ರಣಜಿ ಟ್ರೋಫಿ: ಸ್ಮರಣ್‌ ಶತಕ, ಸೋಲಿಂದ ರಾಜ್ಯ ಪಾರು!

Published : Feb 03, 2025, 08:25 AM IST
ರಣಜಿ ಟ್ರೋಫಿ: ಸ್ಮರಣ್‌ ಶತಕ, ಸೋಲಿಂದ ರಾಜ್ಯ ಪಾರು!

ಸಾರಾಂಶ

ಸ್ಮರಣ್‌ (133) ಶತಕದ ನೆರವಿನಿಂದ ಹರ್ಯಾಣ ವಿರುದ್ಧ ಕರ್ನಾಟಕ ರಣಜಿ ಪಂದ್ಯ ಡ್ರಾ ಸಾಧಿಸಿತು. 20 ಅಂಕಗಳೊಂದಿಗೆ ‘ಸಿ’ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆದು, ಕ್ವಾರ್ಟರ್‌ಫೈನಲ್‌ ತಲುಪಲು ವಿಫಲವಾಯಿತು. ಹಾರ್ದಿಕ್ ರಾಜ್ (40) ಜೊತೆಗಿನ 98 ರನ್ ಜೊತೆಯಾಟ ತಂಡಕ್ಕೆ ಆಸರೆಯಾಯಿತು. ಈ ಋತುವಿನಲ್ಲಿ ಸ್ಮರಣ್ 516 ರನ್ ಗಳಿಸಿ ರಾಜ್ಯದ ಪರ ಅಗ್ರ ಸ್ಕೋರರ್ ಆದರು.

ಬೆಂಗಳೂರು: ತಮ್ಮಲ್ಲಿರುವ ಅಗಾಧ ಪ್ರತಿಭೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ ರವಿಚಂದ್ರನ್‌ ಸ್ಮರಣ್‌, ಆಕರ್ಷಕ ಶತಕ ಬಾರಿಸುವ ಮೂಲಕ ಹರ್ಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಡ್ರಾ ಸಾಧಿಸಲು ನೆರವಾದರು. ಪಂದ್ಯದ 2ನೇ ದಿನವೇ ಕ್ವಾರ್ಟರ್‌ ಫೈನಲ್‌ ರೇಸ್‌ನಿಂದ ಹೊರಬಿದ್ದಿದ್ದ ಕರ್ನಾಟಕ, ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ 2024-25ರ ಸಾಲಿನ ರಣಜಿ ಟ್ರೋಫಿಯನ್ನು ಅಜೇಯವಾಗಿ ಮುಕ್ತಾಯಗೊಳಿಸಿತು.

ಗುಂಪು ಹಂತದಲ್ಲಿ ಆಡಿದ 7 ಪಂದ್ಯಗಳಲ್ಲಿ 2 ಗೆಲುವು, 5 ಡ್ರಾದೊಂದಿಗೆ 20 ಅಂಕ ಪಡೆದ ಕರ್ನಾಟಕ, ‘ಸಿ’ ಗುಂಪಿನಲ್ಲಿ 4ನೇ ಸ್ಥಾನ ಪಡೆಯಿತು. ಹರ್ಯಾಣ ಹಾಗೂ ಕೇರಳ ತಂಡಗಳು ಕ್ವಾರ್ಟರ್‌ಗೇರಿದವು.

3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 108 ರನ್‌ ಗಳಿಸಿದ್ದ ಕರ್ನಾಟಕ, ಇನ್ನೂ 38 ರನ್‌ ಹಿಂದಿತ್ತು. ಹೀಗಾಗಿ, ಯಾವುದೇ ಎಡವಟ್ಟುಗಳಿಗೆ ಅವಕಾಶ ನೀಡದೆ, ತನ್ನ ಕೊನೆಯ ಪಂದ್ಯದಲ್ಲಿ ಸೋಲಿನಿಂದ ಪಾರಾಗುವುದು ರಾಜ್ಯಕ್ಕೆ ಅನಿವಾರ್ಯ ಎನಿಸಿತ್ತು.

