ಟೀಂ ಇಂಡಿಯಾ ಕೋಚ್ ಹುದ್ದೆಗೆ ದಿಢೀರ್ ರಾಜೀನಾಮೆ..! ಮತ್ತೆ ಕೆಕೆಆರ್ ತಂಡಕ್ಕೆ ವಾಪಾಸ್

Published : Jul 28, 2026, 06:33 PM IST
Assistant Coach Ryan ten Doeschate

ಸಾರಾಂಶ

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ಸೋಲಿನ ನಂತರ, ಟೀಂ ಇಂಡಿಯಾದ ಸಹಾಯಕ ಕೋಚ್ ರಿಯಾನ್ ಟ್ಯಾನ್ ಡೊಸ್ಕೆಟ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಗೌತಮ್ ಗಂಭೀರ್ ಅವರ ಆಪ್ತರಾಗಿದ್ದ ಡೊಸ್ಕೆಟ್‌, ಇದೀಗ ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಕೋಚ್ ಆಗಿ ಮತ್ತೆ ಸೇರಿಕೊಂಡಿದ್ದಾರೆ.

ಬೆಂಗಳೂರು: ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಂ ಇಂಡಿಯಾ ದಯನೀಯ ವೈಫಲ್ಯ ಅನುಭವಿಸಿತ್ತು. ಇದರ ಬೆನ್ನಲ್ಲೇ ಭಾರತ ತಂಡದಲ್ಲಿ ಮೇಜರ್ ಸರ್ಜರಿಯಾಗಿದ್ದು, ತಂಡದ ಸಹಾಯಕ ಕೋಚ್ ರಿಯಾನ್ ಟ್ಯಾನ್ ಡೊಸ್ಕೆಟ್‌ ಅವರ ತಲೆದಂಡವಾಗಿದೆ. ಇತ್ತೀಚೆಗಷ್ಟೇ ನಡೆದ ಐರ್ಲೆಂಡ್ ಎದುರಿನ ಎರಡು ಪಂದ್ಯಗಳ ಟಿ20 ಸರಣಿ ಹಾಗೂ ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ವೈಟ್‌ವಾಷ್ ಮುಖಭಂಗ ಅನುಭವಿಸಿತ್ತು. ಇದರ ಬೆನ್ನಲ್ಲೇ ರಿಯಾನ್ ಟ್ಯಾನ್ ಡೊಸ್ಕೆಟ್‌ ತಮ್ಮ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದೀಗ ರಿಯಾನ್ ಟ್ಯಾನ್ ಡೊಸ್ಕೆಟ್‌, ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಕೋಚ್ ಆಗಿ ಸೇರಿಕೊಂಡಿದ್ದಾರೆ.

ನೆದರ್ಲೆಂಡ್ಸ್‌ ತಂಡದ ಮಾಜಿ ನಾಯಕ ರಿಯಾನ್ ಟ್ಯಾನ್ ಡೊಸ್ಕೆಟ್‌, ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಬೆನ್ನಲ್ಲೇ ಭಾರತ ತಂಡದ ಸಹಾಯಕ ಕೋಚ್ ಆಗಿ ನೇಮಕವಾಗಿದ್ದರು. ಗೌತಮ್ ಗಂಭೀರ್ ಪಾಲಿನ ನೆಚ್ಚಿನ ಸಹಾಯಕ ಕೋಚ್ ಆಗಿ ಗುರುತಿಸಿಕೊಂಡಿದ್ದ ರಿಯಾನ್ ಟ್ಯಾನ್ ಡೊಸ್ಕೆಟ್‌, ತಂಡದ ಬ್ಯಾಟಿಂಗ್ ಹಾಗೂ ಫೀಲ್ಡಿಂಡ್ ವಿಭಾಗದಲ್ಲಿ ತಂಡಕ್ಕೆ ಉಪಯುಕ್ತ ಸಲಹೆ ನೀಡುತ್ತಾ ಬಂದಿದ್ದರು.

