಿಕೆಟ್ ನಷ್ಟವಿಲ್ಲದೆ 95 ರನ್ ಗಳಿಸಿ ಗೆಲುವಿನತ್ತ ಮುನ್ನಡೆದಿದ್ದ ಮುಂಬೈಗೆ ಮಳೆ ಆಘಾತ ನೀಡಿತು. 20 ಓವರ್ ಆಟ ಪೂರ್ಣಗೊಳ್ಳದೆ ಮಳೆ ನಿಯಮ ಅಳವಡಿಸಿ ವಿಜೇತ ತಂಡವನ್ನು ನಿರ್ಧರಿಸಲು ಸಾಧ್ಯವಿಲ್ಲದ ಕಾರಣ, ಮುಂಬೈಗೆ ಹಿನ್ನಡೆಯಾಯಿತು. ಲೀಗ್ ಹಂತದಲ್ಲಿ ‘ಎ’ ಗುಂಪಿನಲ್ಲಿದ್ದ ಮುಂಬೈ 8 ಪಂದ್ಯಗಳಿಂದ 4 ಗೆಲುವು ಸಾಧಿಸಿತ್ತು. ಆದರೆ ಛತ್ತೀಸ್ಗಢ 8 ಪಂದ್ಯಗಳಿಂದ 5 ಗೆಲುವು ಸಾಧಿಸಿದ್ದ ಕಾರಣ, ಸೆಮೀಸ್ಗೆ ಪ್ರವೇಶ ದೊರೆಯಿತು.
ಹರಿಣಗಳ ಶಿಕಾರಿ; ಸರಣಿ ಕ್ಲೀನ್ ಸ್ವೀಪ್ ಮಾಡಿದ ಟಿಂ ಇಂಡಿಯಾ
ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು 39 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಪಂಜಾಬ್ 12.2 ಓವರ್ಗಳಲ್ಲಿ 52 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಸುರಿದ ಕಾರಣ, ಪಂದ್ಯ ಸ್ಥಗಿತಗೊಳಿಸಲಾಯಿತು. ಲೀಗ್ ಹಂತದಲ್ಲಿ ‘ಸಿ’ ಗುಂಪಿನಲ್ಲಿದ್ದ ತಮಿಳುನಾಡು, 9 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿತ್ತು. ‘ಬಿ’ ಗುಂಪಿನಲ್ಲಿದ್ದ ಪಂಜಾಬ್ 8 ಪಂದ್ಯಗಳಿಂದ 5 ಗೆಲುವು ಪಡೆದಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.