97 ರನ್‌ಗೆ ಇಂಗ್ಲೆಂಡ್ ಆಲೌಟ್, 150 ರನ್ ದಾಖಲೆ ಗೆಲುವಿನೊಂದಿಗೆ 4-1 ಅಂತರದಲ್ಲಿ ಸರಣಿ ವಶ

ಆದರೆ, ದೇವದತ್‌ ಪಡಿಕ್ಕಲ್‌ (43), ಕೆ.ಎಲ್‌.ಶ್ರೀಜಿತ್‌ (2), ಯಶೋವರ್ಧನ್‌ (12)ರ ವಿಕೆಟ್‌ಗಳನ್ನು ಕೇವಲ 12 ಓವರ್‌ ಅಂತರದಲ್ಲಿ ಕಳೆದುಕೊಂಡ ಕರ್ನಾಟಕ 6 ವಿಕೆಟ್‌ಗೆ 164 ರನ್‌ಗೆ ಕುಸಿಯಿತು. ಈ ಹಂತದಲ್ಲಿ ಆತಿಥೇಯ ತಂಡ ಕೇವಲ 16 ರನ್‌ ಮುನ್ನಡೆ ಹೊಂದಿತ್ತು. 7ನೇ ವಿಕೆಟ್‌ಗೆ ಸ್ಮರಣ್‌ಗೆ ಜೊತೆಯಾದ ಯುವ ಆಲ್ರೌಂಡರ್‌ ಹಾರ್ದಿಕ್‌ ರಾಜ್‌, ಅತ್ಯಮೂಲ್ಯ 98 ರನ್‌ ಜೊತೆಯಾಟದಲ್ಲಿ ಭಾಗಿಯಾದರು. ಈ ಜೋಡಿಯು ಸುಮಾರು 25 ಓವರ್‌ ಬ್ಯಾಟ್‌ ಮಾಡಿದ್ದಲ್ಲದೇ, ಒಂದೆರಡು ಗಂಟೆ ಕ್ರೀಸ್‌ನಲ್ಲಿ ನೆಲೆಯೂರಿತು. ತಂಡದ ಮೊತ್ತ 262 ರನ್‌ ಆಗಿದ್ದಾಗ ಹಾರ್ದಿಕ್‌ (40 ರನ್‌, 78 ಎಸೆತ, 4 ಬೌಂಡರಿ) ಔಟಾದರು. ಅಷ್ಟೊತ್ತಿಗೆ ಕರ್ನಾಟಕ 114 ರನ್‌ ಮುನ್ನಡೆ ಪಡೆದಿತ್ತು.

ಸ್ಮರಣ್‌ ತಂಡದ ಮುನ್ನಡೆಯನ್ನು 148 ರನ್‌ಗೆ ಹೆಚ್ಚಿಸಿದರು. ಕರ್ನಾಟಕ 8 ವಿಕೆಟ್‌ಗೆ 294 ರನ್‌ ಗಳಿಸಿದ್ದಾಗ, ಹರ್ಯಾಣ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಒಪ್ಪಿಕೊಂಡಿತು. ಸ್ಮರಣ್‌ 217 ಎಸೆತದಲ್ಲಿ 14 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 133 ರನ್‌ ಗಳಿಸಿ ಔಟಾಗದೆ ಉಳಿದರು. ಈ ಋತುವಿನಲ್ಲಿ 7 ಪಂದ್ಯಗಳನ್ನು ಆಡಿದ 21 ವರ್ಷದ ಎಡಗೈ ಬ್ಯಾಟರ್‌ 2 ಶತಕಗಳೊಂದಿಗೆ 516 ರನ್‌ ಗಳಿಸಿ, ರಾಜ್ಯದ ಪರ ಅತಿಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿದರು.

ಅಭಿಷೇಕ್ ಸೆಂಚುರಿಗೆ ಬೆಚ್ಚಿದ ಇಂಗ್ಲೆಂಡ್, 248 ಟಾರ್ಗೆಟ್ ಕೊಟ್ಟು ಹಲವು ದಾಖಲೆ ಬರೆದ ಭಾರತ

ಸ್ಕೋರ್‌: ಕರ್ನಾಟಕ 304 ಹಾಗೂ 294/8 (ಸ್ಮರಣ್‌ 133*, ರಾಹುಲ್ 43, ಪಡಿಕ್ಕಲ್‌ 43, ಅನ್ಶುಲ್‌ 3/40), ಹರ್ಯಾಣ 450/10
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!