ರಣಜಿ ಟ್ರೋಫಿ: ಪಡಿಕ್ಕಲ್-ಪವನ್ ಫಿಫ್ಟಿ, ಬೃಹತ್ ಮೊತ್ತದತ್ತ ಕರ್ನಾಟಕ

Published : Dec 09, 2019, 06:39 PM IST
ರಣಜಿ ಟ್ರೋಫಿ: ಪಡಿಕ್ಕಲ್-ಪವನ್ ಫಿಫ್ಟಿ, ಬೃಹತ್ ಮೊತ್ತದತ್ತ ಕರ್ನಾಟಕ

ಸಾರಾಂಶ

ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವು ತಮಿಳುನಾಡಿನ ವಿರುದ್ಧ ಬೃಹತ್ ಮೊತ್ತದತ್ತ ದಾಪುಗಾಲು ಹಾಕುತ್ತಿದೆ. ಮೊದಲ ದಿನದಾಟದಂತ್ಯಕ್ಕೆ ಕರ್ನಾಟಕ 6 ವಿಕೆಟ್ ಕಳೆದುಕೊಂಡು 259 ರನ್ ಗಳಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ದಿಂಡಿಗಲ್[ಡಿ.09]: ದೇಸಿ ಕ್ರಿಕೆಟ್’ನಲ್ಲಿ ಭರ್ಜರಿ ಫಾರ್ಮ್’ನಲ್ಲಿರುವ ದೇವದತ್ ಪಡಿಕ್ಕಲ್[78] ಹಾಗೂ ಪವನ್ ದೇಶಪಾಂಡೆ[65] ಆಕರ್ಷಕ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡವು ತಮಿಳುನಾಡು ವಿರುದ್ಧ ಮೊದಲ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 259 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲು ಹಾಕುತ್ತಿದೆ.

ರಣಜಿ ಟ್ರೋಫಿ: ಇಂದಿ​ನಿಂದ ಕರ್ನಾ​ಟ​ಕಕ್ಕೆ ತಮಿ​ಳು​ನಾಡು ಸವಾ​ಲು

ಇಲ್ಲಿನ NCR ಕಾಲೇಜು ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟ್ಸ್’ಮನ್ ದೇಗಾ ನಿಶ್ಚಲ್[4] ನಾಲ್ಕನೇ ಓವರ್’ನಲ್ಲಿ ಬೌಂಡರಿ ಬಾರಿಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. ಆ ಬಳಿಕ ಮಯಾಂಕ್ ಅಗರ್ ವಾಲ್ ಹಾಗೂ ದೇವದತ್ ಪಡಿಕ್ಕಲ್ ಆಕರ್ಷಕ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮವಾಗಿ ಆಡುತ್ತಿದ್ದ ಅಗರ್ ವಾಲ್[43] ಸಿದ್ಧಾರ್ಥ್’ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕರುಣ್ ನಾಯರ್[8] ರನೌಟ್ ಆದಾಗ ಕರ್ನಾಟಕ ಮತ್ತೊಮ್ಮೆ ಆಘಾತಕ್ಕೆ ಒಳಗಾಯಿತು.

ರಾಜ್ಯಕ್ಕೆ ಆಸರೆಯಾದ ಪಡಿಕ್ಕಲ್-ಪವನ್: ಒಂದು ಹಂತದಲ್ಲಿ 88 ರನ್’ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕರ್ನಾಟಕ ತಂಡಕ್ಕೆ ಎಡಗೈ ಬ್ಯಾಟ್ಸ್’ಮನ್’ಗಳಾದ ದೇವದತ್ ಪಡಿಕ್ಕಲ್ ಹಾಗೂ ಪವನ್ ದೇಶಪಾಂಡೆ ಆಸರೆಯಾದರು. ಈ ಜೋಡಿ ಶತಕದ ಜತೆಯಾಟ ನಿಭಾಯಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ತಮಿಳುನಾಡು ಬಲಿಷ್ಠ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿದ ಪಡಿಕ್ಕಲ್ 182 ಎಸೆತಗಳಲ್ಲಿ 7 ಬೌಂಡರಿ ಸಹಿತ 78 ರನ್ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಆಲ್ರೌಂಡರ್ ಪವನ್ ದೇಶಪಾಂಡೆ 142 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 65 ರನ್ ಚಚ್ಚಿದರು. ಪಡಿಕ್ಕಲ್, ಬಾಬಾ ಅಪರಾಜಿತ್’ಗೆ ವಿಕೆಟ್ ಒಪ್ಪಿಸಿದರೆ, ಪವನ್ ಬಲಿ ಪಡೆಯುವಲ್ಲಿ ರವಿಚಂದ್ರನ್ ಅಶ್ವಿನ್ ಯಶಸ್ವಿಯಾದರು.

