
ರಾಜ್ ಕೋಟ್[ನ.08]: ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್’ಗೆ ಅವಕಾಶ ಹೆಚ್ಚು ನೀಡಿದಷ್ಟು ಅವರಿಂದ ತಪ್ಪುಗಳು ಹೆಚ್ಚಾಗುತ್ತಿವೆ. ಎರಡನೇ ಟಿ20 ಪಂದ್ಯದಲ್ಲೂ ಪಂತ್ ಅಂತಹದ್ದೊಂದು ಪ್ರಮಾದ ಎಸಗಿದ್ದಾರೆ.
ರೋಹಿತ್ ಅಬ್ಬರಕ್ಕೆ ತತ್ತರಿಸಿದ ಬಾಂಗ್ಲಾ; ಭಾರತಕ್ಕೆ 8 ವಿಕೆಟ್ ಭರ್ಜರಿ ಗೆಲುವು!
ಹೌದು, ರಾಜ್ ಕೋಟ್’ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಯುಜುವೇಂದ್ರ ಚಹಲ್ ಎಸೆದ ಆರನೇ ಓವರ್’ನ ಮೂರನೇ ಎಸೆತವನ್ನು ಮುನ್ನುಗ್ಗಿ ಬಾರಿಸಲು ಲಿಟನ್ ದಾಸ್ ಯತ್ನಿಸಿದರು. ಆಗ ಸ್ಟಂಪ್ ಮಾಡಿದರು. ಆದರೆ ಮೂರನೇ ಅಂಪೈರ್ ನಾಟೌಟ್ ನೀಡಿದರು.
ಅಷ್ಟಕ್ಕೂ ಆಗಿದ್ದೇನು..?
ಉತ್ತಮ ಆರಂಭ ಪಡೆದ ಬಾಂಗ್ಲಾದೇಶದ ಮೊದಲ ವಿಕೆಟ್ ಪಡೆದ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು ಕುಣಿದು ಕುಪ್ಪಳಿಸಿದರು. ಆದರೆ ನಿಯಮದ ಪ್ರಕಾರ ವಿಕೆಟ್ ಕೀಪರ್ ಚಂಡನ್ನು ಸ್ಟಂಪ್ಸ್ ಹಿಂದೆ ಹಿಡಿಯಬೇಕು. ಆದರೆ ಪಂತ್ ಸ್ಟಂಪ್ಸ್ ಮುಂದೆ ಚೆಂಡನ್ನು ಹಿಡಿದು ಸ್ಟಂಪ್ಸ್ ಮಾಡಿದ ಕಾರಣ, ಅಂಪೈರ್ ನಾಟೌಟ್ ತೀರ್ಮಾನವಿತ್ತರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಕೊನೆಗೂ ಸೇಡು ತೀರಿಸಿಕೊಂಡ ಪಂತ್:
ಮತ್ತೆ ಚಹಲ್ ಎಸೆದ ಎಂಟನೇ ಓವರ್’ನಲ್ಲಿ ಪಂತ್ ಬಾಂಗ್ಲಾ ಆರಂಭಿಕ ಬ್ಯಾಟ್ಸ್’ಮನ್ ಲಿಟನ್ ದಾನ್ ಅವರನ್ನು ರನೌಟ್ ಮಾಡುವ ಮೂಲಕ ಕೊನೆಗೂ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ 6 ವಿಕೆಟ್ ಕಳೆದುಕೊಂಡು 153 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಭಾರತ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕದ ನೆರವಿನಿಂದ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.