Syed Mustaq Ali Trophy ವಿದ್ವತ್ ಕಾವೇರಪ್ಪ, ಶ್ರೇಯಸ್ ಗೋಪಾಲ್ ಶೈನಿಂಗ್, ಕರ್ನಾಟಕಕ್ಕೆ ಮತ್ತೊಂದು ಜಯ

Published : Oct 17, 2022, 10:53 AM IST
Syed Mustaq Ali Trophy ವಿದ್ವತ್ ಕಾವೇರಪ್ಪ, ಶ್ರೇಯಸ್ ಗೋಪಾಲ್ ಶೈನಿಂಗ್, ಕರ್ನಾಟಕಕ್ಕೆ ಮತ್ತೊಂದು ಜಯ

ಸಾರಾಂಶ

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂದುವರೆದ ಕರ್ನಾಟಕ ಜಯದ ನಾಗಾಲೋಟ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿದ ಕರ್ನಾಟಕ ಕಳೆದ ಬಾರಿ ರನ್ನರ್ ಅಪ್ ಗೆ ತೃಪ್ತಿಪಟ್ಟುಕೊಂಡಿದ್ದ ರಾಜ್ಯ ತಂಡ

ಮೊಹಾಲಿ(ಅ.17): ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಕಳೆದ ಬಾರಿ ರನ್ನರ್‌-ಅಪ್‌ ಕರ್ನಾಟಕ 3ನೇ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಭಾನುವಾರ ಎಲೈಟ್‌ ‘ಸಿ’ ಗುಂಪಿನ ಪಂದ್ಯದಲ್ಲಿ ರಾಜ್ಯ ತಂಡ, ಜಮ್ಮು-ಕಾಶ್ಮೀರ ವಿರುದ್ಧ 34 ರನ್‌ ಜಯ ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 20 ಓವರಲ್ಲಿ 7 ವಿಕೆಟ್‌ಗೆ 147 ರನ್‌ ಕಲೆಹಾಕಿತು. ವಿಕೆಟ್‌ ನಷ್ಟವಿಲ್ಲದೇ 26 ರನ್‌ ಗಳಿಸಿದ್ದ ಕರ್ನಾಟಕ ಬಳಿಕ 7 ರನ್‌ ಅಂತರದಲ್ಲಿ 4 ವಿಕೆಟ್‌ ಕಳೆದುಕೊಂಡಿತು. ನಾಯಕ ಮಯಾಂಕ್‌(05), ಮನೀಶ್‌ ಪಾಂಡೆ(01) ವಿಫಲರಾದರು. 59 ರನ್‌ಗೆ ಕರ್ನಾಟಕ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಇಂಪ್ಯಾಕ್ಟ್ ಆಟಗಾರನಾಗಿ ಮೈದಾನಕ್ಕಿಳಿದ ಶ್ರೇಯಸ್‌ ಗೋಪಾಲ್‌ 38 ಎಸೆತದಲ್ಲಿ ಔಟಾಗದೆ 48 ಗಳಿಸಿದರು. ಮನೋಜ್‌ ಭಾಂಡ್ಗೆ 23 ಎಸೆತದಲ್ಲಿ 2 ಬೌಂಡರಿ, 4 ಸಿಕ್ಸರ್‌ನೊಂದಿಗೆ 41 ರನ್‌ ಸಿಡಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು. ಶ್ರೇಯಸ್‌ ಹಾಗೂ ಮನೋಜ್‌ ನಡುವೆ 6ನೇ ವಿಕೆಟ್‌ಗೆ 62 ರನ್‌ ಜೊತೆಯಾಟ ಮೂಡಿಬಂತು.

ಲಂಕಾಗೆ ಗಾಯದ ಮೇಲೆ ಬರೆ; ಏಷ್ಯಾಕಪ್ ಹೀರೋ ಮದುಶನಕ T20 World Cup ಟೂರ್ನಿಯಿಂದ ಔಟ್..!

ಯಶಸ್ವಿಯಾಗಿ ಗುರಿ ಬೆನ್ನತ್ತುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಜಮ್ಮು-ಕಾಶ್ಮೀರ 18.2 ಓವರಲ್ಲಿ 113ಕ್ಕೆ ಸರ್ವಪತನ ಕಂಡಿತು. ವಿವ್ರಾಂಶ್‌ ಶರ್ಮಾ(63), ಆಬಿದ್‌ ಮುಷ್ತಾಕ್‌(32) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಮಾರಕ ಬೌಲಿಂಗ್‌ ದಾಳಿ ನಡೆಸಿದ ವಿದ್ವತ್‌ ಕಾವೇರಪ್ಪ 3.2 ಓವರಲ್ಲಿ 11 ರನ್‌ಗೆ 5 ವಿಕೆಟ್‌ ಕಬಳಿಸಿ ರಾಜ್ಯಕ್ಕೆ ದೊಡ್ಡ ಗೆಲುವು ತಂದುಕೊಟ್ಟರು.

ಕರ್ನಾಟಕ ಅ.18ರಂದು ತನ್ನ ಮುಂದಿನ ಪಂದ್ಯವನ್ನು ಅರುಣಾಚಲ ಪ್ರದೇಶ ವಿರುದ್ಧ ಆಡಲಿದ್ದು, ಮತ್ತೊಂದು ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದೆ.

ಸ್ಕೋರ್‌: ಕರ್ನಾಟಕ 20 ಓವರಲ್ಲಿ 147/7(ಶ್ರೇಯಸ್‌ 48*, ಮನೋಜ್‌ 41, ರಿತಿಕ್‌ 2-16), ಜಮ್ಮು-ಕಾಶ್ಮೀರ 18.2 ಓವರಲ್ಲಿ 113/10(ವಿವ್ರಾಂತ್‌ 63, ವಿದ್ವತ್‌ 5-11)

ಡಿಸೆಂಬರ್ 16ಕ್ಕೆ ಬೆಂಗಳೂರಿನಲ್ಲಿ ಐಪಿಎಲ್‌ ಮಿನಿ ಹರಾಜು?

ಬೆಂಗಳೂರು: 2023ರ ಆವೃತ್ತಿಯ ಐಪಿಎಲ್‌ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಡಿ.16ರಂದು ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿವೆ. 2022ರ ಐಪಿಎಲ್‌ಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗೆ ತಲಾ 90 ಕೋಟಿ ರು. ಬಳಸಲು ಅವಕಾಶವಿತ್ತು.

ಹರಾಜಿನ ಬಳಿಕ ಲಖನೌ ಹೊರತುಪಡಿಸಿ ಉಳಿದೆಲ್ಲಾ ತಂಡಗಳು ಸ್ವಲ್ಪ ಪ್ರಮಾಣದಲ್ಲಿ ಹಣ ಉಳಿತಾಯ ಮಾಡಿದ್ದವು. ಈ ಬಾರಿ ಆ ಮೊತ್ತದ ಜೊತೆ ಹೆಚ್ಚುವರಿ 5 ಕೋಟಿ ರುಪಾಯಿ ಬಳಸಿಕೊಂಡು ಆಟಗಾರರನ್ನು ಖರೀದಿಸಬಹುದಾಗಿದೆ. ಟೂರ್ನಿ ಮಾಚ್‌ರ್‍ ಕೊನೆ ವಾರದಲ್ಲಿ ಆರಂಭವಾಗುವ ನಿರೀಕ್ಷೆ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?