ಮತ್ತೆ ಕೆಕೆಆರ್ ತೆಕ್ಕೆಗೆ ಜಾರಿದ ರಿಯಾನ್ ಟ್ಯಾನ್ ಡೊಸ್ಕೆಟ್‌:

ಸದ್ಯ ಕೋಲ್ಕತಾ ನೈಟ್‌ ರೈಡರ್ಸ್ ತಂಡದಲ್ಲಿ ಅಭಿಷೇಕ್ ನಾಯರ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೊದಲು ಅಭಿಷೇಕ್ ನಾಯರ್ ಹಾಗೂ ರಿಯಾನ್ ಟ್ಯಾನ್ ಡೊಸ್ಕೆಟ್‌ ಭಾರತ ತಂಡದ ಕೋಚಿಂಗ್ ಸ್ಟಾಫ್‌ನಲ್ಲಿದ್ದರು. ಇದೀಗ ಈ ಇಬ್ಬರು ಕೆಕೆಆರ್ ತಂಡದ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಅಂದಹಾಗೆ ರಿಯಾನ್ ಟ್ಯಾನ್ ಡೊಸ್ಕೆಟ್‌ ಈ ಹಿಂದೆಯೂ ಕೆಕೆಆರ್ ತಂಡದ ಜತೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಆಟಗಾರನಾಗಿ ಕೆಕೆಆರ್ ಪರ(2012 ಹಾಗೂ 2014)ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿದ್ದ ರಿಯಾನ್ ಟ್ಯಾನ್ ಡೊಸ್ಕೆಟ್‌, 2022ರಲ್ಲಿ ಕೆಕೆಆರ್ ತಂಡದ ಫೀಲ್ಡಿಂಗ್ ಕೋಚ್ ಆಗಿ ನೇಮಕವಾಗಿದ್ದರು. ಇದಾದ ಬಳಿಕ 2024ರಲ್ಲಿ ರಿಯಾನ್ ಟ್ಯಾನ್ ಡೊಸ್ಕೆಟ್‌ ಮಾರ್ಗದರ್ಶನದಲ್ಲಿ ಕೆಕೆಆರ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆಗ ಗೌತಮ್ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿದ್ದರು. ಚಂದ್ರಕಾಂತ್ ಪಂಡಿತ್ ಕೆಕೆಆರ್ ತಂಡದ ಹೆಡ್‌ಕೋಚ್ ಆಗಿದ್ದರು.

2024ರಲ್ಲಿ ಭಾರತ ತಂಡದ ಸಹಾಯಕ ಕೋಚ್ ಆಗಿ ನೇಮಕ

ರಿಯಾನ್ ಟ್ಯಾನ್ ಡೊಸ್ಕೆಟ್‌ ಭಾರತ ತಂಡದ ಸಹಾಯಕ ಕೋಚ್ ಆಗಿದ್ದಾಗ ಟೀಂ ಇಂಡಿಯಾ 2025ರ ಏಷ್ಯಾಕಪ್, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2026ರ ಟಿ20 ವಿಶ್ವಕಪ್ ಗೆದ್ದು ಬೀಗಿದೆ. ಆದರೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲು, ತವರಿನಲ್ಲಿ ಕಿವೀಸ್ ಎದುರು ಟೆಸ್ಟ್ ಸರಣಿ ವೈಟ್‌ವಾಷ್ ಅನುಭವಿಸಿದ ಬಳಿಕ ರಿಯಾನ್ ಟ್ಯಾನ್ ಡೊಸ್ಕೆಟ್‌ ಅವರ ಮೇಲೆ ತೂಗುಗತ್ತಿ ನೇತಾಡಲಾರಂಭಿಸಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: ಕ್ಯಾನ್ಸರ್ ಗೆದ್ದ ಕಷ್ಟ, ತಂದೆಯ ಮೌನ ಸಂದೇಶ; ಭಾವನಾತ್ಮಕ ಹೋರಾಟದ ಮೂಲಕ ಟೀಮ್ ಇಂಡಿಯಾ ಬಾಗಿಲು ತಟ್ಟಿದ ಹುಡುಗ!
ನನ್ ಕೈಯಿಂದ ಆಗಲ್ಲಪ್ಪಾ..ಒಂದೇ ವರ್ಷದಲ್ಲಿ ಕೊಹ್ಲಿ ಫಾಲೋ ಮಾಡೋದು ಕೈಬಿಟ್ಟ ಸಂಜು ಸ್ಯಾಮ್ಸನ್