ರಣಜಿ ಟ್ರೋಫಿ: ಮಳೆಯಲ್ಲ, ಬಿಸಿಲಲ್ಲ ಹಾವಿನಿಂದ ಕೆಲಕಾಲ ಪಂದ್ಯ ರದ್ದು..!

ಇದೀಗ ಮತ್ತೋರ್ವ ಆಲ್ರೌಂಡರ್ ಶ್ರೇಯಸ್ ಗೋಪಾಲ್[35] ಹಾಗೂ ರಣಜಿ ಕ್ರಿಕೆಟ್’ಗೆ ಪದಾರ್ಪಣೆ ಮಾಡಿರುವ  ಡೇವಿಡ್ ಮಥಾಯಸ್[0] ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ತಮಿಳುನಾಡಿನ ಪರ ಮಣಿಮರನ್ ಸಿದ್ಧಾರ್ಥ್ 2 ವಿಕೆಟ್ ಪಡೆದರೆ, ಬಾಬಾ ಅಪರಾಜಿತ್, ರವಿಚಂದ್ರನ್ ಅಶ್ವಿನ್, ಕೃಷ್ಣಮೂರ್ತಿ ವಿಘ್ನೇಶ್ ತಲಾ ಒಂದೊಂದು ವಿಕೆಟ್ ಪಡೆದರು.

ರಣಜಿ ಟೂರ್ನಿಯ ಇತರೆ ಪಂದ್ಯಗಳ ಮೊದಲ ದಿನದಾಟದ ವಿವರ:

* ಅಸ್ಸಾಂ ತಂಡವು ಸರ್ವೀಸಸ್ ತಂಡವು ಕೇವಲ 124 ರನ್’ಗಳಿಗೆ ಆಲೌಟ್ ಆಗಿದ್ದು, ದಿನದಾಟದಂತ್ಯಕ್ಕೆ ಅಸ್ಸಾಂ 3 ವಿಕೆಟ್ ಕಳೆದುಕೊಂಡು 81 ರನ್ ಬಾರಿಸಿದೆ. 

* ನಾಗಾಲ್ಯಾಂಡ್ ವಿರುದ್ಧ ಮೇಘಾಲಯ ತಂಡವು 9 ವಿಕೆಟ್ ಕಳೆದುಕೊಂಡು 268 ರನ್ ಗಳಿಸಿದೆ.

* ಮಣಿಪುರ ವಿರುದ್ಧ ಮಿಝೋರಾಂ ತಂಡವು ಕೇವಲ 65 ರನ್’ಗಳಿಗೆ ಆಲೌಟ್ ಆಗಿದೆ. ಮಣಿಪುರ ಬೌಲರ್ ರೆಕ್ಸ್ ಸಿಂಗ್ ಕೇವಲ 22 ರನ್ ನೀಡಿ 8 ವಿಕೆಟ್ ಕಬಳಿಸಿದರು. ಇನ್ನು ಮಣಿಪುರ 7 ವಿಕೆಟ್ ಕಳೆದುಕೊಂಡು 255 ರನ್ ಬಾರಿಸಿದೆ.

* ಜಾರ್ಖಂಡ ವಿರುದ್ಧ ತ್ರಿಪುರ ತಂಡವು 8 ವಿಕೆಟ್ ಕಳೆದುಕೊಂಡು 263 ರನ್ ಬಾರಿಸಿದೆ.

* ಗುಜರಾತ್ ವಿರುದ್ಧ ಹೈದರಾಬಾದ್ ತಂಡವು 233 ರನ್ ಬಾರಿಸಿ ಆಲೌಟ್ ಆಗಿದೆ.

* ಡೆಲ್ಲಿ ವಿರುದ್ಧ ಕೇರಳ ತಂಡವು 3 ವಿಕೆಟ್ ಕಳೆದುಕೊಂಡು 276 ರನ್ ಬಾರಿಸಿದ್ದು, ರಾಬಿನ್ ಉತ್ತಪ್ಪ 102 ರನ್ ಬಾರಿಸಿದರೆ, ಪೂನಮ್ ರಾಹುಲ್ ಕೇವಲ 3 ರನ್’ಗಳಿಂದ ಶತಕ ವಂಚಿತರಾದರು.

* ಮುಂಬೈ ತಂಡವು ಬರೋಡ ವಿರುದ್ಧ 8 ವಿಕೆಟ್ ಕಳೆದುಕೊಂಡು 362 ರನ್ ಬಾರಿಸಿದೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