ಮುಷ್ತಾಕ್‌ ಅಲಿ ಟ್ರೋಫಿ: ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯದ ತವ​ಕ

Web Desk   | Asianet News
Published : Nov 24, 2019, 11:16 AM IST
ಮುಷ್ತಾಕ್‌ ಅಲಿ ಟ್ರೋಫಿ: ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯದ ತವ​ಕ

ಸಾರಾಂಶ

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಸೂಪರ್ ಲೀಗ್ ಹಂತದಲ್ಲಿ ಹ್ಯಾಟ್ರಿಕ್ ಗೆಲುವಿನತ್ತ ಚಿತ್ತ ನೆಟ್ಟಿದೆ. ಟಾಸ್ ಗೆದ್ದ ಕರ್ನಾಟಕ ಇದೀಗ ಪಂಜಾಬ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಸೂರತ್‌[ನ.24]: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಸೂಪರ್‌ ಲೀಗ್‌ ಹಂತದ ತನ್ನ 3ನೇ ಪಂದ್ಯದಲ್ಲಿ ಕರ್ನಾಟಕ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಆಡಿರುವ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇತ್ತ ಪಂಜಾಬ್‌, ಆಡಿರುವ 1 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಶುಭಾ​ರಂಭ ಮಾಡಿದೆ. 

ಬಲಿಷ್ಠ ತಂಡ​ಗಳ ನಡು​ವಿನ ಪೈಪೋಟಿ ಅಭಿ​ಮಾ​ನಿ​ಗ​ಳಲ್ಲಿ ಕುತೂ​ಹಲ ಮೂಡಿ​ಸಿದ್ದು. ಪಂಜಾಬ್‌ ವಿರುದ್ಧ ಗೆಲುವು ಸಾಧಿ​ಸಿ​ದರೆ, ಕರ್ನಾ​ಟ​ಕದ ಸೆಮಿ​ ಫೈ​ನಲ್‌ ಹಾದಿ ಸುಗ​ಮ​ಗೊ​ಳ್ಳಲಿದೆ. ಇದೀಗ ಪಂಜಾಬ್ 10 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 61 ರನ್’ಗಳನ್ನಷ್ಟೇ ಬಾರಿಸಿದೆ.

ಮುಷ್ತಾಕ್‌ ಅಲಿ: ಜಾರ್ಖಂಡ್‌ ವಿರುದ್ಧ ಕರ್ನಾಟಕ ಜಯಭೇರಿ

ಅಗ್ರ ಬ್ಯಾಟ್ಸ್‌ಮನ್‌ಗಳೇ ಆಧಾರ: ಕರ್ನಾ​ಟಕ ಸೂಪರ್‌ ಲೀಗ್‌ನ 2 ಪಂದ್ಯ​ಗ​ಳಲ್ಲಿ ಗೆದ್ದಿ​ರು​ವುದು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಅಬ್ಬ​ರದ ಆಟದಿಂದಲೇ. ಯುವ ಬ್ಯಾಟ್ಸ್‌ಮನ್‌ ದೇವ​ದತ್‌ ಪಡಿ​ಕ್ಕಲ್‌, ತಮ್ಮ ಅಮೋಘ ಪ್ರದ​ರ್ಶ​ನ​ದಿಂದ ಸುದ್ದಿ​ಯಾ​ಗಿ​ದ್ದಾರೆ. ಭಾರತ ತಂಡದ ಆಟ​ಗಾ​ರ​ರಾದ ಕೆ.ಎಲ್‌.ರಾ​ಹುಲ್‌, ಮನೀಶ್‌ ಪಾಂಡೆ ಜವಾ​ಬ್ದಾ​ರಿ​ಯುತ ಆಟವಾಡಿ​ದ್ದಾರೆ. ಈ ಮೂವರು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ದೊಡ್ಡ ಇನ್ನಿಂಗ್ಸ್‌ ಆಡಿ​ದ​ರಷ್ಟೇ ಕರ್ನಾ​ಟಕಕ್ಕೆ ಗೆಲುವು ಎನ್ನು​ವಂತಾ​ಗಿದೆ. ಕರುಣ್‌ ನಾಯರ್‌ ಲಯ ಕಳೆ​ದು​ಕೊಂಡಿದ್ದು, ಪವನ್‌ ದೇಶ​ಪಾಂಡೆ ಸ್ಥಿರತೆ ಕಾಯ್ದು​ಕೊ​ಳ್ಳಲು ವಿಫ​ಲ​ರಾ​ಗಿ​ದ್ದಾರೆ. ಆಲ್ರೌಂಡರ್‌ ಕೆ.ಗೌ​ತಮ್‌ ಅನು​ಪ​ಸ್ಥಿತಿ ತಂಡ​ವನ್ನು ಕಾಡು​ತ್ತಿದೆ. ಕೆಳ ಮಧ್ಯಮ ಕ್ರಮಾಂಕವನ್ನು
ನೆಚ್ಚಿ​ಕೊ​ಳ್ಳು​ವ ಹಾಗಿಲ್ಲ. ಒಂದೊಮ್ಮೆ ತಂಡ ಬ್ಯಾಟಿಂಗ್‌ ವೈಫಲ್ಯ ಕಂಡರೆ, ಗೆಲ್ಲುವುದು ಕಷ್ಟವಾಗ​ಲಿದೆ.

ಇಶಾಂತ್ ದಾಳಿಗೆ ಬಾಂಗ್ಲಾ ತತ್ತರ, ಇತಿಹಾಸ ರಚಿಸಲು ಭಾರತ ಕಾತರ!

ತಂಡದ ಬೌಲರ್‌ಗಳು ಸಹ ಮೊನಚು ಕಳೆ​ದು​ಕೊಂಡಿ​ದ್ದಾರೆ. ರೋನಿತ್‌ ಮೋರೆ, ವಿ.ಕೌ​ಶಿಕ್‌ ಜಾರ್ಖಂಡ್‌ ವಿರು​ದ್ಧದ ಪಂದ್ಯ​ದಲ್ಲಿ ಸಾಧಾ​ರಣ ಪ್ರದ​ರ್ಶನ ತೋರಿ​ದ್ದರು. ಪ್ರಮುಖ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಸಹ ಲಯದಲ್ಲಿಲ್ಲ. ಲೆಗ್‌ ಸ್ಪಿನ್ನರ್‌ ಪ್ರವೀಣ್‌ ದುಬೆ, ಎಡಗೈ ಸ್ಪಿನ್ನರ್‌ ಜೆ.ಸು​ಚಿತ್‌ ಮೇಲೆ ಹೆಚ್ಚಿನ ನಿರೀಕ್ಷೆ ಇಡ​ಲಾ​ಗಿದೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಂದ್ಯಕ್ಕೂ ಮೊದಲು ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಗೌರವ ನಮನ ಸೂಚಿಸಿದ ಆರ್‌ಸಿಬಿ
IPL 2026: ಮುಂಬೈ ಎದುರಿನ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಒಂದು ಮೇಜರ್ ಚೇಂಜ್; ಪಾಂಡ್ಯ ಪಡೆಯಲ್ಲಿ ಎರಡು ಬದಲಾವಣೆ?